ಕೆರೆಗಳಿಗೆ ಕೃಷ್ಣೆಯ ನೀರು ತುಂಬಿಸಿದ ತೃಪ್ತಿ ನನಗಿದೆ

KannadaprabhaNewsNetwork |  
Published : Jan 03, 2024, 01:45 AM IST
೦೨ವೈಎಲ್‌ಬಿ೩ :ಯಲಬುರ್ಗಾ ತಾಲೂಕಿನ ತರಲಕಟ್ಟಿ ಗ್ರಾಮದ ಕೆರೆಗೆ ಕೃಷ್ಣಾ ನದಿ ನೀರು ಬಂದು ತುಂಬಿದ ಹಿನ್ನಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮವನ್ನು ಮಾಜಿ ಸಚಿವ ಹಾಲಪ್ಪ ಆಚಾರ ಪೂಜಾ ನೇರವೇರಿಸಿದರು. | Kannada Prabha

ಸಾರಾಂಶ

ಅಂದಿನ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ತಾಜ್ ವೆಸ್ಟ್ವೆಂಡ್ ಹೊಟೇಲ್‌ನಲ್ಲಿ ಭೇಟಿ ಮಾಡಿ ಕೊಪ್ಪಳ ಏತ ನೀರಾವರಿ ಯೋಜನೆಗೆ ಹಣ ಬಿಡುಗಡೆ ಮಾಡಿಸಿ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಲು ಸಹಕಾರವಾಯಿತು

ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಹಾಲಪ್ಪ ಆಚಾರ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಈ ತಾಲೂಕು ಬಹಳ ಎತ್ತರಕ್ಕಿದೆ, ಸತ್ಯಹರಿಶ್ಚಂದ್ರ ಬಂದರೂ ನೀರು ತರಲು ಆಗುವುದಿಲ್ಲ ಎಂದು ಈ ಮಾಜಿ ಸಚಿವ ರಾಯರಡ್ಡಿ ಹೇಳಿದ್ದರೂ ನಾನು ಸಚಿವನಿದ್ದಾಗ ಹೇಗಾದರೂ ಮಾಡಿ ತಾಲೂಕಿನ ಕೆರೆಗಳಿಗೆ ಕೃಷ್ಣೆಯ ನೀರು ತುಂಬಿಸಿದ ತೃಪ್ತಿ ನನಗಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ತಾಲೂಕಿನ ತರಲಕಟ್ಟಿ ಗ್ರಾಮದ ಕೆರೆಗೆ ಕೃಷ್ಣಾ ನದಿ ನೀರು ಬಂದು ತುಂಬಿದ ಹಿನ್ನೆಲೆಯಲ್ಲಿ ಮಂಗಳವಾರ ರೈತರು ಆಯೋಜಿಸಿದ್ದ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಮಾತನಾಡಿದ ಅವರು, ಬೇವೂರು ಗ್ರಾಮದಲ್ಲಿ ಕೃಷ್ಣಾ ಬಿ ಸ್ಕೀಂ ಯೋಜನೆಗೆ ಅಡಿಗಲ್ಲು ಹಾಕಿದ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕ ಅಡಿಗಲ್ಲು ಅಲ್ಲ ಅಡ್ಡಗಾಲು ಎಂದು ಟೀಕಿಸಿದರೂ ನಾನು ನೀರು ತಂದು ತುಂಬಿಸಲು ಹೇಗೆ ಸಾಧ್ಯವಾಯಿತು. ಇಚ್ಛಾಶಕ್ತಿ ಇದ್ದರೆ ಏನೆಲ್ಲ ಮಾಡಲು ಸಾಧ್ಯ ಎಂದರು.

ಈ ಕ್ಷೇತ್ರದಲ್ಲಿ ೨೦ವರ್ಷ ಆಡಳಿತ ನಡೆಸಿದವರು ಅಕ್ಕಪಕ್ಕದಲ್ಲಿರುವ ತುಂಗೆ, ಕೃಷ್ಣೆಯಿಂದ ನೀರು ತಂದು ಎಂದೂ ಈ ತಾಲೂಕನ್ನುನೀರಾವರಿಯನ್ನಾಗಿ ಮಾಡಬಹುದಿತ್ತು. ಆದರೆ ರೈತರ ಪರ ಕಾಳಜಿ ಇಲ್ಲದಿರುವುದಕ್ಕೆ ಕೆರೆ ನಿರ್ಮಾಣವಾಗಲಿ, ಕೆರೆಗೆ ನೀರು ತುಂಬಿಸುವ ಯೋಜನೆಯಾಗಲಿ ಮಾಡಲಿಲ್ಲ. ನಾನು ಅಧಿಕಾರಕ್ಕಾಗಿ ರಾಜಕಾರಣ ಮಾಡಿಲ್ಲ. ಜನತೆಯ ಆಶೋತ್ತರಕ್ಕೆ ಸ್ಪಂದಿಸಿ ಇಚ್ಛಾಶಕ್ತಿಯಿಂದ ಕೃಷ್ಣೆಯ ನೀರನ್ನು ತಂದು ಕೆರೆ ತುಂಬಿಸಲು ಕ್ಷೇತ್ರದ ಜನರ ಸಹಕಾರದಿಂದ ಸಾಧ್ಯವಾಯಿತು ಎಂದು ಶಾಸಕ ಬಸವರಾಜ ರಾಯರಡ್ಡಿ ವಿರುದ್ದ ಹರಿಹಾಯ್ದರು.

ಅಂದಿನ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ತಾಜ್ ವೆಸ್ಟ್ವೆಂಡ್ ಹೊಟೇಲ್‌ನಲ್ಲಿ ಭೇಟಿ ಮಾಡಿ ಕೊಪ್ಪಳ ಏತ ನೀರಾವರಿ ಯೋಜನೆಗೆ ಹಣ ಬಿಡುಗಡೆ ಮಾಡಿಸಿ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಲು ಸಹಕಾರವಾಯಿತು. ಕಾಂಗ್ರೆಸ್‌ ಸರ್ಕಾರ ಸುಳ್ಳು ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ೮ ತಿಂಗಳಾದರೂ ಕ್ಷೇತ್ರದಲ್ಲಿ ಇದುವರೆಗೊ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆದಿಲ್ಲ ಎಂದು ಆರೋಪಿಸಿದರು.

ಕಲಾವಿದ ಶ್ರೀಕಾಂತಗೌಡ ಪಾಟೀಲ, ವೀರಣ್ಣ ಹುಬ್ಬಳ್ಳಿ, ಹನುಮಂತ ಕನಕಗಿರಿ, ಶರಣಪ್ಪ ಹೊಸ್ಕೇರಿ, ಶಂಕ್ರಪ್ಪ ಸುರಪುರ, ಅಯ್ಯನಗೌಡ ಕೆಂಚಮ್ಮಮನವರ ಮಾತನಾಡಿದರು.

ವೇದಮೂರ್ತಿ ಶಿವನಾಗಯ್ಯ ನಿಲೋಗಲ್ ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಬಸವಲಿಂಗಪ್ಪ ಭೂತೆ, ಕಳಕಪ್ಪ ಕಂಬಳಿ, ಬಸವರಾಜ ಗೌರಾ, ಅಮರೇಶ ಹುಬ್ಬಳ್ಳಿ, ಹನುಮಂತಪ್ಪ ಹನುಮಾಪೂರ, ಫಕೀರಪ್ಪ ತಳವಾರ, ಪ್ರಭುಗೌಡ ಪೋಲಿಸ್‌ಪಾಟೀಲ, ರಂಗನಾಥ ವಲ್ಮಕೊಂಡಿ, ಶ್ರೀನಿವಾಸ ತಿಮ್ಮಾಪೂರ, ಶಿವಪ್ಪ ವಾದಿ, ಶಂಕರಪ್ಪ ನಿಲೋಗಲ್, ಶರಣಪ್ಪ ಬಣ್ಣದಭಾವಿ, ಅಯ್ಯಪ್ಪ ಗುಳೆ, ಗದ್ದೆಪ್ಪ ಚಿಲವಾಡಗಿ, ಹನುಮಂತ ರಾಠೋಡ, ರುದ್ರಯ್ಯ ಬೀಳಗಿಮಠ ಸುರೇಶ ಹೊಸಳ್ಳಿ, ಮತ್ತಿತರರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...