ಸ್ವಾಮಿಯ ಬಾವುಟವನ್ನು ₹5 ಲಕ್ಷಕ್ಕೆ ಹರಾಜು ಪಡೆದ ಸಂಸದ ಶ್ರೇಯಸ್ ಪಟೇಲ್
₹ 5ಲಕ್ಷಕ್ಕೆ ಬಾವುಟ ತಮ್ಮದಾಗಿಸಿಕೊಂಡ ಸಂಸದಸಂಪ್ರದಾಯದಂತೆ ಬ್ರಹ್ಮರಥೋತ್ಸವದಲ್ಲಿ ರಥದ ಮೊದಲನೆ ಮಂಗಳಾರತಿ ಪ್ರಧಾನ ಬಾವುಟವನ್ನು ಇಲ್ಲಿ ಹರಾಜು ನಡೆಸ ಲಾಗುತ್ತದೆ. ಅದರಂತೆ ಈ ಬಾರಿ ರಥೋತ್ಸವಕ್ಕೆ ಮೊದಲ ಬಾರಿ ಶಾಸಕ ಕೆ.ಎಸ್.ಆನಂದ್ ರೊಂದಿಗೆ ಆಗಮಿಸಿದ್ದ ಹಾಸನ ಸಂಸದ ಶ್ರೇಯಸ್ ಪಟೇಲ್ ಹರಾಜಿನಲ್ಲಿ ಭಾಗವಹಿಸಿ ₹5ಲಕ್ಷಗಳಿಗೆ ಹರಾಜು ಕೂಗಿ ಬಾವುಟ ಪಡೆದು ಮೊದಲ ಪೂಜೆ ಸಲ್ಲಿಸುವ ಗೌರವ ತಮ್ಮದಾಗಿಸಿಕೊಂಡರು.ಬರ ಬೇಸಿಗೆಯಲ್ಲಿ ರಥೋತ್ಸವಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ತಂಪಾದ ಮಜ್ಜಿಗೆ ಮತ್ತು ಪಾನಕ ಕೋಸಂಬರಿ ನೀಡಿ ದಾಹ ತಣಿಸುತ್ತಿದುದ್ದುಕಂಡು ಬಂತು. ಭಕ್ತರು ಪುಷ್ಪಾಲಂಕೃತಗೊಂಡಿದ್ದ ತೇರನ್ನು ಗೋವಿಂದನಾಮ ಸ್ಮರಣೆ ಮಾಡುತ್ತಾ, ರಥ ಎಳೆಯುವ ಜೊತೆ ಬಾಳೆಹಣ್ಣು ಎಸೆದು ಹಣ್ಣುಕಾಯಿ ಕೊಟ್ಟು ತಮ್ಮ ಭಕ್ತಿ ಸಮರ್ಪಿಸಿದರು. ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ದೇವಾಲಯ ಸಮಿತಿ ವಿಶೇಷ ಭೋಜನದ ವ್ಯವಸ್ಥೆ ಮಾಡಿತ್ತು.
ಬಾವುಟ ಪಡೆದು ಮೊದಲ ಪೂಜೆಗೆ ಪಾತ್ರರಾದ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ನಾನು ಲೊಕಸಭಾ ಚುನಾವಣ ಪ್ರಚಾರಕ್ಕೆ ಬಂದಾಗ ಈ ದೇಗುಲಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಇಲ್ಲಿನ ವಿಶೇಷತೆ ಅರಿತು ರಥೋತ್ಸವಕ್ಕೆ ಭಾಗಿ ಯಾಗು ವುದಾಗಿ ತಿಳಿಸಿದ್ದೆ. ಅದರಂತೆ ಸ್ವಾಮಿ ಆಶೀರ್ವಾದ ಪಡೆಯಲು ಬಾವುಟ ಪಡೆದುಕೊಂಡಿದ್ದು ಸಂತಸ ತಂದಿದೆ ಎಂದರು.ದೇವಸ್ಥಾನ ಸಮಿತಿ ಅಧ್ಯಕ್ಷರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಗೌರವಾಧ್ಯಕ್ಷ ಲಕ್ಷಿö್ಮಕಾಂತ್ ,ಹೆಚ್.ಎಸ್.ಮೂರ್ತಿ, ಸಿ.ಟಿ.ರಮೇಶ್ ಬಾಬು, ಹೆಚ್.ಜಿ ಶಶಿಕುಮಾರ್ ನಾಗಭೂಷಣ್ ,ವಿಶ್ವಜ್ಞಾಚಾರ್ ಸೇರಿದಂತೆ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು, ತಾ.ಪಂ.ಮಾಜಿ ಸದಸ್ಯ ಶಶಿಕುಮಾರ್,ಭಕ್ತಾಧಿಗಳು ಹಾಗೂ ದೇವಾಲಯದ ಪ್ರಧಾನಅರ್ಚಕ ಶ್ರೀನಿವಾಸ ಮೂರ್ತಿ, ಸಂತೋಷ್, ನಾಗರಾಜ್, ಗಿರೀಶ್ ,ಮೊದಲಾದವರು ಪಾಲ್ಗೊಂಡಿದ್ದರು.--ಕೋಟ್--
ಕೆ.ಎಸ್.ಆನಂದ್ಶಾಸಕ
21 ಬೀರೂರು 1ಬೀರೂರಿನ ಸಮೀಪದ ಹೊಗರೇಹಳ್ಳಿಯ ಶ್ರೀ ಲಕ್ಷ್ಮಿರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.21 ಬೀರೂರು 2ಬಾವುಟ ಪಡೆದ ಸಂತಸದಲ್ಲಿ ಸಂಸದ ಶ್ರೇಯಸ್ ಪಟೇಲ್.