ಕನ್ನಡಪ್ರಭ ವಾರ್ತೆ ಮಸ್ಕಿ
ಆರ್.ಬಸನಗೌಡ ತುರವಿಹಾಳ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗೋರಸೇನಾ ಜಿಲ್ಲಾ ಉಪಾಧ್ಯಕ್ಷ ನರೇಶ ಜಾಧವ, ಅವರು ಮಾತನಾಡಿ, ಲಂಬಾಣಿ, ಭೋವಿ, ಕೊರಮ-ಕೊರಚ ಸಮುದಾಯವನ್ನು ಮುಖ್ಯ ವಾಹಿನಿ ಯಿಂದ ಹಿಂದಿಕ್ಕಬೇಕೆಂಬ ಹುನ್ನಾರದಿಂದ, ಜಾತಿ-ಜಾತಿಗಳ ಮಧ್ಯೆ ಜಗಳ ಹಚ್ಚಲು, ಪರಿಶಿಷ್ಟರ ಜಾತಿಗಳ ವರ್ಗಿಕರಣ ಮಾಡುವುದಕ್ಕೆ ಮುಂದಾಗಿದ್ದಾರೆ. ಪರಿಶಿಷ್ಟ ಜಾತಿಯಲ್ಲಿನ ಎಲ್ಲಾ ಸಮುದಾಯಗಳ ಸರಿಯಾದ ಅಧ್ಯಯನ ಇಲ್ಲದೇ ಮತ್ತು ವೈಜ್ಞಾನಿಕವಾಗಿ ದತ್ತಾಂಶವನ್ನು ಸಂಗ್ರಹಿಸದೇ ತರಾತುರಿಯಲ್ಲಿ ಹೀಗೆ ನಿರ್ಧಾರ ತಗೆದುಕೊಳ್ಳಬಾರದು. ೯೯ ಜಾತಿಗಳ ಜನರ ಶಿಕ್ಷಣ, ರಾಜಕೀಯ ಸ್ಥಾನಮಾನ, ಮತ್ತು ಸಾಮಾಜಿಕ ವ್ಯವಸ್ಥೆಯ ನಿಖರ ಅಂಕಿ-ಅಂಶಗಳನ್ನು ಒಳಗೊಂಡ ದತ್ತಾಂಶವನ್ನು ಆಧರಿಸದೆ ಒಳ ಮೀಸಲು ಹಂಚಿಕೆ ನಿರ್ಧಾರ ಸೂಕ್ತವಲ್ಲ, ನ.೨೮ರಂದು ನಡೆಯುವ ಸಚಿವ ಸಂಪುಟದಲ್ಲಿ ಒಳ ಮೀಸಲು ಜಾರಿ ಮಾಡಲು ಮುಂದಾಗಬಾರದು. ಒಂದು ವೇಳೆನಿರ್ಧಾರ ತಗೆದುಕೊಂಡರೆ ಮುಂಬರುವ ವಿಧಾನಸಭೆ ಉಪ ಚುನಾವಣೆಯಲ್ಲಿ ೯೯ ಸಮುದಾಯದವರು ಒಂದಾಗಿ ಚುನಾವಣೆಯಲ್ಲಿ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.