ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ನಂತರ ಮಾತನಾಡಿದ ಅವರು, ಈ ಯೋಜನೆಯಿಂದಾಗಿ ಕೂಳಗೆರೆ, ಕೊಕ್ಕರೆ ಬೆಳ್ಳೂರು, ಬನ್ನಹಳ್ಳಿ, ಬಸವೇಗೌಡನ ದೊಡ್ಡಿ, ಹುಲಿಕೆರೆ, ಅರೆಕಲ್ಲುದೊಡ್ಡಿ, ಚುಂಚಗನಹಳ್ಳಿ, ಗೊಲ್ಲರದೊಡ್ಡಿ, ಅಂಕೇಗೌಡನ ದೊಡ್ಡಿ, ಹೊಸದೊಡ್ಡಿ, ಅರುವನಹಳ್ಳಿ, ತೊಪ್ಪನಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಿಗೆ ಅನುಕೂಲವಾಗಲಿದೆ ಎಂದರು.
ಕೂಳಗೆರೆಯ ಭಾಗದ ಹತ್ತಾರು ಗ್ರಾಮಗಳ ರೈತರು ಹಿಂದಿನಿಂದಲೂ ನೀರಿನ ಸಮಸ್ಯೆ ಹಾಗೂ ವಿದ್ಯುತ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ಈ ಸಮಸ್ಯೆಗಳನ್ನು ನಿವಾರಿಸಲು ₹16 ಕೋಟಿ ವೆಚ್ಚದ ವಿದ್ಯುತ್ ವಿತರಣಾ ಉಪ ಕೇಂದ್ರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದೇನೆ. ಇದರಿಂದ ಸುತ್ತಮುತ್ತಲಿನ ಗ್ರಾಮದ ಜನರಿಗೆ ಗುಣಮಟ್ಟದ ವಿದ್ಯುತ್ ಸಿಗುವ ಜೊತೆಗೆ, ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ವ್ಯತ್ಯಯ ತಪ್ಪಲಿದೆ ಎಂದು ತಿಳಿಸಿದರು.ಉದ್ಘಾಟನೆಯಾಗಲಿರುವ ಬನ್ನಹಳ್ಳಿ ಏತ ನೀರಾವರಿ ಯೋಜನೆಗೂ ಅನುಕೂಲವಾಗಲಿದೆ. ಆ ಮೂಲಕ ಹತ್ತಾರು ಗ್ರಾಮಗಳ ಕೆರೆಗಳನ್ನು ತುಂಬಿಸಲು ಪ್ರಯೋಜನವಾಗಲಿದೆ. ರೈತರಿಗೆ ವ್ಯವಸಾಯ ಮಾಡಲು ನೀರು ಸಿಗಲಿದೆ. ಅಂತರ್ಜಲ ಕೂಡಾ ವೃದ್ಧಿಯಾಗಲಿದೆ ಎಂದು ಹೇಳಿದರು.
ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಲುವರಾಜು, ಮುಖಂಡರಾದ ಕೆಂಪರಾಜು, ಅರುವನಹಳ್ಳಿ ಸಿದ್ದರಾಜು, ಜಯರಾಮು, ಸಿಪಾಯಿ ಶ್ರೀನಿವಾಸ್, ಅಧಿಕಾರಿಗಳು ಸೇರಿ ಹಲವರು ಉಪಸ್ಥಿತರಿದ್ದರು.