ನಾಳೆ ಹುತ್ತರಿ ಹಾಡಿನ ದೃಶ್ಯ ನಮನ ಅನಾವರಣ

KannadaprabhaNewsNetwork |  
Published : Feb 19, 2025, 12:47 AM IST
ಚಿತ್ರ : ಪಂಜೆ ಮಂಗೇಶರಾಯರು | Kannada Prabha

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್‌ ಕೊಡಗು ಜಿಲ್ಲಾ ಘಟಕದ ವತಿಯಿಂದ ಫೆ. 20ರಂದು ಆಯೋಜಿತ ಖ್ಯಾತ ಸಾಹಿತಿ ಪಂಜೆ ಮಂಗೇಶರಾಯರ 150ನೇ ವರ್ಷೋತ್ಸವದಂದು ಹುತ್ತರಿ ಹಾಡಿನ ದೃಶ್ಯ ನಮನ ಅನಾವರಣಗೊಳ್ಳಲಿದೆ.

ಮಡಿಕೇರಿ: ಕನ್ನಡ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕದ ವತಿಯಿಂದ ಫೆ 20 ರಂದು ಗುರುವಾರ ಆಯೋಜಿತ ಖ್ಯಾತ ಸಾಹಿತಿ ಪಂಜೆ ಮಂಗೇಶರಾಯರ 150 ನೇ ವರ್ಷೋತ್ಸವದಂದು ಹುತ್ತರಿ ಹಾಡಿನ ದೃಶ್ಯ ನಮನ ಅನಾವರಣಗೊಳ್ಳಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವಕಾಮತ್ ತಿಳಿಸಿದ್ದಾರೆ.

ನಗರದ ಜೂನಿಯರ್ ಕಾಲೇಜಿನಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಪಂಜೆ ಮಂಗೇಶರಾಯರ ಪ್ರಸಿದ್ಧ ಹಾಡಾಗಿರುವ ಹುತ್ತರಿ ಹಾಡಿಗೆ ದೃಶ್ಯ ಸಂಕಲನಗೊಳಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆ ಮಾಡಲಾಗುತ್ತದೆ. ಈ ಮೂಲಕ ಕೊಡಗಿನ ನಾಡಗೀತೆಯಾದ ಹುತ್ತರಿ ಹಾಡು ವಿಶ್ವವ್ಯಾಪಿ ಜನರನ್ನು ತಲುಪಲಿದೆ. ಈ ದೃಶ್ಯ ನಮನವನ್ನು ಅನಿಲ್ ಹೆಚ್.ಟಿ ಅವರ ಪರಿಕಲ್ಪನೆ ಮತ್ತು ಜೀವಿತಾ ಶೇಖರ್ ಸಂಕಲನದಲ್ಲಿ ಸಿದ್ಧಗೊಳಿಸಿದೆ ಎಂದೂ ಕೇಶವಕಾಮತ್ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಾಹಿತಿ ಜಲಜ ಶೇಖರ್ ಅವರ ಕೃತಿ ಅಗ್ನಿಕುಂಡ ಮತ್ತು ಉಳುವಂಗಡ ಕಾವೇರಿ ಉದಯ ಆವರ ಕೃತಿ ಮುಕ್ತಕ ಮಾಣಿಕ್ಯ ವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಎಸ್ ಪೊನ್ನಣ್ಣ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ನೆರವೇರಿಸಲಿದ್ದಾರೆ ಎಂದು ಕೇಶವ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಡಿಕೇರಿಯ ಜೂನಿಯರ್ ಕಾಲೇಜ್ ರಸ್ತೆಗೆ ಪಂಜೆ ಮಂಗೇಶರಾಯರ ರಸ್ತೆ ಎಂದು ಈ ಹಿಂದೆ ಹೆಸರಿಸಿಟ್ಟಿದ್ದು ಆ ಫಲಕವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಎಸ್ ಪೊನ್ನಣ್ಣ ಹಾಗೂ ಪದವಿಪೂರ್ವ ಕಾಲೇಜಿನ ಆವರಣದಲ್ಲಿರುವ ಎಲ್ಲ ವಿದ್ಯಾ ಸಂಸ್ಥೆಗಳಿಗೆ ಪಂಜೆ ಮಂಗೇಶರಾಯರ ಭಾವಚಿತ್ರವನ್ನು ಸಾಹಿತ್ಯ ಪರಿಷತ್ ವತಿಯಿಂದ ಉಡುಗೊರೆಯಾಗಿ ನೀಡಲಿದ್ದು ಅದನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾಕ್ಟರ್ ಮಂತರ್ ಗೌಡ ಅನಾವರಣಗೊಳಿಸಲಿದ್ದಾರೆ ಎಂದೂ ಕೇಶವ ಕಾಮತ್ ಮಾಹಿತಿ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ