ಶ್ರೀವಿದ್ಯಾ ಸಕಲೇಶಪುರ ಕನ್ನಡಪ್ರಭ ವಾರ್ತೆ ಸಕಲೇಶಪುರ
ಸಾಮಾನ್ಯವಾಗಿ ಸೂಕ್ಷ್ಮಬೆಳೆಯಾಗಿರುವ ರೊಬೋಸ್ಟಾ ಕಾಫಿಗೆ ಫೆಬ್ರವರಿ ತಿಂಗಳಿನಿಂದ ಹದಮಳೆಯ ಅವಶ್ಯಕತೆ ಇದ್ದು, ಪ್ರತಿ ೨೦ ದಿನಕ್ಕೊಮ್ಮೆ ಮಳೆಯಾದರೆ ರೊಬೋಸ್ಟಾ ತೋಟಗಳಲ್ಲಿ ಉತ್ತಮ ಫಸಲು ನಿರೀಕ್ಷಿಸಬಹುದು. ಆದರೆ, ಕಾಫಿ ಕೊಯ್ಲಿನ ನಂತರ ಮಳೆಯಾಗದಿದ್ದರೆ ಅಥವಾ ಹನಿನೀರಾವರಿ ವ್ಯವಸ್ಥೆ ಮಾಡದಿದ್ದರೆ ರೊಬೋಸ್ಟಾ ತೋಟಗಳಲ್ಲಿ ನಿರೀಕ್ಷಿತ ಫಸಲು ಪಡೆಯುವುದು ಅಸಾಧ್ಯ. ಈ ಬಾರಿ ಮುಂಗಾರು ಮಳೆಯಾಗದಿರುವುದರಿಂದ ನೀರಿನ ಕೊರತೆಯ ನಡುವೆಯು ಸಾಕಷ್ಟು ಬೆಳೆಗಾರರು ಹನಿನೀರಾವರಿ ವ್ಯವಸ್ಥೆ ಮಾಡಿದ್ದರು. ಆದರೆ, ಮೇ ತಿಂಗಳಿನಲ್ಲಿ ಏಕಾಏಕಿ ಹಿಡಿದ ಮಳೆ ಮೂರು ತಿಂಗಳು ಕಳೆದರೂ ಬಿಡುವು ನೀಡದ ಪರಿಣಾಮ ಹನಿನೀರಾವರಿ ವ್ಯವಸ್ಥೆ ಮಾಡಿದ್ದ ಬಹುತೇಕ ಕಾಫಿ ತೋಟದಲ್ಲಿ ಶೇ. ೫೦ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ರೊಬೋಸ್ಟಾ ಕಾಫಿ ನೆಲ ಸೇರಿದೆ. ಸಾಮಾನ್ಯವಾಗಿ ರೋಬಸ್ಟ್ ಕಾಫಿಗೆ ೧೭೫೦ರಿಂದ ೨೦೦೦ ಮೀ.ಮೀಟರ್ ಮಳೆ ಉತ್ತಮ ಆದರೆ, ಜುಲೈ ಅಂತ್ಯಕ್ಕೆ ಬಹುತೇಕ ತಾಲೂಕಿನಲ್ಲಿ ಮೂರರಿಂದ ನಾಲ್ಕು ಸಾವಿರ ಮೀ.ಮೀಟರ್ ಮಳೆಯಾಗಿದ್ದು, ವಾಡಿಕೆಗಿಂತ ಶೇ. ೧೫೦ರಷ್ಟು ಅಧಿಕವಾಗಿದೆ. ಪರಿಣಾಮ ಸೂಕ್ಷ್ಮ ರಚನೆಹೊಂದಿರುವ ರೊಬೋಸ್ಟಾ ಕಾಫಿಗೆ ಕೊಳೆರೋಗ ಬರಲು ಪ್ರಮುಖ ಕಾರಣವಾಗಿದೆ.
ಏಪ್ರಿಲ್ ತಿಂಗಳವರೆಗೆ ಮಳೆ ಅಗತ್ಯವಿಲ್ಲದ ಅರೇಬಿಕ ಕಾಫಿಗೆ ಸಾಮಾನ್ಯವಾಗಿ ಹನಿನೀರಾವರಿ ವ್ಯವಸ್ಥೆಮಾಡುವುದು ಅಪರೂಪ. ಆದರೆ, ಎಕರೆಗೆ ಇಂತಿಷ್ಟೆ ಇಳುವರಿ ತೆಗೆಯ ಬೇಕು ಎಂಬ ಮನಸ್ಥಿತಿ ಹೊಂದಿರುವ ಬೆಳೆಗಾರರು ಹನಿನೀರಾವರಿ ವ್ಯವಸ್ಥೆ ಮಾಡಿದ್ದು ಹನಿನೀರಾವರಿ ವ್ಯವಸ್ಥೆ ಮಾಡಿರುವ ತೋಟಗಳಲ್ಲಿ ಈಗಾಗಲೇ ಅರೇಬಿಕ ಕಾಫಿ ಕಾಯಿಯಲ್ಲಿ ಬೀಜ ಮೂಡಿದ್ದು ಬಹುತೇಕ ತೋಟಗಳಲ್ಲಿ ಇನ್ನೊಂದು ತಿಂಗಳಿನಲ್ಲಿ ಕೂಯಿಲಿಗೆ ಬರಲಿದೆ. ಇಂತಹ ಸ್ಥಿತಿಯಲ್ಲಿ ಹೆಚ್ಚಿನ ಗಾಳಿ ಬೀಸುತ್ತಿರುವುದು ಬೆಳೆಗಾರರ ಪಾಲಿಗೆ ಕರಾಳವಾಗಿದ್ದು ಅರೇಬಿಕ ಗಿಡದ ರಂಬೆಗಳೆ ಮುರಿದು ನೆಲಸೇರುತ್ತಿದ್ದರೆ ರೊಬೋಸ್ಟಾ ಕಾಫಿಗಿಂತಲು ಹೆಚ್ಚಿನ ಪ್ರಮಾಣದಲ್ಲಿ ಅರೇಬಿಕ ಕಾಫಿ ನೆಲಸೇರುತ್ತಿದೆ. ಅರೇಬಿಕ ಕಾಫಿಗೆ ೧೨೫೦ರಿಂದ ೧೭೫೦ ಮೀ.ಮೀಟರ್ ಮಳೆ ಅಗತ್ಯವಿದೆ. ಆದರೆ ಬಾರಿ ಮಳೆ ಅರೇಬಿಕ ಕಾಫಿಗೂ ಶಾಪವಾಗಿ ಕಾಡುತ್ತಿದೆ.ಎಲೆಗಳು ಇಲ್ಲ: ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಿರುವ ಹೆತ್ತೂರು ಹಾಗೂ ಹಾನುಬಾಳ್ ಹೋಬಳಿಯ ಹಲವೆಡೆ ಅಧಿಕ ಮಳೆ ಹಾಗೂ ಭಾರಿ ಪ್ರಮಾಣದ ಗಾಳಿಯಿಂದಾಗಿ ರೊಬೋಸ್ಟಾ ಗಿಡಗಳಲ್ಲಿ ಎಲೆಯು ಉಳಿಯದಂತೆ ಉದುರಿದ್ದು ಇನ್ನೂ ಫಸಲು ಉಳಿಸಿಕೊಳ್ಳುವ ಮಾತೆ ಇಲ್ಲದಾಗಿದೆ.
ಭತ್ತದ ಬೆಳೆಗೂ ಕುತ್ತು: ತಾಲೂಕಿನಲ್ಲಿ ಸಾಮಾನ್ಯವಾಗಿ ಜುಲೈ ತಿಂಗಳಿನಲ್ಲಿ ನಾಟಿ ಕಾರ್ಯ ಆರಂಭವಾಗುವುದರಿಂದ ಜೂನ್ ತಿಂಗಳಿನಲ್ಲಿ ಸಸಿಮಾಡಿಮಾಡುವುದು ವಾಡಿಕೆ. ಈಗಾಗಲೇ ಸಾಕಷ್ಟು ರೈತರು ನಾಟಿ ಮಾಡಿದ್ದರೆ ಮತ್ತಷ್ಟು ರೈತರು ನಾಟಿಗೆ ಸಿದ್ಧತೆ ನಡೆಸಿದ್ದರು. ಆದರೆ, ಜುಲೈ ಮಧ್ಯಭಾಗದಿಂದ ಆರಂಭವಾದ ಬಿರುಸಿನ ಮಳೆ ನದಿ, ಹಳ್ಳ, ಕೊಳ್ಳಗಳನ್ನು ಉಕ್ಕಿ ಹರಿಯುವಂತೆ ಮಾಡಿದ್ದು ಜುಲೈ ೧೫ರಿಂದ ಜುಲೈ ಅಂತ್ಯದವರೆಗೆ ತಾಲೂಕಿನ ಬಹುತೇಕ ಜಲಮೂಲಗಳಲ್ಲಿ ಮೂರು ಬಾರಿ ಪ್ರವಾಹ ಸೃಷ್ಟಿಯಾಗಿದೆ. ಪರಿಣಾಮ ಸಾವಿರಾರು ಎಕರೆ ನಾಟಿ ಮಾಡಿದ್ದ ಭತ್ತದ ಗದ್ದೆಗಳಲ್ಲಿ ವಾರಗಟ್ಟಲೆ ನೀರು ನಿಲುಗಡೆಯಾಗಿ ಬೆಳೆ ಹಾಳಾದರೆ ಹಲವೆಡೆ ಭೂಕುಸಿತ ಸಂಭವಿಸಿ ಸಸಿಮಡಿ, ನಾಟಿಮಾಡಿದ ಭತ್ತದ ಬೆಳೆ ಸಹ ನಾಶವಾಗಿದೆ.
೨ ಎಸ್ಕೆಪಿಪಿ ೧ ಸುಳ್ಳಕ್ಕಿ ಗ್ರಾಮದ ವಿಕ್ರಂ ಎಂಬುವವರ ಕಾಫಿ ತೋಟದಲ್ಲಿ ಬಾರಿ ಪ್ರಮಾಣದಲ್ಲಿ ಕಾಫಿ ನೆಲ ಸೇರಿರುವುದು.ಹೇಳಿಕೆ: 1
- ವಿಕ್ರಂ ಸುಳ್ಳಕ್ಕಿ,ಕಾಫಿ ಬೆಳೆಗಾರ.ಹೇಳಿಕೆ:2
- ಬಸವರಾಜ್, ವಿಸ್ತರಣಾಧಿಕಾರಿ, ಕಾಫಿ ಮಂಡಳಿ, ಮಠಸಾಗರ.