ಕನ್ನಡಪ್ರಭ ವಾರ್ತೆ ಬೆಂಗಳೂರು
ಕಾಮಗಾರಿ ನಡೆಯುವ ಸಮಯದಲ್ಲಿ ಬಳ್ಳಾರಿ ರಸ್ತೆಯಲ್ಲಿ ಸಾಗುವ ಎಲ್ಲ ವಾಹನಗಳ ದಿಕ್ಕು ಬದಲಿಸಿ ಅನ್ಯ ಮಾರ್ಗದಲ್ಲಿ ಸುಗಮವಾಗಿ ಸಾಗುವಂತೆ ಸಂಚಾರ ನಿರ್ವಹಣೆಗೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಾಹನ ಸಂಚಾರ ತಾತ್ಕಾಲಿಕ ನಿರ್ಬಂಧ: ಕೆ2 ಬಸ್ ನಿಲ್ದಾಣದಿಂದ ಹೆಬ್ಬಾಳ ಪಿಎಸ್ ಜಂಕ್ಷನವರೆಗಿನ ಬಳ್ಳಾರಿ ಸರ್ವೀಸ್ ರಸ್ತೆ ನಾಗಶೆಟ್ಟಿ, ಭೂಪಸಂದ್ರದಿಂದ ನಗರಕ್ಕೆ ಬರುವ ವಾಹನಗಳು, ಭೂಪಸಂದ್ರ-ನಾಗಶೆಟ್ಟಿಹಳ್ಳಿ-ಸಂಜಯನಗರ ಮುಖ್ಯರಸ್ತೆಯ ಮೂಲಕ ಸಾಗಿ ಸಂಜಯನಗರ ಕ್ರಾಸ್ ಎಡ ತಿರುವು ಪಡೆದು ಸಂಜಯನಗರ ಮ್ಯಾಜಿಕ್ ಬಾಕ್ಸ್ ಬಳಿ ಬಲ ತಿರುವು ಪಡೆದು ಬಳ್ಳಾರಿ ರಸ್ತೆಗೆ ಸಾಗಬೇಕು.-ನಾಗಶೆಟ್ಟಿಹಳ್ಳಿ-ಭೂಪಸಂದ್ರ ಬಸ್ ನಿಲ್ದಾಣ-ಕೆ2 ಬಸ್ ನಿಲ್ದಾಣ-ವಿ.ನಾಗೇನಹಳ್ಳಿ ಮುಖ್ಯರಸ್ತೆ (ಗುಡ್ಡದಹಳ್ಳಿ-ಮುಖ್ಯರಸ್ತೆ)- ಗುಡ್ಡದಹಳ್ಳಿ ಸರ್ಕಲ್ ನಲ್ಲಿ ಬಲತಿರುವು ಪಡೆದು ಚೋಳನಾಯಕನಹಳ್ಳಿ ಸರ್ಕಲ್ ಮೂಲಕ ಬಳ್ಳಾರಿ ರಸ್ತೆಗೆ ಸೇರಬೇಕು.
ಬೆಂಗಳೂರು ನಗರ ಟು ವಿ.ನಾಗೇನಹಳ್ಳಿ: ಮೇಖ್ರಿ ಸರ್ಕಲ್ ಅಂಡರ್ ಪಾಸ್- ಬಳ್ಳಾರಿ ರಸ್ತೆ- ಸಿಬಿಐ ಅಂಡರ್ ಪಾಸ್ನಲ್ಲಿ ಬಲ ತಿರುವು ಪಡೆದು ಆರ್ಟಿ ನಗರ ಪೊಲೀಸ್ ಠಾಣೆ ಜಂಕ್ಷನ್ ಹಾದು ದಿಣ್ಣೂರು ರಸ್ತೆ ಮೂಲಕ ಸಾಗಬೇಕು.
-ಮೇಖ್ರಿ ಸರ್ಕಲ್ ಅಂಡರ್ ಪಾಸ್- ಹೆಬ್ಬಾಳ ಬಸ್ ನಿಲ್ದಾಣ- ಕೆ2 ಬಸ್ ನಿಲ್ದಾಣದಲ್ಲಿ ಬಲ ತಿರುವು ಪಡೆದು ವಿ,ನಾಗೇನಹಳ್ಳಿ ಮುಖ್ಯರಸ್ತೆಗೆ ಸಂಚರಿಸಬೇಕು.