ಭಕ್ತಿಯಿಂದ ಶಿವನ ಗೆದ್ದ ಹೇಮರಡ್ಡಿ ಮಲ್ಲಮ್ಮ: ಶಾಸಕ ಗಾಲಿ ಜನಾರ್ದನರೆಡ್ಡಿ

KannadaprabhaNewsNetwork |  
Published : Dec 01, 2025, 02:30 AM IST
ಹೂವಿನಹಡಗಲಿ ತಾಲೂಕಿನ ಲಿಂಗನಾಯಕನಹಳ್ಳಿ ಜಂಗಮ ಕ್ಷೇತ್ರದಲ್ಲಿ ಆಯೋಜಿಸಿದ್ದ ಜಂಗಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಗಾಲಿ ಜನಾರ್ಧನ ರೆಡ್ಡಿ. | Kannada Prabha

ಸಾರಾಂಶ

ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿಯ ಚನ್ನವೀರ ಶಿವಯೋಗಿಗಳ ಮಠದಲ್ಲಿ ಆಯೋಜಿಸಿದ್ದ ಜಂಗಮೋತ್ಸವ

ಹೂವಿನಹಡಗಲಿ: ತನ್ನ ಭಕ್ತಿ, ನಿಷ್ಠೆಯಿಂದ ಶಿವನನ್ನು ಗೆದ್ದು ರಡ್ಡಿ ಕುಲವನ್ನು ಉದ್ಧಾರ ಮಾಡಿದ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ತಾಲೂಕಿನ ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿಯ ಚನ್ನವೀರ ಶಿವಯೋಗಿಗಳ ಮಠದಲ್ಲಿ ಆಯೋಜಿಸಿದ್ದ ಜಂಗಮೋತ್ಸವ ಮತ್ತು ಕಾರ್ತಿಕೋತ್ಸವದ ಅಂಗವಾಗಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸ್ಮರಣೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹೇಮರಡ್ಡಿ ಮಲ್ಲಮ್ಮನಿಗೆ ಮನೆಯಲ್ಲಿ ಅತ್ತಿಗೆ, ನಾದಿಯರು ನೀಡಿದ ಹಿಂಸೆ, ಕಷ್ಟಗಳನ್ನು ಮೆಟ್ಟಿನಿಂತು ಗೋ ರಕ್ಷಣೆ ಕಾಯಕದಲ್ಲಿ ತೊಡಗಿ, ತನಗೆ ನೀಡಿದ ಹಳಸಿದಂಬಲಿಯನ್ನು ಶಿವನಿಗೆ ಉಣಬಡಸಿ ಶಿವನನ್ನು ಸಾಕ್ಷಾತ್ಕರಿಸಿಕೊಂಡಿದ್ದಾಳೆ. ಇಂತಹ ಶಿವಶರಣೆ ತನ್ನ ರಡ್ಡಿ ಕುಲಕ್ಕೆ ಯಾವ ಕಾಲದಲ್ಲಿಯೂ ಬಡತನ ಬಾರದಿರಲಿ, ಅವರ ಬಾಳು ಬಂಗಾರವಾಗಲಿ. ಇವರಿಂದ ಸದಾ ಕಾಲ ದಾನ, ಧರ್ಮ ನಿರಂತರ ನಡೆಯುತ್ತಿರಲಿ ಎಂದು ವರ ಪಡೆದಿದ್ದಾಳೆ. ಅವಳ ಭಕ್ತಿಗೆ ಮೆಚ್ಚಿ ಶಿವ ವರ ನೀಡಿದ ಪರಿಣಾಮ ಇಂದು ಎಲ್ಲ ರಡ್ಡಿ ಕುಲ ಬಡತನ ಅರಿಯದೇ ತಮ್ಮ ಕಾಯಕದಿಂದ ಸಮಾಜಕ್ಕೆ ಕೊಡುಗೈ ದಾನಿಗಳಾಗಿ ನಡೆದುಕೊಂಡಿದ್ದಾರೆ ಎಂದರು.

ಮಠದ ಚನ್ನವೀರ ಸ್ವಾಮೀಜಿ ಹಲವು ದಶಕಗಳಿಂದ ಪ್ರತಿ ವರ್ಷ ತಮ್ಮ ಮಠದಿಂದ ನಿರಂತರ ಸಮಾಜಮುಖಿ ಕಾರ್ಯಕ್ರಮಗಳ ಜೊತೆ, ಅನೇಕ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ವಿಶೇಷವಾಗಿ ಈ ಭಾಗದ ರೈತರ ಹಿತದೃಷ್ಟಿಯಿಂದ ಹಲವು ವರ್ಷದಿಂದ ಕೃಷಿ ಮೇಳವನ್ನು ಹಮ್ಮಿಕೊಳ್ಳುವ ಮೂಲಕ ಈ ಭಾಗದ ರೈತರ ಜೀವನಾಡಿಯಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಠ ಅಭಿವೃದ್ಧಿ ಪಡಿಸುವ ಮೂಲಕ ಇಡೀ ಕರ್ನಾಟಕ ಮಠದತ್ತ ನೋಡುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೃಷ್ಣಾನಾಯ್ಕ, ಶಿಕ್ಷಕ ದ್ವಾರಕೀಶ ರೆಡ್ಡಿ ಮಾತನಾಡಿದರು. ಚನ್ನವೀರ ಸ್ವಾಮೀಜಿ, ನೀಲಗುಂದ ಚನ್ನ ಬಸವ ಸ್ವಾಮೀಜಿ, ಹೊಳಲು ಗ್ರಾಮದ ಚನ್ನಬಸವ ಸ್ವಾಮೀಜಿ ಸೇರಿದಂತೆ ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.

ಮಾಜಿ ಶಾಸಕ ಬಿ. ಚಂದ್ರನಾಯ್ಕ, ವಿಜಯನಗರ ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌. ಸಂಜೀವ ರೆಡ್ಡಿ, ಮುಖಂಡ ಪುತ್ರೇಶ, ರೆಡ್ಡಿ ಸಮಾಜದ ತಾಲೂಕಾಧ್ಯಕ್ಷ ಸಿ. ಮೋಹನರೆಡ್ಡಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕಗಳಲ್ಲಿ ಬೆಂಗಳೂರು ನಗರಕ್ಕೆ ಬರೋಬ್ಬರಿ ₹38 ಕೋಟಿ ಡ್ರಗ್ಸ್‌ ಸಾಗಾಟ
ಸರ್ಕಾರದಿಂದ ಗೋಬ್ಯಾಕ್‌ ಗೌರ್ನರ್‌ ಅಭಿಯಾನ ಚಿಂತನೆ