ಕನ್ನಡಪ್ರಭ ವಾರ್ತೆ ಮೂಲ್ಕಿ
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕದ ವತಿಯಿಂದ ಕಿನ್ನಿಗೋಳಿ ಸಮೀಪದ ಐಕಳ ಪೊಂಪೈ ಕಾಲೇಜಿನಲ್ಲಿ ಆಯೋಜಿಸಲಾದ ಮೂಲ್ಕಿ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಂದೆ ಪತ್ರಿಕೆಯಲ್ಲಿ ಬರೆಯುವವರು ಲೇಖಕರು ಎಂದು ಗುರುತಿಸಲ್ಪಡುತ್ತಿದ್ದರು. ಈಗ ಜಾಲತಾಣದಲ್ಲಿ ಬರಹಗಾರರು ಬಹುಬೇಗ ಪ್ರಚಾರಕ್ಕೆ ಬರುತ್ತಿದ್ದಾರೆ. ಬರಹಗಾರನಿಗೆ ಅಧ್ಯಯನದ ಬಲವಿಲ್ಲದಿದ್ದರೆ ಗಟ್ಟಿತನ ಬರಲಾರದು. ಬಹುಪಾಲು ಬರಹಗಳೆಲ್ಲ ಅವಸರದ ಚೊಳ್ಳುಗಳಾಗಲು ಕಾರಣ ಭಾಷೆಯ ಅಧ್ಯಯನದ ಕೊರತೆ, ಓದಿನ ಕೊರತೆ. ಪ್ರಖರ ಚಿಂತನೆ, ತಪ್ಪಾಗಿಲ್ಲದ ಬರಹ, ಮಹತ್ವಪೂರ್ಣ ವಿಚಾರ, ಸದಾ ಬೇಡಿಕೆಯ ಕೃತಿಗಳ ನಿರ್ಮಾಣಕ್ಕೆ ಅಗತ್ಯವಾಗಿಬೇಕು. ಬರೆದ ಕೃತಿಗೆ ಓದುಗರಿಲ್ಲ ಎಂದರೆ ಸಾಲದು, ಬರೆದದ್ದು ಓದಿಸಿಕೊಂಡು ಹೋಗುತ್ತದೆಯೋ ಎಂಬುದೂ ಮುಖ್ಯ ಎಂದರು.ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್, ನಾಡಿನ ಸಾಹಿತಿಗಳು ಕನ್ನಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದು, ಕನ್ನಡಕ್ಕೆ ಮಾನ್ಯತೆ ಸಿಕ್ಕಿದ ಹಾಗೇ ತುಳುವಿಗೂ ಮಾನ್ಯತೆ ಸಿಗಬೇಕು. ಕನ್ನಡದ ಜೊತೆಗೆ ತುಳು ಉತ್ಸವಗಳು ನಡೆಯಬೇಕು ಎಂದು ಹೇಳಿದರು.
ಸಮ್ಮೇಳನ ಸಮಿತಿಯ ಅಧ್ಯಕ್ಷ ಪೃಥ್ವಿರಾಜ್ ಆಚಾರ್ಯ ಸ್ವಾಗತಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಹಿಲ್ಲಾ ಡಿಸೋಜ ವಂದಿಸಿದರು. ಶರತ್ ಶೆಟ್ಟಿ ಕಿನ್ನಿಗೋಳಿ, ಪ್ರಕಾಶ್ ಆಚಾರ್ಯ ಕಿನ್ನಿಗೋಳಿ ನಿರೂಪಿಸಿದರು. ಸಮ್ಮೇಳನಕ್ಕೆ ಬಂದ ಎಲ್ಲರಿಗೂ ಪುಸ್ತಕವನ್ನು ನೀಡಲಾಯಿತು.
...................-------
---------------------
ಸಮ್ಮೇಳನದ ಅಂಗಣದಲ್ಲಿ ತುಳುನಾಡಿನ ಸ್ತಬ್ಧ ಚಿತ್ರಗಳ ಸೆಲ್ಫಿ ಕಾರ್ನರ್, ಅಚ್ಚುಕಟ್ಟಾದ ವಾತಾವರಣ, ತಾಲೂಕಿನ ಎಲ್ಲ ಪ್ರಾಥಮಿಕ ಶಾಲೆ ಮಕ್ಕಳ ಭಾಗವಹಿಸುವಿಕೆ, ಪುಸ್ತಕ ಮಳಿಗೆ, ಚಿತ್ರಕಲಾ ಪ್ರದರ್ಶನ, ತೆಂಗಿನ ಗೆರೆಟೆಯ ಕಲಾ ಕೌಶಲ್ಯ, ವಿವಿಧ ದೇಶದ ಸ್ಟಾಂಪ್ಗಳು, ನಾಣ್ಯಗಳು, ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿದ ಉತ್ಪನ್ನಗಳು, ಅಲಂಕಾರಿಕ ವಸ್ತುಗಳು, ದಿನಬಳಕೆಯ ಹಾಗೂ ಕೃಷಿ ಸಂಬಂಧಿತ ಗಿಡಗಳು ಗಮನ ಸೆಳೆಯಿತು.
ಗ್ರಂಥಪಾಲಕರಿಗೆ ಸನ್ಮಾನಹೊತ್ತಗೆಯ ಹೊತ್ತು ಪುಸ್ತಕದ ಮನೆಯ ಕಷ್ಟ ಸುಖ ಎಂಬ ವಿಚಾರಗೋಷ್ಠಿಯಲ್ಲಿ ಮೂಲ್ಕಿ ತಾಲೂಕಿನ ಬಳ್ಕುಂಜೆ, ಐಕಳ, ಮೆನ್ನಬೆಟ್ಟು, ಕೆಮ್ರಾಲ್, ಹಳೆಯಂಗಡಿ, ಕಿಲ್ಪಾಡಿ, ಎಕ್ಕಾರು, ಮೂಲ್ಕಿ, ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ಗ್ರಂಥಪಾಲಕರನ್ನು ಡಾ.ಪ್ರಕಾಶ್ ಕಾಮತ್ ಏಳಿಂಜೆ, ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಜೊಕಿಂ ಫೆರ್ನಾಂಡಿಸ್ ಸನ್ಮಾನಿಸಿದರು. ನಿರಂತರವಾಗಿ ಪುಸ್ತಕಗಳನ್ನು ಓದುವ ಸುಮಾರು 50 ಮಂದಿಯನ್ನು ಗೌರವಿಸಲಾಯಿತು. ಶ್ರೀಶ ಸರಾಫ್ ಐಕಳ ನಿರೂಪಿಸಿದರು.