ಕನ್ನಡಪ್ರಭ ವಾರ್ತೆ ಕಡೂರು
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪಾರಂಪರಿಕ ಕಲ್ಲು ಕೆಲಸ ಮಾಡುವವರ ಸಮಸ್ಯೆ ಕುರಿತ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಸುಮಾರು 86ಕ್ಕೂ ಹೆಚ್ಚಿನ ಬಡವರು ರಾಯಧನ ಪಾವತಿಸಿ ಕಲ್ಲುಭೂಮಿ(ಕೋರೆ) ಗುತ್ತಿಗೆ ಪಡೆದು ಕಲ್ಲು ಒಡೆದು ಜೀವನ ಮಾಡುತ್ತಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಅರ್ಜಿ ಹಾಕಿ ನವೀಕರಣಕ್ಕಾಗಿ ಕಾಯುತ್ತಿರುವ ಅರ್ಹ ಕಲ್ಲು ಒಡೆಯುವ ಕಾಯಕದವರಿಗೆ ಅನುಮತಿ ಮುಂದುವರೆಸಬೇಕಿದೆ. ಪಾರಂಪರಿಕವಾಗಿ ಕಲ್ಲು ಒಡೆದು ಜೀವನ ನಡೆಸುವವರ ಪರವಾಗಿ ನಾನಿದ್ದೇನೆ. ಈಗಿನ ಜಾಗದಲ್ಲೆ ಅವರು ಕಾಯಕ ಮುಂದುವರೆಸಲು ಯಾವ ತೊಂದರೆಯೂ ಇಲ್ಲ. ಆದರೆ ಅವರಿಗೆ ನೀಡಿರುವ ಅನುಮತಿ ನವೀಕರಿಸಲು ತೊಂದರೆ ಎದುರಾಗಿವೆ ಇದಕ್ಕೆ ಪರಿಹಾರ ಹುಡುಕಿ ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಕೆಲವೆಡೆ ಕಲ್ಲು ಕೆಲಸದವರು ರಾಯಧನ ಪಾವತಿಸಿ ಕಲ್ಲು ಒಡೆಯಲು ಅನುಮತಿ ಪಡೆಯಲು ಹೊಸದಾಗಿ ಅಥವಾ ನವೀಕರಣಕ್ಕಾಗಿ ಅರ್ಜಿ ಹಾಕಿದ್ದಾರೆ. ಆದರೆ ಕೆಲ ಜಾಗಗಳು ಅರಣ್ಯ ಎಂದು ಅಥವಾ ಇನ್ಯಾವುದೋ ಇಲಾಖೆಗೆ ಸೇರಿ ಒಂದಿಷ್ಟು ಗೊಂದಲವಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಈ ಜಾಗಗಳು ಉಳ್ಳವರ ಪಾಲಾಗದೆ ಕಷ್ಟಜೀವಿಗಳಿಗೆ ಜೀವನಾಧಾರವಾಗಬೇಕೆಂಬ ಆಶಯ ನನ್ನದಾಗಿದೆ. ನಾನು ಶಾಸಕನಾಗಿರುವ ತನಕ ಈಗ ಕಲ್ಲು ಒಡೆಯುತ್ತಿರುವವರ ಜಾಗಕ್ಕೆ ಬೇರೆಯವರು ಬರುವುದು ಸಾಧ್ಯವಿಲ್ಲ ಇದು ಖಚಿತ ಎಂದು ತಿಳಿಸಿದರು.ಶ್ರೀಮಂತ ಕ್ರಷರ್ ಮಾಲೀಕರು ಪಾರಂಪರಿಕ ಕೆಲಸಗಾರರು ಕಲ್ಲು ಕೆಲಸ ಮಾಡುತ್ತಿರುವ ಜಾಗವನ್ನು ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಇದು ಸಲ್ಲದು. ಯಾವುದೇ ಕಾರಣಕ್ಕೂ ಅವರಿಗೆ ಈ ಜಾಗಗಳನ್ನು ನೀಡಬಾರದು. ಇದರಿಂದ ಕಷ್ಟಜೀವಿಗಳಿಗೆ ಅನ್ಯಾಯವಾಗುತ್ತದೆ ಎಂದರು.
ಸಭೆಯಲ್ಲಿ ತಹಸೀಲ್ದಾರ್ ಎಂ.ಪಿ.ಕವಿರಾಜ್, ಕಲ್ಲು ಕೆಲಸಗಾರರ ಮತ್ತು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಆರ್.ಶಿವಕುಮಾರ್, ಕಾರ್ಯದರ್ಶಿ ಗೋಪಿ, ಮಹೇಂದ್ರ, ಬಾಬು, ಅರುಣ್ಕುಮಾರ್, ಗಿರೀಶ್, ರಾಜಣ್ಣ ಷಣ್ಮುಖಾಭೋವಿ, ಸುಬ್ರಮಣ್ಯ ಇದ್ದರು.