- ಮಹಾನಗರ ಪಾಲಿಕೆ ವಿರುದ್ಧ ಪ್ರತಿಭಟನೆಯಲ್ಲಿ ಬಿ.ಕಲ್ಲೇಶಪ್ಪ ಒತ್ತಾಯ । ಎಸ್ಒಜಿ ಕಾಲನಿ ಬಿ, ಸಿ ಬ್ಲಾಕ್ಗೆ ರಾಜಕಾಲುವೆ ನಿರ್ಮಿಸಲು ಆಗ್ರಹ - - -
ನೀರಿನ ಕಂದಾಯ ಕಟ್ಟದಿದ್ದರೆ ನಲ್ಲಿ ಸಂಪರ್ಕ ರದ್ದುಪಡಿಸುವುದಾಗಿ ನೋಟಿಸ್ ನೀಡಿದ್ದನ್ನು ಖಂಡಿಸಿ, ಎಸ್ಒಜಿ ಕಾಲನಿ ಬಿ ಮತ್ತು ಸಿ ಬ್ಲಾಕ್ಗಳಲ್ಲಿ ರಾಜಕಾಲುವೆ ನಿರ್ಮಿಸಿಕೊಡುವಂತೆ ಒತ್ತಾಯಿಸಿ ನಗರದ ಪಾಲಿಕೆ ವ್ಯಾಪ್ತಿಯ 31ನೇ ವಾರ್ಡ್ನ ಎಸ್ಒಜಿ ಕಾಲನಿಯ ಬಿ ಬ್ಲಾಕ್ ನಾಗರೀಕ ಹಿತರಕ್ಷಣಾ ಸಮಿತಿಯಿಂದ ನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.
ನಗರದ ಪಾಲಿಕೆ ಕಚೇರಿಗೆ ಸಮಿತಿ ಅಧ್ಯಕ್ಷ ಬಿ.ಕಲ್ಲೇಶಪ್ಪ, ಡಿಎಸ್ಎಸ್ ಮುಖಂಡ ಹೆಗ್ಗೆರೆ ರಂಗಪ್ಪ ನೇತೃತ್ವದಲ್ಲಿ ಮುತ್ತಿಗೆ ಹಾಕಿದ ಸ್ಥಳೀಯ ನಿವಾಸಿಗಳು, ಮಹಿಳೆಯರು, ಯುವಜನರು, ನೀರಿನ ಕಂದಾಯ ಕಟ್ಟದಿದ್ದರೆ ನಲ್ಲಿ ಸಂಪರ್ಕ ತಪ್ಪಿಸುವ ನೋಟಿಸ್ ಹಿಂಪಡೆಯಬೇಕು, ಕಾಲನಿ ಬಿ ಮತ್ತು ಸಿ ಬ್ಲಾಕ್ನಲ್ಲಿ ರಾಜಕಾಲುವೆ ನಿರ್ಮಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಮನವಿ ಅರ್ಪಿಸಿದರು.ಮುಖಂಡ ಬಿ.ಕಲ್ಲೇಶಪ್ಪ ಮಾತನಾಡಿ, 2001-02ರಲ್ಲಿ ಜಿಲ್ಲಾಧಿಕಾರಿ ಆಗಿದ್ದ ಕೆ.ಶಿವರಾಂ ಆಲೋಚನೆಯಂತೆ ಎಸ್ಒಜಿ ಕಾಲನಿಯಲ್ಲಿ ಆಟೋ ಚಾಲಕರು, ಕ್ಷೌರಿಕರು, ನಾಟಕ- ರಂಗಭೂಮಿ ಕಲಾವಿದರು, ವಿಆರ್ಎಸ್ ಹಮಾಲರು, ಚಿತ್ರ ಮಂದಿರ ಕಾರ್ಮಿಕರು ಸೇರಿದಂತೆ ವಿವಿಧ, ವಿಶೇಷ ವೃತ್ತಿ ಬಾಂಧವರಿಗೆ 1500 ಆಶ್ರಯ ಮನೆಗಳನ್ನು ನಿರ್ಮಿಸಿ, ಹಂಚಿಕೆ ಮಾಡಿದ್ದರು. ಈವರೆಗೂ ಸಮಿತಿ ನೇತೃತ್ವದಲ್ಲಿ ಹೋರಾಟ ಮಾಡಿಕೊಂಡೇ, ಕಾಲನಿಗೆ ಮೂಲ ಸೌಕರ್ಯಗಳನ್ನು ಒಂದೊಂದಾಗಿ ಪಡೆಯುತ್ತಾ ಬಂದಿದ್ದೇವೆ ಎಂದರು.
ನೀರಿನ ಬಾಕಿಗೆ ನೋಟಿಸ್ ಎಷ್ಟು ಸರಿ?:
ಸೌಲಭ್ಯಗಳ ಒದಗಿಸಿ:
ಪ್ರತಿಭಟನೆಯಲ್ಲಿ ಸಮಿತಿಯ ಮಂಜುನಾಥ, ಇ.ಪ್ರದೀಪ, ಎನ್.ಮಹಾಂತೇಶ, ಜಿ.ಟಿ.ಪ್ರಕಾಶ, ಎಲ್.ಜಯಪ್ಪ, ಬಾಳಪ್ಪ, ಸತೀಶ, ಬಿ.ಧನುಷ್, ಆರ್.ಮಂಜುನಾಥ, ಬಾಬು, ಕೆ.ಜಿ.ಪ್ರಕಾಶ, ಗಣೇಶ, ಅಣ್ಣಪ್ಪ, ಸುರೇಶ, ಕೆ.ಎನ್.ಮಹಾಂತೇಶ, ಪ್ರಹ್ಲಾದ್, ಬಿ.ಗುರುಮೂರ್ತಿ, ಮಹಾಂತೇಶ ಇತರರು ಇದ್ದರು.
(ಕೋಟ್) ಕಾಲನಿಯಲ್ಲಿ 15 ರಸ್ತೆಗಳನ್ನು ಸಿಸಿ ರಸ್ತೆಗಳಾಗಿ ನಿರ್ಮಿಸಬೇಕು. ಪಾರ್ಕ್ ಅಭಿವೃದ್ಧಿಪಡಿಸಬೇಕು. ವಾಯು ವಿಹಾರಿಗಳಿಗೆ ವ್ಯಾಯಾಮದ ಸಾಮಗ್ರಿಗಳನ್ನು ಪಾರ್ಕ್ನಲ್ಲಿ ಅಳವಡಿಸಬೇಕು. ನೀರಿನ ಕಂದಾಯ ಕಡಿಮೆ ಮಾಡಿ, ಅಲ್ಪಾವಧಿ ಕಂದಾಯ ಮಾತ್ರ ಕಟ್ಟಿಸಿಕೊಳ್ಳಬೇಕು. ಎಲ್ಲ ಆಶ್ರಯ ಮನೆಗಳ ಇ-ಸ್ವತ್ತು ಮಾಡಿಕೊಡಬೇಕು. ಪಾಲಿಕೆಗೆ ಸಲ್ಲಿಸಿರುವ ಮನವಿ ಪತ್ರವನ್ನು ಸರ್ಕಾರದ ಗಮನಕ್ಕೂ ತರಬೇಕು.
- - -
ನೀರಿನ ಕಂದಾಯ ಪಾವತಿಸಲು ನೋಟಿಸ್ ಜಾರಿಗೊಳಿಸಿದ ಕ್ರಮ ಖಂಡಿಸಿ ದಾವಣಗೆರೆ ಎಸ್ಒಜಿ ಕಾಲನಿ ನಾಗರೀಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಸ್ಥಳೀಯರು ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. -29ಕೆಡಿವಿಜಿ2.ಜೆಪಿಜಿ:
ದಾವಣಗೆರೆ ಎಸ್ಒಜಿ ಕಾಲನಿ ನಾಗರೀಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.