ಗದಗ: 2024ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗೆದ್ದು ಕೇಂದ್ರ ಸಚಿವರಾದರೆ ಗದಗಿನ ಪುಟ್ಟರಾಜ ಗವಾಯಿಗಳ ಭಕ್ತರಿಗೆ ಹೋಳಿಗೆ ಊಟ ಹಾಕಿಸುವುದಾಗಿ ಹರಕೆ ಹೊತ್ತಿದ್ದ ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್.ಗೋವಿಂದಗೌಡ್ರ, ಇದೇ 18 ರಂದು ಆ ಹರಕೆ ತೀರಿಸಲು ಮುಂದಾಗಿದ್ದಾರೆ.ಎಚ್ಡಿಕೆ ಗೆಲುವು ಸಾಧಿಸಿ ಕೇಂದ್ರ ಮಂತ್ರಿಯೂ ಆಗಿದ್ದರಿಂದ, ಗುರು ಪುಟ್ಟರಾಜ ಗವಾಯಿಗಳಿಗೆ ಹರಕೆ ಹೊತ್ತಂತೆ ಗದಗಿನ ಮಠದಲ್ಲಿ ಹೋಳಿಗೆ ಪ್ರಸಾದದ ವ್ಯವಸ್ಥೆ ಮಾಡಿರುವುದಾಗಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜ ಅಪ್ಪಣ್ಣವರ, ಎಂ.ಎಸ್. ಪರ್ವತಗೌಡ್ರ, ರಮೇಶ್ ಹುಣಸಿಮರದ, ಮರಿಯಪ್ಪ ಬಳ್ಳಾರಿ, ಪ್ರಫೂಲ್ ಪುಣೇಕರ ಉಪಸ್ಥಿತರಿದ್ದರು.
ಅಭಿಪ್ರಾಯ ಸಂಗ್ರಹ: ಗದಗ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆ ಸ್ಥಾಪಿಸಬೇಕೆಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದು. ಇದಕ್ಕೆ ಅವರು ಪೂರಕವಾಗಿ ಸ್ಪಂದಿಸಿದ್ದಾರೆ. ಅದಕ್ಕಾಗಿ ಗದಗ ಜಿಲ್ಲೆಯಲ್ಲಿ ಯಾವ ರೀತಿಯ ಕೈಗಾರಿಕೆ ಸ್ಥಾಪನೆ ಮಾಡಬೇಕು, ಯಾವುದು ಮಾಡಿದರೆ ಸೂಕ್ತ ಎನ್ನುವ ಬಗ್ಗೆ ಸಾರ್ವಜನಿಕರಿಂದ ಹೆಚ್ಚಿನ ಅಭಿಪ್ರಾಯ ಸಂಗ್ರಹಿಸಲಾಗುವುದು. ಸಾರ್ವಜನಿಕರು ಈ ಅಭಿಯಾನದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ವ್ಯಾಟ್ಸಪ್ ಹಾಗೂ ಇಮೇಲ್ ಮುಖಾಂತರ ಅಭಿಪ್ರಾಯ ಕಳಿಸಬೇಕು. ಅದಕ್ಕಾಗಿ ಸಾರ್ವಜನಿಕರು ಈ ಕೆಳಕಂಡ ವಿಳಾಸಕ್ಕೆ ತಮ್ಮ ಮಾಹಿತಿಯನ್ನು ಜು.20ರ ಒಳಗೆ ಸಲ್ಲಿಸಬೇಕು ಎಂದು ಗೋವಿಂದಗೌಡ್ರ ವಿನಂತಿಸಿದರು.whatsapp: 8495900009
email: youngindia@gmail.com