ಹಾಲುಮತ ಶ್ರಮ, ಸಂಸ್ಕೃತಿಯ ಪ್ರತೀಕ: ಸಚಿವ ಶರಣಬಸಪ್ಪಗೌಡ ದರ್ಶನಾಪೂರ

KannadaprabhaNewsNetwork |  
Published : Jan 13, 2024, 01:34 AM IST
ಶಹಾಪುರ ತಾಲೂಕಿನ ಸೈದಾಪುರ ಗ್ರಾಮದಲ್ಲಿ ನಡೆದ ಮಾಳಿಂಗರಾಯ ಜಾತ್ರಾ ಮಹೋತ್ಸವ ಹಾಗೂ ಹಾಲುಮತ ಸಂಸ್ಕೃತಿ ವೈಭವದ ಕಾರ್ಯಕ್ರಮದಲ್ಲಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿದರು. | Kannada Prabha

ಸಾರಾಂಶ

ಸಮಾಜದ ಮಕ್ಕಳಿಗೆ ಶಿಕ್ಷಣ ಅವಶ್ಯ: ಉಸ್ತುವಾರಿ ಸಚಿವ. ಸೈದಾಪುರದಲ್ಲಿ ಮಾಳಿಂಗರಾಯ ಜಾತ್ರಾ ಮಹೋತ್ಸವ, ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಶಹಾಪುರ

ಹಾಲುಮತ ಸಮಾಜ ಶ್ರಮ, ಸಂಸ್ಕೃತಿಯ ಪ್ರತೀಕವಾಗಿದೆ. ಈ ಸಮಾಜದವರು ತಮ್ಮ ಸಾಂಸ್ಕೃತಿಕ ಪರಂಪರೆಯನ್ನು ಈಗಲೂ ಮುಂದುವರಿಸಿಕೊಂಡು ಬಂದಿದ್ದಾರೆ. ಈ ಸಮಾಜ ತನ್ನದೆಯಾದ ಸಂಸ್ಕೃತಿ ಹೊಂದಿದ್ದು, ದೇಶದ ಸಾಂಸ್ಕೃತಿಕ ಇತಿಹಾಸದಲ್ಲಿ ತನ್ನದೆಯಾದ ಮಹತ್ವ ಪಡೆದಿದೆ ಎನ್ನುವುದಕ್ಕೆ ಇಂದು ನಡೆದ ಈ ಧಾರ್ಮಿಕ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.

ತಾಲೂಕಿನ ಸೈದಾಪುರ ಗ್ರಾಮದಲ್ಲಿ ನಡೆದ ಮಾಳಿಂಗರಾಯ ಜಾತ್ರಾ ಮಹೋತ್ಸವ ಹಾಗೂ ಹಾಲುಮತ ಸಂಸ್ಕೃತಿ ವೈಭವದ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಈ ಗ್ರಾಮದಲ್ಲಿ ಪ್ರತಿ ವರ್ಷ ಅತ್ಯಂತ ವಿಜೃಂಭಣೆಯಿಂದ ಬಹು ವಿಶಿಷ್ಟವಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಜಾತ್ರಾ ಸಮಯದಲ್ಲಿ ಸಪ್ತ ಪಲ್ಲಕ್ಕಿಗಳ ಆಗಮನ. ಹಾಲುಮತ ಜಾತ್ರೆಗೆ ಮೆರಗನ್ನು ತಂದಿದೆ. ಈ ಸಮಾಜದ ಪ್ರತಿಯೊಬ್ಬರು ಮೊದಲು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಅತ್ಯಂತ ಅವಶ್ಯಕವಾಗಿದೆ. ಹಿಂದುಳಿದಿರುವ ಈ ಸಮಾಜದಲ್ಲಿ ಒಗ್ಗಟ್ಟು ಮತ್ತು ಮುಂದೆ ತರಲು ಈ ಧಾರ್ಮಿಕ ಕಾರ್ಯ ಸಹಕಾರಿಯಾಗಿದೆ ಎಂದರು.

ತಾಲೂಕು ಕುರುಬ ಸಂಘದ ಅಧ್ಯಕ್ಷ ಡಾ. ಭೀಮಣ್ಣ ಮೇಟಿ ಮಾತನಾಡಿ, ಕಾಯಕವೇ ಕೈಲಾಸವೆಂದು ನಂಬಿ ಕೃಷಿ, ಕುರಿ ಸಾಕಾಣಿಕೆ, ಪಶು ಸಂಗೋಪನೆಯಲ್ಲಿ ತೊಡಗಿರುವ ಹಾಲಿನಂತ ಮನಸ್ಸುಳ್ಳ ನಮ್ಮ ಸಮಾಜದ ಸಂಸ್ಕೃತಿ ಶ್ರೇಷ್ಠವಾಗಿದೆ. ಈ ದೇಶಕ್ಕೆ, ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಹಾಲುಮತ ಸಮಾಜ ಸರ್ವ ಶ್ರೇಷ್ಠ ಸಮಾಜವಾಗಿದೆ. ಈ ಜಾತ್ರಾ ಮಹೋತ್ಸವ ಹಾಗೂ ಹಾಲುಮತ ಸಂಸ್ಕೃತಿ ವೈಭವ ಯಶಸ್ವಿಯಾಗಲು ಪ್ರತಿಯೊಬ್ಬರ ಸಹಾಯ ಸಹಕಾರ ಅಗತ್ಯವಾಗಿದೆ ಎಂದರು.

ಕೈಲಾಸ ಆಶ್ರಮ ಹೋತಪೇಠದ ಪೀಠಾಧಿಪತಿ ಶಿವಲಿಂಗ ಶರಣರು, ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮರಿಗೌಡ ಹುಲಕಲ್, ಮಹಾದೇವಪ್ಪ ಪೂಜಾರಿ ಸೈದಾಪುರ, ದೇವು ಗಂಗನಾಳ, ಮಲ್ಲಣ್ಣಗೌಡ ಮಾಲಿ ಪಾಟೀಲ್, ಭೀಮಣ್ಣಗೌಡ ಪಾಟೀಲ್, ಶರಣಪ್ಪ ಸನ್ನತಿ, ನಾನೇಗೌಡ ಮೇಟಿ, ದೇವಿಂದ್ರಪ್ಪ ಮೇಟಿ, ಶರಣಗೌಡ, ಪರ್ವತರಡ್ಡಿ ಪೊಲೀಸ್ ಪಾಟೀಲ್, ಮಹಲರೋಜ ಗಂಗನಾಳ ಸಗರ ಪಲ್ಲಕ್ಕಿಗಳ ಪಟ್ಟದ ಪೂಜಾರಿಗಳು ಸೇರಿದಂತೆ ಇತರರಿದ್ದರು. ಚಂದ್ರಶೇಖರ ಕರ್ನಾಳ ನೆರವೇರಿಸಿದರು.

ಫೆ.24ರೊಳಗೆ ರಾಯಣ್ಣನ ಮೂರ್ತಿ ಲೋಕಾರ್ಪಣೆ

ಸುಮಾರು 24 ಲಕ್ಷ ರು. ಗಳ ಸ್ವಂತ ವೆಚ್ಚದಲ್ಲಿ 18 ಅಡಿ ಎತ್ತರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಈಗಾಗಲೇ ಶಹಾಪುರ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಟೌನ್ ಹಾಲ್‌ನ ಮುಂದುಗಡೆ ನಿಲ್ಲಿಸಲಾಗಿದೆ.

ಅಲ್ಲದೆ ಟೌನ್ ಹಾಲ್‌ಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಭಾಭವನ ಎಂದು ನಾಮಕರಣ ಸಹ ಮಾಡಲಾಗಿದೆ. ಬರುವ ಫೆ.24ರೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಲಕ ಈ ಮೂರ್ತಿಯನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ತಿಳಿಸಿದರು.

ಹಾಲುಮತದ ಕಲ್ಯಾಣ ಮಂಟಪಕ್ಕಾಗಿ ನಗರ ಹೊರ ವಲಯದ ಕನ್ಯಾಕೋಳೂರು ಹಾಸ್ಟೆಲ್‌ಗಳ ಸಂಕೀರ್ಣ ಬಳಿ 20 ಸಾವಿರ ಚದರಡಿ ಸಿ.ಎ ಸೈಟಿದೆ. ಅದನ್ನು ಹಾಲುಮತ ಸಮುದಾಯದವರು ಖರೀದಿಸಿದರೆ ಕಲ್ಯಾಣ ಮಂಟಪಕ್ಕೆ 1 ರಿಂದ 1.50 ಕೋಟಿ ರು. ಗಳ ಅನುದಾನ ಒದಗಿಸಿಕೊಡುವ ಕೆಲಸ ಮಾಡುತ್ತೇನೆ. ಈ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.ಸಸ

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ