ನಾನು ಎನ್‌.ಆರ್.ಪುರದಲ್ಲಿ ಶಿಕ್ಷಣ ಪಡೆದು ಬೆಳೆದಿದ್ದೇನೆ: ಡಾ.ಆರತಿ ಕೃಷ್ಣ

KannadaprabhaNewsNetwork |  
Published : Oct 28, 2025, 12:03 AM IST
 ನರಸಿಂಹರಾಜಪುರಕ್ಕೆ ಆಗಮಿಸಿದ ನೂತನ ವಿಧಾನ ಪರಿಷತ್ ಸದಸ್ಯೆ ಡಾ.ಆರತಿ ಕೃಷ್ಣ ಅವರನ್ನು ಬೇಗಾನೆ ರಾಮಯ್ಯ ಅಭಿಮಾನಿ ಬಳಗದವರು  ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರ ನಾನು ನರಸಿಂಹರಾಜಪುರದಲ್ಲೇ ಶಿಕ್ಷಣ ಪಡೆದು ಬೆಳೆದಿದ್ದೇನೆ. ಈ ಊರಿನಲ್ಲಿ ನನ್ನ ತಂದೆ ಬೇಗಾನೆ ರಾಮಯ್ಯ ಅವರ ಬಗ್ಗೆ ಅಪಾರ ಗೌರವವಿದೆ ಎಂದು ವಿಧಾನ ಪರಿಷತ್ ನೂತನ ಸದಸ್ಯೆ ಡಾ.ಆರತಿ ಕೃಷ್ಣ ತಿಳಿಸಿದರು.

- ಬೇಗಾನೆ ರಾಮಯ್ಯ ಅಭಿಮಾನಿ ಬಳಗದಿಂದ ಡಾ.ಆರತಿ ಕೃಷ್ಣ ಅವರಿಗೆ ಅಭಿನಂದನಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ನಾನು ನರಸಿಂಹರಾಜಪುರದಲ್ಲೇ ಶಿಕ್ಷಣ ಪಡೆದು ಬೆಳೆದಿದ್ದೇನೆ. ಈ ಊರಿನಲ್ಲಿ ನನ್ನ ತಂದೆ ಬೇಗಾನೆ ರಾಮಯ್ಯ ಅವರ ಬಗ್ಗೆ ಅಪಾರ ಗೌರವವಿದೆ ಎಂದು ವಿಧಾನ ಪರಿಷತ್ ನೂತನ ಸದಸ್ಯೆ ಡಾ.ಆರತಿ ಕೃಷ್ಣ ತಿಳಿಸಿದರು.

ಪ್ರಥಮ ಬಾರಿಗೆ ಎನ್.ಆರ್.ಪುರಕ್ಕೆ ಆಗಮಿಸಿದ ಡಾ.ಆರತಿ ಕೃಷ್ಣ ಅವರಿಗೆ ಶನಿವಾರ ಪ್ರವಾಸಿ ಮಂದಿರದಲ್ಲಿ ಬೇಗಾನೆ ರಾಮಯ್ಯ ಅಭಿಮಾನಿ ಬಳಗದಿಂದ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ನನ್ನ ರಾಜಕೀಯ ಜೀವನಕ್ಕೂ ಎನ್‌.ಆರ್.ಪುರ ಸಹಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಅಭಿಮಾನಿ ಬಳಗ ಮೂಲಕ ಹಲವು ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಬೇಗಾನೆ ರಾಮಯ್ಯ ಅಭಿಮಾನಿ ಬಳಗದ ಪ್ರಧಾನ ಸಂಚಾಲಕ ಅಭಿನವ ಗಿರಿರಾಜ್ ಮಾತನಾಡಿ, ಬೇಗಾನೆ ರಾಮಯ್ಯ ಸಚಿವರಾಗಿದ್ದಾಗ ಮಲೆನಾಡು ಭಾಗದಲ್ಲಿ ಕುಡಿಯುವ ನೀರಿನ ಕ್ರಾಂತಿ ಮಾಡಿದ್ದರು. ಗ್ರಾಮೀಣ ಭಾಗದಲ್ಲಿ ಬೋರ್ ವೆಲ್‌ ಕೊರೆಸಿ ಬೋರ್ ವೆಲ್ ರಾಮಯ್ಯ ಎಂದು ಪ್ರಸಿದ್ಧಿ ಪಡೆದಿದ್ದರು. ಮುಂದಿನ ದಿನಗಳಲ್ಲಿ ಅವರ ಹೆಸರು ಶಾಶ್ವತವಾಗಿ ಉಳಿಯುವಂತಹ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಬೇಗಾನೆ ರಾಮಯ್ಯ ಅಭಿಮಾನಿ ಬಳಗದ ಕಾರ್ಯ ಸಂಚಾಲಕ ಎಸ್‌.ಡಿ.ರಾಜೇಂದ್ರ ಮಾತನಾಡಿ, ಬೇಗಾನೆ ರಾಮಯ್ಯ ಅವರ ಪುತ್ರಿ ಡಾ.ಆರತಿ ಕೃಷ್ಣ ರಾಜಕೀಯ ಜೀವನದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂಬ ಆಶಯ ವ್ಯಕ್ತಪಡಿಸಿದರು. ಶಾಸಕ ಟಿ.ಡಿ.ರಾಜೇಗೌಡ ಡಾ.ಆರತಿ ಕೃಷ್ಣ ಅವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಿ ಮಾತನಾಡಿ, ಬೇಗಾನೆ ರಾಮಯ್ಯ ಅಭಿಮಾನಿ ಬಳಗದ ಸೇವಾ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬೇಗಾನೆ ರಾಮಯ್ಯ ಅಭಿಮಾನಿ ಬಳಗದ ಸಹ ಸಂಚಾಲಕ ಕೆ.ಎ.ಅಬೂಬಕರ್, ಅಭಿಮಾನಿ ಬಳಗದ ನಿರ್ದೇಶಕರುಗಳಾದ ಪಿ.ಆರ್.ಸದಾಶಿವ, ಪ್ರಶಾಂತ ಶೆಟ್ಟಿ, ಹಾತೂರು ಪ್ರಭಾಕರ್, ಕೆ.ಎಂ.ಸುಂದರೇಶ್, ಗೇರ್ ಬೈಲು ನಟರಾಜ್ ಹಾಗೂ ಇತರ ಪದಾಧಿಕಾರಿಗಳು ಇದ್ದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು