ಹಿಮೋಫಿಲಿಯಾ ಪುರುಷರಲ್ಲೇ ಹೆಚ್ಚು: ಡಾ. ಕ್ರಾಂತಿಕಿರಣ್

KannadaprabhaNewsNetwork |  
Published : Jun 05, 2026, 02:15 AM IST
ಹುಬ್ಬಳ್ಳಿ ಬಾಲಾಜಿ ಆಸ್ಪತ್ರೆ ಸಭಾಂಗಣದಲ್ಲಿ ಹಿಮೋಫಿಲಿಯಾ ದಿನಾಚರಣೆ ಆಚರಿಸಲಾಯಿತು. | Kannada Prabha

ಸಾರಾಂಶ

ಹಿಮೋಫಿಲಿಯಾದಲ್ಲಿ ಎ, ಬಿ, ಸಿ ಎಂಬ ಮೂರು ವಿಧಗಳಿದ್ದು, ತಾಯಿಯಿಂದ ಮಕ್ಕಳಿಗೆ ಅನುವಂಶಿಕವಾಗಿಯೂ ಬರಬಹುದಾದ ಕಾಯಿಲೆಯಾಗಿದೆ. ಗಂಟಲು, ಕೀಲು, ಮೂಗು, ವಸಡು, ಮಲ, ಮೂತ್ರ, ಮೆದುಳು, ಸ್ನಾಯು ಮತ್ತು ಮಾಂಸ- ಖಂಡಗಳಲ್ಲಿ ರಕ್ತಸ್ರಾವ ಇದರ ಪ್ರಮುಖ ಲಕ್ಷಣಗಳಾಗಿವೆ.

ಹುಬ್ಬಳ್ಳಿ:

ಹಿಮೋಫಿಲಿಯಾ ಅಥವಾ ಕುಸುಮ ರೋಗವು ರಕ್ತ ಹೆಪ್ಪುಗಟ್ಟುವಿಕೆ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾಗುವ ರೋಗವಾಗಿದೆ. ಅನುವಂಶಿಕವಾಗಿಯೂ ಬರಬಹುದಾದ ಕಾಯಿಲೆ ಇದಾಗಿದ್ದು, ಮಹಿಳೆಯರಿಗಿಂತ ಪುರುಷರಲ್ಲೇ ಈ ರೋಗ ಹೆಚ್ಚು ಕಾಣಿಸಿಕೊಳ್ಳುತ್ತದೆ ಎಂದು ನರರೋಗ ತಜ್ಞ ಹಾಗೂ ಬಾಲಾಜಿ ಆಸ್ಪತ್ರೆ ಚೇರ್‌ಮನ್ ಡಾ. ಕ್ರಾಂತಿಕಿರಣ್ ತಿಳಿಸಿದರು.

ಇಲ್ಲಿನ ಬಾಲಾಜಿ ಆಸ್ಪತ್ರೆಯಲ್ಲಿ ಹುಬ್ಬಳ್ಳಿ-ಧಾರವಾಡ ಹಿಮೋಫಿಲಿಯಾ ಸೊಸೈಟಿ ಮತ್ತು ಹಿಮೋಫಿಲಿಯಾ ಫೆಡರೇಶನ್ ಇಂಡಿಯಾ ಸಹಯೋಗದಲ್ಲಿ ಬಾಲಾಜಿ ಆಸ್ಪತ್ರೆ, ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಕೇಂದ್ರ, ಜಿಲ್ಲಾಸ್ಪತ್ರೆ, ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್ ಮತ್ತು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ನೇತೃತ್ವದಲ್ಲಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಹಿಮೋಫಿಲಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಹಿಮೋಫಿಲಿಯಾದಲ್ಲಿ ಎ, ಬಿ, ಸಿ ಎಂಬ ಮೂರು ವಿಧಗಳಿದ್ದು, ತಾಯಿಯಿಂದ ಮಕ್ಕಳಿಗೆ ಅನುವಂಶಿಕವಾಗಿಯೂ ಬರಬಹುದಾದ ಕಾಯಿಲೆಯಾಗಿದೆ. ಗಂಟಲು, ಕೀಲು, ಮೂಗು, ವಸಡು, ಮಲ, ಮೂತ್ರ, ಮೆದುಳು, ಸ್ನಾಯು ಮತ್ತು ಮಾಂಸ- ಖಂಡಗಳಲ್ಲಿ ರಕ್ತಸ್ರಾವ ಇದರ ಪ್ರಮುಖ ಲಕ್ಷಣಗಳಾಗಿವೆ. ಇವುಗಳಲ್ಲಿ ಮಿದುಳಿನ ರಕ್ತಸ್ರಾವ ಅತ್ಯಂತ ಮಾರಣಾಂತಿಕವಾಗಿದ್ದು, ರೋಗ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದರು.

ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆಯ ಡಾ. ಬಿ.ಆರ್. ಪಾಟೀಲ್ ಮಾತನಾಡಿ, ರಕ್ತ ಹೆಪ್ಪುಗಟ್ಟುವ ಪ್ರೋಟಿನ್‌ಗಳ ಕೊರತೆಯಿಂದ ಉಂಟಾಗುವ ಈ ಕಾಯಿಲೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಅವರಿಗೆ ಉತ್ತಮ ಚಿಕಿತ್ಸೆ ದೊರಕುವಂತೆ ಮಾಡಿ ಅವರ ಬದುಕನ್ನು ಉತ್ತಮಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ವೈದ್ಯರಾದ ಡಾ. ಮಮತಾ ಪಾಟೀಲ್, ಡಾ. ಕವಿತಾ ಕೋರೆ, ಡಾ. ಮಹಾಂತೇಶ್ ವೀರಾಪುರ, ಡಾ. ಉಮೇಶ್ ಹಳ್ಳಿಕೇರಿ, ಡಾ. ಅರ್ಪಿತಾ ನಾಡಗೌಡ, ಡಾ. ಆದರ್ಶ, ಡಾ. ಶೀತಲ್ ಅಂಗಡಿ, ಉದಯ ಕುಮಾರ ಗಜಪತಿ, ರಾಜು ಕುಂದನಹಳ್ಳಿ, ಪ್ರತೀಕ್ ಸೇರಿ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಐಟಿ ರಚನೆ ಆದಾಗ ಡಾ। ಹೆಗ್ಗಡೆ ಜೈಲಿಗೆ ಹೋಗ್ತಾರೆ ಅಂತ ಸಂಭ್ರಮಿಸಿತ್ತು ಬುರುಡೆ ಗ್ಯಾಂಗ್‌: ಚಿನ್ನಯ್ಯ
ಗೃಹಲಕ್ಷ್ಮಿ ಸ್ಕೀಂನಿಂದ 3.89 ಲಕ್ಷ ಮಂದಿ ಫಲಾನುಭವಿಗಳು ಔಟ್‌