ಮರಗಳಿಲ್ಲದಿದ್ದರೆ ಮನುಕುಲಕ್ಕೆ ಅಪಾಯ

KannadaprabhaNewsNetwork |  
Published : Jul 23, 2026, 01:45 AM IST
ಪೊಟೋ೨೨ಸಿಪಿಟಿ೨:  ಪಟ್ಟಣದಲ್ಲಿ ನಡೆದ ನಮ್ಮ ನಡಿಗೆ-ಹಸಿರಿನ ಕಡೆಗೆ ಅಭಿಯಾನದಲ್ಲಿ ಭಾಗವಹಿಸಿದ್ದ ಜನರು. | Kannada Prabha

ಸಾರಾಂಶ

ಚನ್ನಪಟ್ಟಣ: ಆಧುನಿಕತೆ ಹೆಸರಿನಲ್ಲಿ ಮರಗಳನ್ನು ಕಡಿದು ನಾಶ ಮಾಡುತ್ತಿದ್ದು, ಇದರಿಂದ ಪರಿಸರದ ಮೇಲಿನ ಸಮತೋಲನ ಹಾಳಾಗುತ್ತಿದೆ. ಅರಣ್ಯ ನಾಶವಾದಲ್ಲಿ ಮುಂದೆ ಮನುಕುಲದ ನಾಶ ನಿಶ್ಚಿತ ಎಂದು ವಲಯ ಅರಣ್ಯಾಧಿಕಾರಿ ಮಲ್ಲೇಶ್ ತಿಳಿಸಿದರು

ಚನ್ನಪಟ್ಟಣ: ಆಧುನಿಕತೆ ಹೆಸರಿನಲ್ಲಿ ಮರಗಳನ್ನು ಕಡಿದು ನಾಶ ಮಾಡುತ್ತಿದ್ದು, ಇದರಿಂದ ಪರಿಸರದ ಮೇಲಿನ ಸಮತೋಲನ ಹಾಳಾಗುತ್ತಿದೆ. ಅರಣ್ಯ ನಾಶವಾದಲ್ಲಿ ಮುಂದೆ ಮನುಕುಲದ ನಾಶ ನಿಶ್ಚಿತ ಎಂದು ವಲಯ ಅರಣ್ಯಾಧಿಕಾರಿ ಮಲ್ಲೇಶ್ ತಿಳಿಸಿದರು.

ರೇಷ್ಮೆನಾಡು ಕ್ರೀಡಾ ಮತ್ತು ಸಾಂಸ್ಕೃತಿಕ ಟ್ರಸ್ಟ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಹಾಗೂ ಬೆಳಕೆರೆಯ ಸಂಪೂರ್ಣ ಸಮೂಹ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ನಮ್ಮ ನಡಿಗೆ-ಹಸಿರಿನ ಕಡೆಗೆ ಅಭಿಯಾನದಡಿ ಪಟ್ಟಣದ ಸ್ಪನ್‌ಸಿಲ್ಕ್‌ಮಿಲ್‌ನಿಂದ ಶೇರುವಾ ಹೋಟೆಲ್ ಸರ್ಕಲ್‌ನಿಂದ ಕಾವೇರಿ ವೃತ್ತದವರೆಗೆ ಹಮ್ಮಿಕೊಂಡಿದ್ದ ೨ ಕಿಮೀ ಮ್ಯಾರಥಾನ್‌ನಲ್ಲಿ ಅವರು ಮಾತನಾಡಿದರು.

ಪ್ರಕೃತಿಯ ಸಮತೋಲನಕ್ಕೆ ಪರಿಸರದಲ್ಲಿ ಶೇ. ೩೫ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ ಆಧುನಿಕತೆ ಹೆಸರಲ್ಲಿ ಕಾಡನ್ನು ನಾಶ ಮಾಡುತ್ತಿದ್ದು, ಇಂದು ಕಾಡಿನ ಪ್ರಮಾಣ ಶೇ.೨೯ರಷ್ಟಾಗಿದೆ. ಈ ನಿಟ್ಟಿನಲ್ಲಿ ಪರಿಸರದ ಸಮತೋಲನ ಕಾಪಾಡಲು ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಪೋಷಿಸಬೇಕು. ನಮಗೆ ಗಾಳಿ, ನೀರು ಎಲ್ಲವೂ ಮರಗಳಿಂದಲೇ ಸಿಗುತ್ತದೆ. ಪ್ರತಿಯೊಬ್ಬರು ಮರಗಳನ್ನು ಬೆಳೆಸಿ ಕಾಡು ರಕ್ಷಿಸಬೇಕು ಎಂದರು.

ಮ್ಯಾರಾಥಾನ್‌ಗೆ ಬಮೂಲ್ ಮತ್ತು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಲಿಂಗೇಶ್‌ಕುಮಾರ್‌ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣಕ್ಕೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಪರಿಸರ ರಕ್ಷಣೆಗೂ ನೀಡಬೇಕು. ಈ ನಿಟ್ಟಿನಲ್ಲಿ ಮರ ಕಡಿದರೆ ಸಸಿ ನೆಟ್ಟು ಬೆಳೆಸುವ ಮನೋಭಾವ ಪ್ರತಿಯೊಬ್ಬರ ಮೇಲಿದೆ. ಈ ನಿಟ್ಟಿನಲ್ಲಿ ರಮೇಶ್‌ಗೌಡರು ನೀಡಿರುವ ಹಸಿರಿದ್ದರೆ ಉಸಿರು ಆಂದೋಲನ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸಿ ಕೊಡುವುದಾಗಿದೆ. ಈ ಆಂದೋಲನಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.

ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ, ಉತ್ತಮ ಪರಿಸರ ನಿರ್ಮಾಣ ಮಾಡುವ ಜೊತೆಗೆ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಗಿಡಮರಗಳನ್ನು ನೆಟ್ಟು ಪೋಷಿಸುವ ಜೊತೆಗೆ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ನಾವೆಲ್ಲಾ ಸಂಕಲ್ಪ ಮಾಡಬೇಕಿದೆ. ಈ ನಿಟ್ಟಿನಲ್ಲಿ ಮನೆಗೊಂದು ಮರ, ದೇಶಕ್ಕೆ ವರ ಎಂಬ ಘೋಷ ವಾಕ್ಯ ನಮ್ಮೆಲ್ಲರ ಸಂಕಲ್ಪವಾಗಬೇಕು ಎಂದರು.

ಆದಿಚುಂಚನಗಿರಿ ಅಂಧರ ಶಾಖಾಮಠದ ಪೀಠಾಧ್ಯಕ್ಷ ಡಾ. ಅನ್ನದಾನೇಶ್ವರನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ನಿವೃತ್ತ ಪ್ರಾಂಶುಪಾಲ ನಿಂಗೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಪುರ ಪೊಲೀಸ್ ಠಾಣೆಯ ಪಿಎಸ್‌ಐ ನಾಯಕ್, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಸಿ.ವೀರೇಗೌಡ, ಜೆಡಿಎಸ್ ಮುಖಂಡ ಎಂಜಿಕೆ ಪ್ರಕಾಶ್, ಡಾ. ಟಿ.ವಿ.ಶಂಕರ್, ಸಂಪೂರ್ಣ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಬೈರೇಗೌಡ, ಎಂಜಿಆರ್ ಶಂಕರಪ್ಪ, ಕಕಜ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‌ಗೌಡ ಇತರರಿದ್ದರು.

ಪೊಟೋ೨೨ಸಿಪಿಟಿ೨: ಚನ್ನಪಟ್ಟಣದಲ್ಲಿ ನಮ್ಮ ನಡಿಗೆ-ಹಸಿರಿನ ಕಡೆಗೆ ಅಭಿಯಾನ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈ ಕಚೇರಿಗೆ ಬಿಜೆಪಿಗರ ಮುತ್ತಿಗೆ ಯತ್ನ: ಹೈಡ್ರಾಮಾ!
ಮಳೆಯ ಕಣ್ಣಾಮುಚ್ಚಾಲೆ: ರೈತರಿಗೆ ತಪ್ಪದ ಆತಂಕ