ಸಮನ್ವಯತೆ ಸರ್ವ ಧರ್ಮಗಳ ಸದಾಶಯ: ಬಂಡಿಗಣಿ ಶ್ರೀ

KannadaprabhaNewsNetwork |  
Published : Apr 01, 2025, 12:47 AM IST
ಸಮನ್ವಯತೆ ಸರ್ವ ಧವiðಗಳ ಸದಾಶಯ : ಬಂಡಿಗಣಿಶ್ರೀ. | Kannada Prabha

ಸಾರಾಂಶ

ಸತ್ಯ, ಶುದ್ಧ ತತ್ವದ ತಳಹದಿ ಮೇಲೆ ಸಮಾಜ ಬೆಳೆಸುವುದೇ ಧರ್ಮಗಳ ಗುರಿ. ಧರ್ಮದ ದಿಕ್ಸೂಚಿ ಎಲ್ಲರ ಬಾಳಿಗೆ ಬೆಳಕು ನೀಡುತ್ತದೆ. ಸದಾಕಾಲ ಪರೋಪಕಾರ, ಸಮಾಜಪರ ಚಿಂತನೆ, ಸತ್ಕಾರ್ಯದಲ್ಲಿ ತೊಡಗಿಕೊಂಡರೆ ಸಮಾಜ ನಮ್ಮನ್ನು ಗುರ್ತಿಸುತ್ತದೆ ಎಂದು ಬಂಡಿಗಣಿ ಬಸವಗೋಪಾಲ ನೀಲಮಾಣಿಕಮಠದ ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಸತ್ಯ, ಶುದ್ಧ ತತ್ವದ ತಳಹದಿ ಮೇಲೆ ಸಮಾಜ ಬೆಳೆಸುವುದೇ ಧರ್ಮಗಳ ಗುರಿ. ಧರ್ಮದ ದಿಕ್ಸೂಚಿ ಎಲ್ಲರ ಬಾಳಿಗೆ ಬೆಳಕು ನೀಡುತ್ತದೆ. ಸದಾಕಾಲ ಪರೋಪಕಾರ, ಸಮಾಜಪರ ಚಿಂತನೆ, ಸತ್ಕಾರ್ಯದಲ್ಲಿ ತೊಡಗಿಕೊಂಡರೆ ಸಮಾಜ ನಮ್ಮನ್ನು ಗುರ್ತಿಸುತ್ತದೆ ಎಂದು ಬಂಡಿಗಣಿ ಬಸವಗೋಪಾಲ ನೀಲಮಾಣಿಕಮಠದ ಚಕ್ರವರ್ತಿ ದಾನೇಶ್ವರ ಶ್ರೀಗಳು ಹೇಳಿದರು.

ಸೋಮವಾರ ಬಂಡಿಗಣಿಯಲ್ಲಿ ಜರುಗಿದ ಸರ್ವ-ಧರ್ಮ ಸಮನ್ವಯತೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿಮಾತನಾಡಿ, ಧರ್ಮ ಮಾರ್ಗದಲ್ಲಿ ನಡೆಯಲು ಧಾರ್ಮಿಕ ಕಾರ್ಯಕ್ರಮಗಳು ಅಗತ್ಯ. ಈ ಮೂಲಕ ಪ್ರತಿಯೊಬ್ಬರೂ ಸಾರ್ಥಕ ಬದುಕು ಸಾಗಿಸಲು ಮತ್ತು ಸದ್ಬಾವನೆ ಬೆಳೆಸಿಕೊಳ್ಳಲು ಸಾಧ್ಯವೆಂದರು.

ಧರ್ಮದಲ್ಲಿ ಆಚರಣೆಗಳು ಭಿನ್ನವಾದರೂ ಕೊನೆಗೆ ಸೇರುವ ಗುರಿ ಮಾತ್ರ ಒಂದೇ. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕತ್ತಿ, ಬೋಧನೆಗಿಂತ ಸಾಧನೆ, ವ್ಯಕ್ತಿನಿಷ್ಠೆಗಿಂತ ತತ್ವನಿಷ್ಠೆ ಅಳವಡಿಸಿಕೊಂಡು ಧಾರ್ಮಿಕ ತಳಹದಿ ಸಂಸ್ಕಾರಭರಿತ ಸಮಾಜ ರೂಪುಗೊಳ್ಳಬೇಕು, ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಹಲವಾರು ಧರ್ಮಗಳಜನರು ಒಂದೇ ಸೂರಿನಡಿ ಸೌಹಾರ್ದತೆಯಿಂದ ಬದುಕುತ್ತಿದ್ದು, ಇದು ಸಂಸ್ಕೃತಿಯ ಮೂಲವೆಂದರು. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಮನಸ್ಸಿನಲ್ಲಿ ಸಮಭಾವ ಬೆಳೆಸುವ ಕೆಲಸವನ್ನು ಮಠ ನಿತ್ಯ ಮಾಡುತ್ತಿದೆಯೆಂದರು.

ಜಿಪಂ ಅಧಿಕಾರಿ ಭೀಮಣ್ಣ ತಳವಾರ ಮಾತನಾಡಿ, ಆಶೀರ್ವವಚನ, ಸತ್ಕಾರ್ಯ, ಸೇವೆ, ದಾನಗಳಲ್ಲಿ ದೇವರನ್ನು ಕಾಣಬೇಕು. ಸಾತ್ವಿಕತೆ, ಸಂಸ್ಕಾರಗಳ ಮೂಲಕ ಭಾರತ ಜಗತ್ತಿಗೆ ಜಗದ್ಗುರುವಾಗಿದೆ. ಭಾರತೀಯರೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕುವ ಸನ್ನಿವೇಶವನ್ನು ಧಾರ್ಮಿಕ ಸಂದೇಶಗಳು ಸೃಷ್ಟಿಸುತ್ತವೆಯೆಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''