ಚಿತ್ರದುರ್ಗದಲ್ಲಿ ಸಂಸದ ಗೋವಿಂದ ಕಾರಜೋಳ ಲೇವಡಿ । ಗ್ಯಾರಂಟಿ ಹೆಸರಲ್ಲಿ 7.64 ಲಕ್ಷ ಕೋಟಿ ಸಾಲಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಇಲ್ಲಿನ ಸಂಸದರ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಆಸೆ ತೋರಿಸಿ, ಬಡವರ ಮನಗೆದ್ದು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಅಭಿವೃದ್ಧಿ ಮರೆತು ಭ್ರಷ್ಟಾಚಾರದಲ್ಲಿ ಮುಳುಗಿದೆ. ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದು ಅವರಿಗೆ ರಕ್ಷಣೆ ಇಲ್ಲದಂತಾಗಿದೆ.
ರಾಜ್ಯದಲ್ಲಿ ಕುಡಿಯುವ ನೀರಿನ ಅಭಾವ ಇದೆ. ಸಮರ್ಪಕ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವವೇ ಮೆಚ್ಚಿದ್ದು ಅವರೇ ನಿಜವಾದ ಅಹಿಂದ ನಾಯಕ. ಸಿದ್ದರಾಮಯ್ಯ ಡೋಂಗಿ ಅಹಿಂದ ನಾಯಕ. ಎಸ್ಸಿ, ಎಸ್ಟಿ ಜನಾಂಗದ ಅಭಿವೃದ್ಧಿಗೆ 24 ಸಾವಿರ ಕೋಟಿ ರು. ಮೀಸಲಿಟ್ಟಿದ್ದೇವೆ ಎನ್ನುತ್ತಾರೆ. ಜನರಿಗೆ ತಲುಪಿಸಲಾಗಿರುವುದರ ಬಗ್ಗೆ ಖಚಿತತೆ ಇಲ್ಲ ಎಂದು ದೂರಿದರು.ಕೇರಳ ಸಿಎಂ ಆಯ್ಕೆ ನಂತರ ಕಾಂಗ್ರೆಸ್ನಲ್ಲಿ ಮೂರು ಬಣಗಳಾಗಿವೆ. ದಲಿತ ಸಿಎಂ ಕೂಗು ಎಬ್ಬಿಸಲಾಗುತ್ತಿದೆ. ಕುರ್ಚಿಗೆ ಕಂಟಕ ಬಂದಿದೆ ಎಂಬ ಕಾರಣಕ್ಕೆ ತುಮಕೂರು ಸಮಾವೇಶ ಮಾಡಲಾಗುತ್ತಿದೆ. 1.50 ಲಕ್ಷ ಹಕ್ಕುಪತ್ರ ವಿತರಣೆ ಮಾಡುತ್ತೇವೆ ಎಂದು ಹೇಳಿ 8 ಸಾವಿರ ಜನ ಸೇರುವ ಮೈದಾನ ಆಯ್ಕೆ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಬಿಟ್ಟರೆ ಅಲ್ಲಿ ಯಾರೂ ಇಲ್ಲವೆಂದರು.
ಈ ವಾಸ್ತವಗಳು ಗೊತ್ತಿಲ್ಲದ ಕಾಂಗ್ರೆಸ್ಸಿಗರು ಸುಖಾಸುಮ್ಮನೆ ಟೀಕೆ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಅಧಿಕಾರದಲ್ಲಿರುವ ಸಿದ್ದರಾಮಯ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕಲಿಲ್ಲ.ಒಂದೆ ಒಂದು ಅಭಿವೃದ್ಧಿಕೆಲಸ ಆಗಿಲ್ಲ. 48 ಸಾವಿರ ಕೋಟಿ ದುರುಪಯೋಗ ಮಾಡಿ ವೋಟ್ ಬ್ಯಾಂಕ್ ರಾಜಕಾರಣ ಮಾಡಿದ್ದಾರೆ ಎಂದು ಕಾರಜೋಳ ದೂರಿದರು.