ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಪಿಡಿಎಸ್ ಅಂಗಡಿಗಳ ಎದುರು ಫಲಾನುಭವಿಗಳು ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಹೊಸ ಸರ್ವರ್ನಲ್ಲಿ ಡೇಟಾ ಲಭ್ಯವಿಲ್ಲದ್ದು ಒಂದು ಸಮಸ್ಯೆವಾದರೇ, ಸರ್ವರ್ನದ್ದು ಇನ್ನೊಂದು ಸಮಸ್ಯೆ. ಸರದಿ ಸಾಲಿನಲ್ಲಿ ನಿಂತರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ತಮ್ಮ ಸರದಿ ಬಂತೆಂದು ಖುಷಿಯಾದ ಪಡಿತರ ಚೀಟಿದಾರರಿಗೆ ಸರ್ವರ್ ಕೈಕೊಡುತ್ತಿರುವುದರಿಂದ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮರಳಿ ತಮ್ಮ ಮನೆಗಳತ್ತ ಹೋಗುವಂತಾಗಿದೆ.
ರಾಷ್ಟ್ರೀಯ ಮಾಹಿತಿ ಕೇಂದ್ರದ ಸರ್ವರ್ನಲ್ಲಿ ಸೃಷ್ಟಿಯಾದ ಹಲವು ಸಮಸ್ಯೆಗಳಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೊಸ ಸರ್ವರ್ ಅನ್ನು ಕರ್ನಾಟಕ ಸ್ಟೇಟ್ ಡೇಟಾ ಸೆಂಟರ್(ಕೆಎಸ್ಡಿಸಿ)ಗೆ ಸ್ಥಳಾಂತರಿಸಲಾಗಿದೆ. ಹೀಗಾಗಿ ಪಡಿತರ ವಿತರಣೆಯಲ್ಲಿ ವಿಳಂಬಕ್ಕೆ ಕಾರಣ ಎನ್ನುವ ತಾಂತ್ರಿಕ ತೊಂದರೆಗೆ ಪಡಿತದಾರರನ್ನು ಹೈರಾಣಾಗುವಂತೆ ಮಾಡಿದೆ.ಪಡಿತರ ಕೇಂದ್ರದಲ್ಲಿ ನಿತ್ಯವೂ ವಾಗ್ವಾದ!:
ಫಲಾನುಭವಿಗಳು ಹೈರಾಣು: ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಈ ಹಿಂದೆ ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ಪಡಿತರ ಚೀಟಿ ವಿತರಣೆ ಹಾಗೂ ಅರ್ಜಿ ಸ್ವೀಕಾರ ಸ್ಥಗಿತ ಮಾಡಿ ತದನಂತರದಲ್ಲಿ ಪರಿಷ್ಕರಣೆ ಹಾಗೂ ತಿದ್ದುಪಡಿಗೆ ಅವಕಾಶ ನೀಡಿದಾಗಲೂ ಸರ್ವರ್ ಸಮಸ್ಯೆಯಿಂದಾಗಿ ಫಲಾನುಭವಿಗಳು ಹೈರಾಣಾಗಿದ್ದಾರೆ. ಸದ್ಯ ಪಡಿತರ ವಿತರಣೆಯಲ್ಲಿ ಮತ್ತೆ ಅದೇ ಸಮಸ್ಯೆ ಸರ್ವರ್ ಸಮಸ್ಯೆ ಮುಂದುವರೆದಿದ್ದು ಈ ಬಾರಿ ಜನಾಕ್ರೋಶಕ್ಕೆ ಕಾರಣವಾಗಿದೆ.
ಬೆಳಗ್ಗೆಯೇ ಸಾಲುಗಟ್ಟಿ ನಿಂತರೂ ಸಿಗುವ ಖಾತರಿಯಿಲ್ಲ: ಆಹಾರ ಇಲಾಖೆ ಪಡಿತರ ವಿತರಕರಿಗೆ ಸೂಚನೆ ನೀಡಿದಂತೆ ಪಡಿತರ ಅಂಗಡಿಗಳಲ್ಲಿ ಬೆಳಗ್ಗೆ 7 ರಿಂದ ರಾತ್ರಿ 10 ಗಂಟೆ ತನಕ ಪಡಿತರ ವಿತರಣೆ ಮಾಡಬೇಕಿದೆ. ನಿತ್ಯ ಬೆಳಗ್ಗೆ 7 ಗಂಟೆಗೆ ಪಡಿತರ ವಿತರಣಾ ಕೇಂದ್ರಕ್ಕೆ ಸಾಲುಗಟ್ಟಿ ನಿಂತರೂ ಪಡಿತರ ಆಹಾರ ಸಿಗುತ್ತದೆ ಎನ್ನುವುದು ಮಾತ್ರ ಖಾತರಿ ಇಲ್ಲ. ಕೇವಲ 5 ರಿಂದ 10 ಜನರಿಗೆ ಮಾತ್ರ ಸಿಕ್ಕರೇ ಸಿಗುತ್ತದೆ. ಇಲ್ಲವಾದರೇ ಇಲ್ಲ. ಮತ್ತೆ ಮರುದಿನ ಬೆಳಗ್ಗೆ ಸಾಲುಗಟ್ಟಿ ನಿಲ್ಲಲೇ ಬೇಕಾಗಿರುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಫಲಾನುಭವಿಗಳು ದಿಕ್ಕು ತೋಚದೆ ಕಂಗಾಲಾಗಿದ್ದಾರೆ.ಪಡಿತರ ಧಾನ್ಯ ವಿತರಣೆ ಹಾಗೂ ಪಡಿತರ ಚೀಟಿ ಪರಿಷ್ಕರಣೆ, ತಿದ್ದುಪಡಿ ಕಾರ್ಯ ಏಕಕಾಲಕ್ಕೆ ನಡೆಯುತ್ತಿರುದೆ. ಹಾಗಾಗಿ, ಕಾರ್ಯದ ಒತ್ತಡದಿಂದ ಸರ್ವರ್ ಹ್ಯಾಂಗ್ ಆಗಿದೆ. ಇನ್ನೇರಡು ದಿನದಲ್ಲಿ ಈ ಸಮಸ್ಯೆಯನ್ನು ಸರಿಪಡಿಸಲಾಗುತ್ತದೆ ಪಡಿತರ ಚೀಟಿದಾರರು ಭಯಪಡುವ ಅಗತ್ಯಇಲ್ಲ.
-ಮಲ್ಲಿಕಾರ್ಜುನ ನಾಯಕ, ಬೆಳಗಾವಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕರು.ರೇಷನ್ಗಾಗಿಕೆಲಸಕ್ಕೂ ಹೋಗದೆ ಬೆಳಗ್ಗೆ 8 ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದೇನೆ.11 ಗಂಟೆಯಾದರೂ ರೇಷನ್ ಸಿಗುತ್ತಿಲ್ಲ. ದಿನವೂ ಬರುವುದು, ಹೋಗುವುದು ಆಗಿದೆ. ದೀಪಾವಳಿ ಹಬ್ಬ ಇನ್ನೇನೂ ಬರುತ್ತಿದ್ದು, ಹಬ್ಬದ ತಯಾರಿಗಿಂತ ರೇಷನ್ ತರೋದು, ರೇಷನ್ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವುದೇ ಒಂದು ದೊಡ್ಡ ಹಬ್ಬ ಎನ್ನುವಂತಾಗಿದೆ. ಸರ್ವರ್ ಸಮಸ್ಯೆಯನ್ನು ಕೂಡಲೇ ಪರಿಹರಿಸಿ, ಸರಾಗವಾಗಿ ಪಡಿತರ ವಿತರಣೆಯಾಗಬೇಕು.