ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಮಗನ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯ ಅಪಹರಣ ಕೇಸಿನಲ್ಲಿ ಜಾಮೀನು ಪಡೆದು ಹತ್ತು ತಿಂಗಳ ನಂತರ ಹಾಸನ ಮತ್ತು ಮೈಸೂರಿಗೆ ತೆರಳಲು ಕೋರ್ಟ್ ಅನುಮತಿ ನೀಡಿದ ನಂತರ ಸೋಮವಾರ ಪಟ್ಟಣದ ತಮ್ಮ ನಿವಾಸಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ, ಹೂವಿನ ಮಳೆಗೆರೆದು, ಆರತಿ ಬೆಳಗಿ, ಬೂದುಗುಂಬಳ ನೀವಳಿಸಿ, ಅತ್ಮೀಯವಾಗಿ ಸ್ವಾಗತಿಸಿದ ನಂತರ ಮಾಧ್ಯಮದ ಜತೆ ಮಾತನಾಡಿದರು. ನಾನು ಬರುತ್ತಿರುವ ವಿಷಯ ಯಾರಿಗೂ ತಿಳಿಸಿರಲಿಲ್ಲ, ಆದರೂ ಹೇಗೋ ಮಾಹಿತಿ ಪಡೆದು ಹಿರಿಸಾವೆಯಿಂದ ನನ್ನೊಟ್ಟಿಗೆ ತುಂಬಾ ಜನ ಬಂದರು ಮತ್ತು ೨೦ಕ್ಕೂ ಹೆಚ್ಚು ಕಡೆ ಅತ್ಮೀಯವಾಗಿ ಸ್ವಾಗತಿಸಿದರು, ಇಷ್ಟೊಂದು ಜನ ನೋಡಿ ನನಗೆ ಮುಜುಗರ ಆಯಿತು ಹಾಗೂ ತುಂಬಾ ಸಂತೋಷ ಆಗಿದೆ, ಜನರಿಗೆ ಋಣಿಯಾಗಿ ಇರ್ತೇನೆ ಎಂದರು.
ನನಗೆ ಹಾಸನಕ್ಕೆ ಬರಲು ಅವಕಾಶ ಸಿಕ್ಕಿದೆ, ಹಾಗಾಗಿ ಜನರ ಜೊತೆ ಇರ್ತೇನೆ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿ ಜನರೊಟ್ಟಿಗೆ ನಾನೇನು ಡಿಸ್ಕನೆಕ್ಟ್ ಆಗಿರಲಿಲ್ಲ, ಜನರ ಜೊತೆ ಇದ್ದೆ, ಮುಂದೆಯೂ ಇರ್ತೀನಿ, ಹಾಸನದಿಂದ ದೂರು ಉಳಿಯೊಲ್ಲ ಎಂದರು.