ದೇಶಸೇವೆ ಮೊದಲು ಎಂದವರು ಹೆಡಗೇವಾರ್:‌ ರಾಜೇಶ್‌ ಕಾಲ್ರಾ

KannadaprabhaNewsNetwork |  
Published : Mar 02, 2024, 01:51 AM ISTUpdated : Mar 02, 2024, 10:13 AM IST
ಏಷ್ಯಾನೆಟ್‌  ಮುಖ್ಯಸ್ಥ ರಾಜೇಶ್‌ ಕಾಲ್ರಾ | Kannada Prabha

ಸಾರಾಂಶ

ಆರ್‌ಎಸ್‌ಎಸ್‌ ಸಂಸ್ಥಾಪಕ ಕೇಶವ್‌ ಹೆಡಗೇವಾರ್, ದೇಶಸೇವೆಯನ್ನು ಎಲ್ಲಕ್ಕಿಂತ ಮೊದಲ ಆದ್ಯತೆಯಾಗಿ ಪರಿಗಣಿಸಿದ್ದರು ಎಂಬುದಾಗಿ ಏಷ್ಯಾನೆಟ್‌ ಸುದ್ದಿಸಂಸ್ಥೆಯ ಕಾರ್ಯನಿರ್ವಾಹಕ ಮುಖ್ಯಸ್ಥ ರಾಜೇಶ್‌ ಕಾಲ್ರಾ ಹೇಳಿದರು.

ನವದೆಹಲಿ: ಆರ್‌ಎಸ್‌ಎಸ್‌ ಸಂಸ್ಥಾಪಕ ಕೇಶವ್‌ ಹೆಡಗೇವಾರ್, ದೇಶಸೇವೆಯನ್ನು ಎಲ್ಲಕ್ಕಿಂತ ಮೊದಲ ಆದ್ಯತೆಯಾಗಿ ಪರಿಗಣಿಸಿದ್ದರು ಎಂಬುದಾಗಿ ಏಷ್ಯಾನೆಟ್‌ ಸುದ್ದಿಸಂಸ್ಥೆಯ ಕಾರ್ಯನಿರ್ವಾಹಕ ಮುಖ್ಯಸ್ಥ ರಾಜೇಶ್‌ ಕಾಲ್ರಾ ಹೇಳಿದರು.

ಇಲ್ಲಿ ನಡೆದ ಹೆಡಗೇವಾರ್ ಅವರ ಜೀವನಚರಿತ್ರೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕಾಲ್ರಾ, ‘ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರಾಗಿರುವ ಹೆಡಗೇವಾರ್ ಅವರು ಸಂಘದಲ್ಲಿ ಶಿಸ್ತು ರೂಢಿಸಿಕೊಳ್ಳಲು ಅಗ್ರ ಪಂಕ್ತಿ ಹಾಕಿಕೊಟ್ಟರು. ಅಲ್ಲದೆ ಎಲ್ಲಕ್ಕಿಂತ ದೇಶ ಮತ್ತು ದೇಶಸೇವೆಯೇ ಮೊದಲು ಎಂಬ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದ್ದರು’ ಎಂದರು.

ಸಂಸತ್‌ ಭವನದ ಬಾಲಯೋಗಿ ಸಭಾಂಗಣದಲ್ಲಿ ಆಂಧ್ರಪ್ರದೇಶದ ರಾಜ್ಯಪಾಲ, ನಿವೃತ್ತ ನ್ಯಾಯಮೂರ್ತಿ ಅಬ್ದುಲ್‌ ನಜೀರ್‌ ಹೆಡಗೇವಾರ್ ಕುರಿತಾದ ಮ್ಯಾನ್‌ ಆಫ್‌ ದಿ ಮಿಲೇನಿಯಾ-ಡಾ. ಹೆಡಗೇವಾರ್ಹೆ ಪುಸ್ತಕವನ್ನು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಮಾತನಾಡಿ ಸಂಘವನ್ನು ಅರ್ಥ ಮಾಡಿಕೊಳ್ಳಲು ಮನಸ್ಸಿಗಿಂತ ಹೃದಯ ಮುಖ್ಯ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮಲಾಕರ ಭಟ್‌ಗೆ ಸುಚಿತ್ರಾಳಿಂದ ಹನಿಟ್ರ್ಯಾಪ್‌! - ಖಾಸಗಿ ಕ್ಷಣಗಳ ವಿಡಿಯೋ ಮಾಡಿ ಬ್ಲ್ಯಾಕ್‌ ಮೇಲ್‌
ರಾಜಧಾನಿಯಲ್ಲಿ ಡ್ರಗ್ಸ್ ಬೇಟೆ : ಸಾವಿರ ವ್ಯಸನಿಗಳ ಸೆರೆ