ಹುಬ್ಬಳ್ಳಿ: ನನ್ನ ರಾಜಕೀಯ ರಂಗದಲ್ಲಿ ಸಾಕ್ಷಟು ಏಳು, ಬೀಳು ಎಲ್ಲವನ್ನೂ ಅನುಭವಿಸಿದ್ದೇನೆ. ರಾಜಕೀಯದಲ್ಲಿ ಈಗಲೂ ನನ್ನನ್ನು ಕಡೆಗಣಿಸುವ ಕಾರ್ಯ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ್ ತೇವ್ರ ಬೇಸರ ವ್ಯಕ್ತಪಡಿಸಿದರು.
ಒಂದು ರಾಜಕೀಯ ಪಕ್ಷ ನನ್ನನ್ನು ಬಳಸಿಕೊಂಡು ಬೆಳೆಯಿತು. ಬಳಿಕ ನನ್ನನ್ನೇ ಕಡೆಗಣಿಸುವ ಕಾರ್ಯ ಮಾಡಿತು. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗಲೆಲ್ಲ ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗುತ್ತಿರುವೆ. ಸಮಾಜ ಬಾಂಧವರ ಆಶೀರ್ವಾದದಿಂದಲೇ ನಾನು ಇಂದು ಈ ಸ್ಥಾನದಲ್ಲಿರುವೆ ಎಂದು ಬಣಜಿಗ ಸಮುದಾಯಕ್ಕೆ ಧನ್ಯವಾದ ಹೇಳಿದರೆ.
ವೀರಶೈವ -ಲಿಂಗಾಯತ ಧರ್ಮವಾಗಲಿಲಿಂಗಾಯತ ಸ್ವತಂತ್ರ್ಯ ಧರ್ಮ ಮಾಡಿ ಹಿಂದುಳಿದ ವರ್ಗಕ್ಕೆ ಸೇರಿಸುವ ಬದಲು ಸಮಗ್ರ ವೀರಶೈವ- ಲಿಂಗಾಯತ ಧರ್ಮವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಕಾರ್ಯವಾಗಬೇಕು. ಇದಕ್ಕೆಲ್ಲ ಸಮಾಜ ಬಾಂಧವರು ಹೋರಾಡಬೇಕಿದೆ. ಒಂದು ವೇಳೆ ನಾವೆಲ್ಲರೂ ಒಂದಾಗದಿದ್ದರೆ ನಮ್ಮಲ್ಲಿಯೇ ಒಡಕು ಉಂಟುಮಾಡಿ ಬೇರೆಯವರು ಇದರ ಲಾಭ ಪಡೆದುಕೊಳ್ಳಲಿದ್ದಾರೆ ಎಂದು ಎಚ್ಚರಿಸಿದರು.
ವೀರಶೈವ- ಲಿಂಗಾಯತ ಸಮಾಜ ಬಾಂಧವರು ನಾವೆಲ್ಲರೂ ಒಂದಾಗಿದ್ದೇವೆ. ಆದರೆ, ಕೆಲವರು ನಮ್ಮಲ್ಲಿ ಒಡಕು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ವೀರಶೈವ ಮತ್ತು ಲಿಂಗಾಯತ ಎರಡೂ ಬೇರೆ ಬೇರೆ, ಸ್ವತಂತ್ರ ಧರ್ಮ ಎಂದು ಜನರಲ್ಲಿ ಗೊಂದಲ ಸೃಷ್ಟಿಮೂಡಿಸಲಾಗುತ್ತಿದೆ. ಇದನ್ನು ತಗೆದುಹಾಕುವ ಕೆಲಸವಾಗಬೇಕಿದೆ. ಮೊದಲು ಎಲ್ಲ ಮಠಾಧೀಶರು ಒಂದಾಗಬೇಕಿದೆ. ನಿಮ್ಮಲ್ಲಿರುವ ಸಮಸ್ಯೆಗಳನ್ನು ಕುರಿತು ಚರ್ಚಿಸಿ ಪರಿಹರಿಸಿಕೊಳ್ಳುವಂತಾಗಲಿ ಎಂದರು.ಪಿಆರ್ಸಿ ನೀಡುವುದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರಲ್ಲ: ಶೆಟ್ಟರ
ಬಾಂಗ್ಲಾದೇಶಿ ಅಕ್ರಮ ವಲಸಿಗರ ವಿಚಾರದಲ್ಲಿ ರಾಜ್ಯ ಸರ್ಕಾರದ ತುಷ್ಟೀಕರಣ ನೀತಿಯೇ ಸಮಸ್ಯೆಗೆ ಕಾರಣವಾಗಿದೆ. ಪಶ್ಚಿಮ ಬಂಗಾಳದಲ್ಲಿ ಅಕ್ರಮ ವಲಸೆಗೆ ಅವಕಾಶ ನೀಡಿದ ಪರಿಣಾಮ ಅನೇಕರು ದೇಶದೊಳಗೆ ಬಂದಿದ್ದಾರೆ. ಕರ್ನಾಟಕದಲ್ಲಿ ಅಕ್ರಮ ವಲಸಿಗರು ಇದ್ದರೆ ಅದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದು ರಾಜ್ಯದ ಗೃಹ ಇಲಾಖೆಯ ಜವಾಬ್ದಾರಿಯಾಗಿದೆ. ರಾಜ್ಯ ಗೃಹ ಇಲಾಖೆ ಸಮರ್ಥವಾಗಿ ಕಾರ್ಯನಿರ್ವಹಿಸದ ಕಾರಣ ಇಂತಹ ಚಟುವಟಿಕೆ ನಡೆಯುತ್ತಿವೆ ಎಂದು ಹೇಳಿದರು.