ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಸಂಭ್ರಮದ ಹುಚ್ಚಮ್ಮ ದೇವಿ ರಥೋತ್ಸವ

KannadaprabhaNewsNetwork | Published : May 4, 2024 12:31 AM

ತಾಲೂಕಿನ ಕಸಬಾ ಹೋಬಳಿ ಯಳವಾರೆ ಗ್ರಾಮದ ಗ್ರಾಮದೇವತೆ ಹುಚ್ಚಮ್ಮ ದೇವಿಯವರ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಕಸಬಾ ಹೋಬಳಿ ಯಳವಾರೆ ಗ್ರಾಮದ ಗ್ರಾಮದೇವತೆ ಹುಚ್ಚಮ್ಮ ದೇವಿಯವರ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನೆರವೇರಿತು. ಗ್ರಾಮದೇವತೆ ಹುಚ್ಚಮ್ಮ ದೇವಿಯವರ ರಥೋತ್ಸವದ ಅಂಗವಾಗಿ ಸಂಪ್ರದಾಯದಂತೆ ಗ್ರಾಮದ ಹೊರ ಭಾಗದಲ್ಲಿರುವ ಮೂಲ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಮುಂಜಾನೆಯೇ ದೇವಾಲಯಕ್ಕೆ ಆಗಮಿಸಿದ್ದ ಭಕ್ತರು ದೇವಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು.

ರಥೋತ್ಸವದ ಅಂಗವಾಗಿ ಗ್ರಾಮದ ಬೀದಿಗಳನ್ನು ತಳಿರು-ತೋರಣಗಳು ಹಾಗೂ ಬಾಲೆಗಿಡಗಳಿಂದ ಶೃಂಗರಿಸಲಾಗಿತ್ತು. ಹುಚ್ಚಮ್ಮ ದೇವಿಯವರ ಉತ್ಸವ ಮೂರ್ತಿಯನ್ನು ಪುಷ್ಪಾಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಶ್ರೀ ಜೇನುಕಲ್ ಸಿದ್ದೇಶ್ವರ ಸ್ವಾಮಿಯವರ ರಥೋತ್ಸವವನ್ನು ಬೆಳಗ್ಗೆ ೧೦.೩೦ಗೆ ನೆರವೇರಿಸಲಾಯಿತು.ರಥೋತ್ಸವದ ಅಂಗವಾಗಿ ಹುಚ್ಚಮ್ಮ ದೇವಿಯವರ ಸಿಡಿ ನಡೆಯಿತು. ನಂತರ ಉಯ್ಯಾಲೆ ಸೇವೆ, ದೇವಾಲಯದ ಮುಂಭಾಗದ ತೇರು ಬೀದಿಯ ರಥ ಮಂಟಪಕ್ಕೆ ಮಂಗಳವಾಧ್ಯಗಳೊಂದಿಗೆ ಕರೆ ತಂದರು ನಂತರ ಬಣ್ಣ-ಬಣ್ಣದ ಬಟ್ಟೆ ಹಾಗೂ ದೊಡ್ಡ ಹೂವಿನ ಹಾರಗಳಿಂದ ಶೃಂಗರಿಸಲಾಗಿದ್ದ ರಥಕ್ಕೆ 3 ಪ್ರದಕ್ಷಿಣೆ ಹಾಕಿ ಹುಚ್ಚಮ್ಮ ದೇವಿಯವರನ್ನು ಕೂರಿಸಲಾಯಿತು. ರಥಕ್ಕೆ ಪೂಜೆ ಸಲ್ಲಿಸಿ ಗಾಲಿಗಳಿಗೆ ತೆಂಗಿನಕಾಯಿ ಓಡೆಯುತ್ತಿದ್ದಂತೆ ಭಕ್ತರು ಶ್ರೀದೇವಿಯ ನಾಮಸ್ಮರಣೆಯಲ್ಲಿ ರಥೋತ್ಸವಕ್ಕೆ ಚಾಲನೆ ನೀಡಿದರು..

ರಥೋತ್ಸವ ಮುಂದೆ-ಮುಂದೆ ಸಾಗುತ್ತಿದಂತೆ ನೆರದಿದ್ದ ಸಹಸ್ರಾರು ಭಕ್ತರು ಸಮೂಹ ಬಾಳೇಹಣ್ಣು ಹಾಗೂ ದವನ ಪುಷ್ಪಗಳನ್ನು ರಥದ ಮೇಲೆ ಎಸೆದು ತಮ್ಮ ಭಕ್ತಿಬಾವನೆಗಳನ್ನು ಸಮರ್ಪಿಸಿತು. ರಥೋತ್ಸವ ನೆರವೇರಿದ ನಂತರ ಭಕ್ತಾಧಿಗಳಿಗೆ ಕುಡಿಯಲು ಪಾನಕ ಫಲಹಾರ ಮತ್ತು ನೀರು ಮಜ್ಜಿಗೆಯನ್ನು ನೀಡಲಾಯಿತು. ಅಲ್ಲದೆ ರಸ್ತೆಗಳ ಬದಿಯಲ್ಲಿ ಜನರಿಗೆ ತಂಪು ಪಾನೀಯ ಮಜ್ಜಿಗೆಯನ್ನು ಕುಡಿಯಲು ವಿತರಿಸಿದರು. ದೇವಾಲಯ ಸೇವಾ ಸಮಿತಿವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಎರ್ಪಡಿಸಿತ್ತು.ರಥೋತ್ಸವದಲ್ಲಿ ಹುಚ್ಚಮ್ಮ ದೇವಿ ದೇವಾಲಯ ಟ್ರಸ್ಟ್ ಅಧ್ಯಕ್ಷ ಬೋರನಕೊಪ್ಪಲು ಸ್ವಾಮಿ ,ಯಳವಾರೆ ಕೇಶವ ಮೂರ್ತಿ, ನಾಗರಾಜು, ಧರ್ಮಶೇಖರ್, ಕಬ್ಬೂರಳ್ಳಿ ರಾಜಣ್ಣ , ಹಾರನಹಳ್ಳಿ ಮಹೇಶಣ್ಣ ,ಹೆಚ್.ಎಂ ನಾಯ್ಕ್ ,ವೈ.ಬಿ ಜಯ್ಯಣ್ಣ , ಯಳವಾರೆ ರವಿ ಕುಮಾರ್ ,ಬೋರನಕೊಪ್ಪಲು ಶೇಖರಪ್ಪ ,ಅಣ್ಣನಾಯಕನಹಳ್ಳಿ ನವೀನ್ ,ಯಳವಾರೆ ರಂಗಸ್ವಾಮಿ ,ಕಬ್ಬೂರಳ್ಳಿ ಗೋಪಾಲ್ ಹಾಗೂ ಟ್ರಸ್ಟ್‌ನ ಎಲ್ಲಾ ಸದಸ್ಯರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಿದರು.