ಎಸ್ಸೆಸ್ಸೆಲ್ಸಿ ಪರೀಕ್ಷೆ-2ರ ಸಿದ್ಧತೆಗೆ ಮುಖ್ಯಸ್ಥರ ಕಸರತ್ತು

KannadaprabhaNewsNetwork |  
Published : May 16, 2025, 01:59 AM IST
ಚಿತ್ರ ಶೀರ್ಷಿಕೆ- ಆಳಂದ ಸ್ಕೂಲ್‌ಆಳಂದ: ಧುತ್ತರಗಾಂವ ಸರ್ಕಾರಿ ಪ್ರೌಢಶಾಲೆಯಲ್ಲಿ ಅನ್ನುತ್ತಿರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಮುಖ್ಯ ಶಿಕ್ಷಕ ಮರೆಪ್ಪ ಬಡಿಗೇರ ನೇತೃತ್ವದಲ್ಲಿ ಸಾಗಿದೆ. | Kannada Prabha

ಸಾರಾಂಶ

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆ ರಾಜ್ಯದ ಕೊನೆಯ ಸ್ಥಾನಕ್ಕೆ ಕುಸಿದಂತೆ ಆಳಂದ ತಾಲೂಕಿನಲ್ಲೂ ಫಲಿತಾಂಶದಲ್ಲಿ ತೀವ್ರ ಕುಸಿತ ಕಂಡಿದೆ.

ಕನ್ನಡಪ್ರಭ ವಾರ್ತೆ ಆಳಂದ

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆ ರಾಜ್ಯದ ಕೊನೆಯ ಸ್ಥಾನಕ್ಕೆ ಕುಸಿದಂತೆ ಆಳಂದ ತಾಲೂಕಿನಲ್ಲೂ ಫಲಿತಾಂಶದಲ್ಲಿ ತೀವ್ರ ಕುಸಿತ ಕಂಡಿದೆ.

ಕಳೆದ ಸಾಲಿನಲ್ಲಿ ಶೇ 61 ಪ್ರತಿಶತ ಫಲಿತಾಂಶ ತಂದುಕೊಂಡರೆ ಈ ವರ್ಷ ಶೇ. 40.11 ಫಲಿತಾಂಶ ಪಡೆದು 21 ಪ್ರತಿಶತ ಹಿನ್ನೆಡೆ ಅನುಭವಿಸಿದೆ.

ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ-2475 ಹಾಗೂ ವಿದ್ಯಾರ್ಥಿನಿಯರ ಸಂಖ್ಯೆ 2351 ಹಾಜರಾಗಿದ್ದು ಸೇರಿ ಒಟ್ಟು 4812 ವಿದ್ಯಾರ್ಥಿಗಳಲ್ಲಿ 753 ವಿದ್ಯಾರ್ಥಿಗಳು ಮತ್ತು 1183 ವಿದ್ಯಾರ್ಥಿನಿಯರು ಸೇರಿ 1936 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು ಶೇ 30.42 ಪ್ರತಿಶತ ಪಾಸಾದರೆ ವಿದ್ಯಾರ್ಥಿನಿಯರು ಶೇ 50.32ರಷ್ಟು ಸಂಖ್ಯೆಯಲ್ಲಿ ಪಾಸಾಗಿದ್ದು, ಒಟ್ಟಾರೆಯಾಗಿ ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ 40.11ರಷ್ಟು ಪಡೆದುಕೊಂಡಿದೆ ಎಂದು ಇಲಾಖೆಯ ಮೂಲಗಳು ದೃಢಪಡಿಸಿವೆ. ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳ ಪಾಸಾದ ಮಕ್ಕಳು ಹೆಚ್ಚು ಅಂಕಪಡೆದಿದ್ದಾರೆ.

ವಿಶೇಷ ತರಗತಿಗೆ ಮಕ್ಕಳ ನಿರಾಸಕ್ತಿ:

ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿ ಪರೀಕ್ಷೆಯಲ್ಲಿ ಪಾಸಾಗುವಂತೆ ನೋಡಿಕೊಳ್ಳಬೇಕು ಎಂದು ಆಯಾ ಶಾಲಾ ಮುಖ್ಯ ಶಿಕ್ಷಕರಿಗೆ ಕಲಬುರಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರಾಯುಕ್ತರು ಆದೇಶಿಸಿದ್ದಾರೆ. ಆಯಾ ಶಾಲೆಗಳಲ್ಲಿ ಶಿಕ್ಷಕರು ಸಿದ್ಧಗೊಂಡಿದ್ದಾರೆ. ಆದರೆ, ಈ ತರಬೇತಿಗೆ ಮಕ್ಕಳ ಬಾರದೇ ನಿರುತ್ಸಾ ತೋರಿದ್ದು ಕಂಡುಬಂದಿದೆ. ಕೆಲವಡೆ ಮಕ್ಕಳು ಹಾಜರಾಗುತ್ತಿದ್ದಾರೆ.

-----------

ಪರೀಕ್ಷೆಯಲ್ಲಿ ವ್ಯಾಬ್‍ಕಾಸ್ಟಿಂಗ್ ಅಳವಡಿಕೆ ಪ್ರಾಥಮಿಕ ಹಂತದ ಶಿಕ್ಷಣದಲ್ಲೂ ಕಲಿಕೆಯ ಗುಣಮಟ್ಟತೆಯ ಕೊರತೆ, ಹಲವು ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ಕೊರತೆ, ಸರ್ಕಾರದ ಹಲವು ಕಾರ್ಯಕ್ರಮ ಮತ್ತು ಅತಿ ಹೆಚ್ಚು ತರಬೇತಿ, ಸಭೆಗಳಿಂದಲೂ ಮಕ್ಕಳಿಗೆ ನಿರೀಕ್ಷಿತ ಪಾಠಮಾಡವುದಕ್ಕೆ ಕೊಂಚ ಹಿಂದೇಟು, ಜೊತೆಗೆ ಮಕ್ಕಳ ಮತ್ತು ಪಾಲಕರು ನಿರೀಕ್ಷಿತ ಮಟ್ಟದಲ್ಲಿ ಆಸಕ್ತಿ ವಹಿಸದಿರುವುದು ಒಳಗೊಂಡಿರುತ್ತದೆ.

ಮರೆಪ್ಪ ಬಡಿಗೇರ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರು ಆಳಂದ.

----------

1 ರಿಂದ 5ನೇ ತರಗತಿಗೆ ಕಳೆದ 30ವರ್ಷಗಳಿಂದ ಶಿಕ್ಷಕರ ನೇಮಕಾತಿ ಆಗಿಲ್ಲ. ಮೊದಲು ಶಿಕ್ಷಕರ ನೇಮಕಾತಿ ಆಗಬೇಕು. ಕಳೆದ ಸಾಲಿನಲ್ಲಿ 5ಸಾವಿರ ಶಿಕ್ಷಕರು ಈ ಭಾಗದಿಂದ ವರ್ಗಾವಣೆಯಾಗಿದ್ದಾರೆ. ಇದನ್ನು ತುಂಬುವ ಕಾರ್ಯಮಾಡಬೇಕು. ಪ್ರಾಥಮಿಕ ಹಂತದಲ್ಲಿ ಗುಣಮಟ್ಟದ ಶಿಕ್ಷಕರ ನೇಮಿಸಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ಕೊಡುವಂತಾಗಲಿ, ಬಿಸಿಯೂಟ ಮಾತ್ರ ಜಾರಿಯಲ್ಲಿಟ್ಟು, ತರಬೇತಿಗಳನ್ನು ರದ್ದುಗೊಳಿಸಿ ಶಿಕ್ಷಕರ ಪೂರ್ಣ ಸಮಯವನ್ನು ಮಕ್ಕಳೊಂದಿಗೆ ಶಾಲೆಯಲ್ಲೇ ಕಳೆಯುವಂತಾದರೆ, ಪ್ರೌಢಹಂತದ 10ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಬೇಕು.

ಹಣಮಂತ ಶೇರಿ ಕಸಾಪ ಅಧ್ಯಕ್ಷ ಆಳಂದ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಯೊಬ್ಬರೂ ಗ್ರಾಹಕರ ಹಕ್ಕುಗಳ ಮಹತ್ವ ತಿಳಿದುಕೊಳ್ಳಲಿ: ಅಪರ ಜಿಲ್ಲಾಧಿಕಾರಿ
ಸ್ಮಶಾನದ ಅಭಿವೃದ್ಧಿ ಕಾಮಗಾರಿ ತ್ವರಿತಗೊಳಿಸಲು ಆಗ್ರಹ