ಕೊಪ್ಪಳ(ಯಲಬುರ್ಗಾ):
ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ, ಲಿಂಗನಬಂಡಿ ಗ್ರಾಮಗಳಲ್ಲಿ ಮಂಗಳವಾರ ನೂತನ ಸರ್ಕಾರಿ ಪ್ರೌಢಶಾಲೆಗಳ ಕಟ್ಟಡಗಳ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಾನು ಶಾಸಕನಾಗುವ ಪೂರ್ವದಲ್ಲಿ ಕ್ಷೇತ್ರದಲ್ಲಿ ಬರೀ 7 ಇದ್ದ ಹೈಸ್ಕೂಲ್ ಸಂಖ್ಯೆ 70ಕ್ಕೆ ಮುಟ್ಟಿದೆ. 21 ಪದವಿ ಪೂರ್ವ ಕಾಲೇಜು, 17 ವಸತಿ ಶಾಲೆ, ಎಂಜಿನಿಯರಿಂಗ್ ಕಾಲೇಜು, ಕೌಶಾಲ್ಯಾಭಿವೃದ್ಧಿ ಕೇಂದ್ರ ಆರಂಭಿಸಿ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದೇನೆ. ಈ ವರ್ಷ ಮತ್ತೆ 4 ಪ್ರೌಢಶಾಲೆ ಮಂಜೂರು ಮಾಡಿಸಿ ಪ್ರಾರಂಭಿಸುತ್ತೇನೆ. ನನ್ನ ಹೊರೆತುಪಡಿಸಿ ಮೂರು ಬಾರಿ ಮೂವರು ಶಾಸಕರಾದರು ಒಂದೇ ಒಂದು ಹೈಸ್ಕೂಲ್ ಮಂಜೂರು ಮಾಡಿಸಿಲ್ಲ. ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ನಮ್ಮ ತಾಲೂಕು ಉತ್ತಮ ಫಲಿತಾಂಶ ಬಂದಿದೆ. ಆದರೂ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಫಲಿತಾಂಶ ಬರಬೇಕು ಎಂದರು.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ₹ 50 ಕೋಟಿ ನೀಡಿದ್ದೇನೆ. 25 ಆಂಗ್ಲ ಮಾಧ್ಯಮ ಶಾಲೆ, 65 ಎಲ್ಕೆಜಿ ಶಾಲೆ ಆರಂಭಿಸಲಾಗಿದೆ ಎಂದ ಅವರು, ಜನರು ಅಭಿವೃದ್ಧಿ ಪರ ಕೆಲಸ ಮಾಡುವವರನ್ನು ಗೆಲ್ಲಿಸುತ್ತಾರೆ ವಿನಃ ಜಾತಿ, ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುವವರನಲ್ಲ. ಸಿಎಂ ಸಿದ್ದರಾಮಯ್ಯ ಅವರನ್ನು ವಿಪಕ್ಷದವರು ವಿನಾಕಾರಣ ಆರೋಪಿಸಿದರೂ ಅದು ಸತ್ಯಾಂಶದಿಂದ ಕೂಡಿಲ್ಲ. ಬರೀ ಆಧಾರ ರಹಿತ ಆರೋಪವಾಗಿದೆ ಎಂದು ತಿರುಗೇಟು ನೀಡಿದರು.3 ಚುನಾವಣೆಗೆ ಸ್ಪರ್ಧೆ:
ಪಿಡಿಒಗೆ ತರಾಟೆ:
ಈ ವೇಳೆ ಗ್ರಾಪಂ ಅಧ್ಯಕ ಹೊಳಿಯಮ್ಮ ಹಳ್ಳಿಕೇರಿ, ಶಾಂತಮ್ಮ ವಾದಿ, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ತಾಪಂ ಇಒ ಸಂತೋಷ ಪಾಟೀಲ ಬಿರಾದಾರ, ಅಧಿಕಾರಿಗಳಾದ ಮಲ್ಲಿಕಾರ್ಜುನ, ಶಿವಕುಮಾರ ಕಲ್ಯಾಣಿ, ಮಹಾಂತೇಶ ಹಿರೇಮಠ, ಅಶೋಕ ಗೌಡರ, ಕೆರಿಬಸಪ್ಪ ನಿಡಗುಂದಿ, ರಾಮಣ್ಣ ಸಾಲಭಾವಿ, ಡಾ. ಶಿವನಗೌಡ ದಾನರಡ್ಡಿ, ಆನಂದ ಉಳ್ಳಾಗಡ್ಡಿ, ಬಾಲಚಂದ್ರ ಸಾಲಭಾವಿ, ಎಂ.ಎಫ್. ನದಾಫ್, ಶೇಷಗಿರಿರಾವ್ ಕುಲಕರ್ಣಿ, ಈಶ್ವರ ಅಟಮಾಳಗಿ, ಸಂಗಣ್ಣ ಟೆಂಗಿನಕಾಯಿ, ಶಂಕ್ರಪ್ಪ ಬಡಿಗೇರ, ಕಳಕನಗೌಡ ಪಾಟೀಲ ಇದ್ದರು.