- ಹೊನ್ನಾಳಿಯಲ್ಲಿ ಐದು ದಿನಗಳ ಹಲಸು, ಆಹಾರ ಮೇಳ ಕಾರ್ಯಕ್ರಮ ಉದ್ಘಾಟನೆ
ಕನ್ನಡಪ್ರಭಾ ವಾರ್ತೆ ಹೊನ್ನಾಳಿ
ನೈಸರ್ಗಿಕ ಹಾಗೂ ಸಾವಯವ ಕೃಷಿಯ ಬೆಳೆ, ಆಹಾರಗಳು, ಹಣ್ಣುಗಳು ಮನುಷ್ಯನ ಆರೋಗ್ಯ ವೃದ್ಧಿಸುತ್ತವೆ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಬುಧವಾರ ಹಿರೇಕಲ್ಮಠದಲ್ಲಿ ಶ್ರೀ ಚನ್ನಪ್ಪ ಸ್ವಾಮಿ ಜನಕಲ್ಯಾಣ ಸೇವಾ ಟ್ರಸ್ಟ್, ಶ್ರೀ ಚನ್ನಪ್ಪ ಸ್ವಾಮಿ ಸೌಹಾರ್ದ ಸಹಕಾರಿ ಸಂಘದ ಸಹಯೋಗದಲ್ಲಿ ಆದಿಶಂಕರ ಈವೆಂಟ್ ಕ್ರಿಯೇಷನ್ಸ್ ವತಿಯಿಂದ ಜುಲೈ 29ರಿಂದ ಆಗಸ್ಟ್ 2 ರವರೆಗೆ 5 ದಿನಗಳ ಕಾಲ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಏರ್ಪಡಿಸಿರುವ ಹಲಸು ಹಾಗೂ ಆಹಾರ ಮೇಳ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಪುತ್ರ, ಶಿವಮೊಗ್ಗ ಜಿ.ಪಂ. ಮಾಜಿ ಸದಸ್ಯ ಕಾಂತೇಶ್ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಪಿಜ್ಜಾ, ಬರ್ಗರ್ ಬಿಡಿ, ಪ್ರಕೃತಿದತ್ತ ಹಣ್ಣು, ಆಹಾರಗಳನ್ನು ಸೇವಿಸಬೇಕು. ಹಿಂದಿನ ಕಾಲದಲ್ಲಿ ಜನರು ಕೇವಲ ಮನೆಯಲ್ಲಿ ಮಾಡಿದ ಆರೋಗ್ಯಯುತ, ಸತ್ವಯುತ ಆಹಾರಗಳ ಮಾತ್ರ ಸೇವಿಸುತ್ತಿದ್ದರು. ಈ ಕಾರಣಕ್ಕೆ ಅವರು ನೂರಾರು ವರ್ಷ ಅರೋಗ್ಯವಾಗಿ ಬದುಕಿ ಬಾಳಿದ್ದಾರೆ ಎಂದರು.
ಮೇಳದಲ್ಲಿ ಹಲಸಿನ ಹಣ್ಣುಗಳು, ಅದರ ವಿವಿಧ ಖಾದ್ಯಗಳು ಮಾತ್ರವಲ್ಲದೆ ವಿವಿಧ ಬಗೆಯ ಹಣ್ಣಿನ ಹಾಗೂ ಹೂವುಗಳ ಗಿಡಗಳು, ದೇಶಿಯ ಆಹಾರ ಪದಾರ್ಥಗಳು, ರೇಷ್ಮೆ ಸೀರೆಗಳು, ನಿತ್ಯಬಳಕೆ ವಸ್ತುಗಳು, ಸಾವಯವ, ಸಿರಿಧ್ಯಾನಗಳ ಪ್ರದರ್ಶನ, ಮಾರಾಟ ವ್ಯವಸ್ಥೆ ಮಾಡಲಾಗಿತ್ತು,
- - -