ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕಳೆದ ಮೂರು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ಕಳಸ, ಮೂಡಿಗೆರೆ, ಶೃಂಗೇರಿ, ಎನ್.ಆರ್.ಪುರ ಹಾಗೂ ಕೊಪ್ಪ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೂಡಿಗೆರೆ ಹಾಗೂ ಕಳಸ ತಾಲೂಕು ವ್ಯಾಪ್ತಿಯ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದೆ. ಸರ್ಕಾರಿ ಶಾಲೆಗಳು ಮಾತ್ರವಲ್ಲದೇ ಖಾಸಗಿ ಮತ್ತು ಅನುದಾನಿತ ಶಾಲೆಗಳಿಗೂ ರಜೆ ಘೋಷಿಸಲಾಗಿತ್ತು.
ಉಳಿದಂತೆ ಕೊಪ್ಪ, ಶೃಂಗೇರಿ, ಚಿಕ್ಕಮಗಳೂರು, ಎನ್.ಆರ್. ಪುರದಲ್ಲಿ ಮಳೆ ಇದ್ದರೂ ಶಾಲಾ ಕಾಲೇಜುಗಳು ಎಂದಿನಂತೆ ನಡೆದಿವೆ.ರಸ್ತೆ ಬಿದ್ದ ಮರ, ವಿದ್ಯುತ್ ಸಮಸ್ಯೆ
ಅಪಾಯ ಮಟ್ಟ: ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹುಟ್ಟಿ ಹರಿಯುವ ತುಂಗಾ, ಭದ್ರಾ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಇದೇ ರೀತಿ ಮಳೆ ಮುಂದುವರಿದರೆ, ನದಿ ಪಾತ್ರದ ಜನರಿಗೆ ತೊಂದರೆ ಉಂಟಾಗುವ ಜತೆಗೆ, ಸಂಪರ್ಕ ಕಳೆದುಕೊಳ್ಳುವ ಆತಂಕವಿದೆ.
26 ಕಂಬ ಧರೆಗೆ:ಮೆಸ್ಕಾಂ ಸಿಬ್ಬಂದಿಯಿಂದ ವಿದ್ಯುತ್ ಮಾರ್ಗ ದುರಸ್ತಿ ಕಾರ್ಯದ ಬಗ್ಗೆ ಪತ್ರಿಕೆಗೆ ಪ್ರತಿಕ್ರಿ ಯಿಸಿರುವ ಮೆಸ್ಕಾಂ ಜೆಇ ಮಂಜುನಾಥ್, ಬಣಕಲ್ ಭಾಗದಲ್ಲಿ 26 ವಿದ್ಯುತ್ ಕಂಬಗಳು ನೆಲಕುರುಳಿದೆ. 25 ಸಿಬ್ಬಂದಿ ಮೂರು ತಂಡ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅತಿಯಾದ ಗಾಳಿ ಮಳೆ ಕಾರ್ಯ ನಿರ್ವಹಣೆಗೆ ತೊಡಕಾಗಿದ್ದು ಮಳೆ ನಡುವೆಯೇ ವಿದ್ಯುತ್ ಕಂಬಗಳನ್ನು ಹಾಕಿ ವಿದ್ಯುತ್ ಮಾರ್ಗ ಸರಿಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.-- ಬಾಕ್ಸ್--
ತಾಲೂಕುಮಳೆ ಪ್ರಮಾಣ (ಮಿ.ಮೀ)
ಮೂಡಿಗೆರೆ52
ಕೊಪ್ಪ46
ಚಿಕ್ಕಮಗಳೂರು10
ತರೀಕೆರೆ9ಅಜ್ಜಂಪುರ4
ಕಡೂರು0ಸರಾಸರಿ19
-- ಬಾಕ್ಸ್---ಕಡೂರು ತಾಲೂಕಿನಲ್ಲಿ ಮಳೆ ಇಲ್ಲ
ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಮಲೆನಾಡು ಭಾಗದ ತಾಲೂಕುಗಳಲ್ಲಿ ಭಾರೀ ಮಳೆಯಾಗುತ್ತಿದೆ. ಆದರೆ, ಇದೇ ಜಿಲ್ಲೆಗೆ ಸೇರಿದ ಕಡೂರು ಮತ್ತು ಅಜ್ಜಂಪುರದಲ್ಲಿ ಕನಿಷ್ಠ ಪ್ರಮಾಣ ಮಳೆ ಇಲ್ಲ. ಸೋಮವಾರ ಬೆಳಗ್ಗೆ 7.30ರ ಹವಾಮಾನ ವರದಿ ಪ್ರಕಾರ 1 ಮಿ.ಮೀ ಸಹ ಕಡೂರು ತಾಲೂಕು ವ್ಯಾಪ್ತಿಯಲ್ಲಿ ಮಳೆಯಾಗಿಲ್ಲ. ಅಜ್ಜಂಪುರದಲ್ಲಿ ಕೇವಲ 4 ಮಿ.ಮೀ ಮಳೆ ಯಾಗಿದೆ. ಇನ್ನೂ ಚಿಕ್ಕಮಗಳೂರು ತಾಲೂಕಿನಲ್ಲಿ 10, ತರೀಕೆರೆಯಲ್ಲಿ ಕೇವಲ 9 ಮಿ.ಮೀ ನಷ್ಟು ಮಳೆ ಆಗಿದೆ.ಫೋಟೋ
ಚಿಕ್ಕಮಗಳೂರಿನ ಬಣಕಲ್ ಸುತ್ತಮುತ್ತ ಸೋಮವಾರ ಧಾರಾಕಾರ ಮಳೆಯಾಗಿದ್ದು ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಮೆಸ್ಕಾಂ ಸಿಬ್ಬಂದಿ ಮಳೆಯಲ್ಲಿ ದುರಸ್ತಿ ಮಾಡುತ್ತಿರುವುದು.--- ಬಾಕ್ಸ್...ಮರ ಬಿದ್ದು ಮಹಿಳೆ ಕೈ ತುಂಡು
ಮೂಡಿಗೆರೆ: ತಾಲೂಕಿನಲ್ಲಿ ಮಳೆ ಆರ್ಭಟದಲ್ಲಿ ಮರ ಬಿದ್ದು ಮಹಿಳೆಯ ಕೈ ತುಂಡಾಗಿರುವ ದಾರುಣ ಘಟನೆ ನಡೆದಿದೆ.ಭಾನುವಾರ ರಾತ್ರಿ ಸುರಿದ ಮಳೆಗೆ ತಾಲೂಕಿನ ಬೆಟ್ಟಗೆರೆ ಗ್ರಾಪಂ ವ್ಯಾಪ್ತಿಯ ಬಡವನದಿಣ್ಣೆ ಗ್ರಾಮದ ಪೂರ್ಣೇಶ್ ಅವರ ಮನೆ ಮೇಲೆ ಮರ ಬಿದ್ದು, ಮನೆ ಹೆಂಚುಗಳೆಲ್ಲಾ ಹಾನಿಯಾಗಿದೆ. ಸೋಮವಾರ ಬೆಳಗ್ಗೆ ಮಲೆಮನೆ ಸಮೀಪದ ತೋಟ ದಲ್ಲಿ ಮರಕಸಿ ಮಾಡುತ್ತಿದ್ದ ಪುಷ್ಪ (45) ಅವರ ಮೇಲೆ ಮರ ಬಿದ್ದು, ಎಡಗೈ ತುಂಡಾಗಿದೆ. ಅವರನ್ನು ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಲೂಕಿನಲ್ಲಿ ಬಾರಿ ಮಳೆ ಗಾಳಿ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಆರಂಭದಲ್ಲಿ ಅಂಗನವಾಡಿ ಮತ್ತು ಪ್ರಾಥಮಿಕ ಶಾಲೆಗಳಿಗೆ ಮಾತ್ರ ತಹಸೀಲ್ದಾರ್ ಎಸ್.ಅಶ್ವಿನಿ ರಜೆ ಘೋಷಿಸಿದ್ದರು. ಮಳೆ ಆರ್ಭಟ ಮುಂದುವರಿದ ಕಾರಣದಿಂದ ಸೋಮವಾರ ಬೆಳಗ್ಗೆ ಎಲ್ಲಾ ಪ್ರೌಢಶಾಲೆಗಳಿಗೂ ರಜೆ ಘೋಷಣೆ ಮಾಡಿದರು. ಸೋಮವಾರ ಮಳೆ ಆರ್ಭಟ ಮುಂದುವರಿದಿತ್ತು. ಮರು ದಿನ ಶಾಲೆಗಳಿಗೆ ದಿಢೀರ್ ರಜೆ ಘೋಷಿಸಿದರೆ ಮಾಹಿತಿ ಕೊರತೆಯಿಂದ ವಿದ್ಯಾರ್ಥಿಗಳು ಮಳೆ ಯಲ್ಲೇ ಶಾಲೆಗೆ ಬರುವ ಸ್ಥಿತಿ ಉಂಟಾಗುತ್ತದೆ. ಹಾಗಾಗಿ ಹಿಂದಿನ ದಿನವೇ ರಜೆ ಘೋಷಿಸುವಂತೆ ಪೋಷಕರು ಆಗ್ರಹಿಸಿದ್ದಾರೆ. ***** ಪೋಟೊ ೬ಮೂಡಿಗೆರೆ೧ಎ: ಮೂಡಿಗೆರೆ ತಾಲೂಕಿನ ಬಡವನದಿಣ್ಣೆ ಗ್ರಾಮದ ಪೂರ್ಣೇಶ್ ಎಂಬುವರ ಮನೆ ಮೇಲೆ ಮರ ಬಿದ್ದು, ಮನೆ ಹೆಂಚುಗಳು ಹಾನಿಯಾಗಿದೆ.