ಕನಕಗಿರಿ:
ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಉತ್ಸವ ಆಚರಿಸುವ ಕುರಿತು ಘೋಷಿಸಿರುವುದು ತಪ್ಪು. ಈ ಹಿಂದೇ ನಡೆದ ಉತ್ಸವದ ಸಂದರ್ಭದಲ್ಲಿ ಸ್ಥಳೀಯ ಜನರ ಅಭಿಪ್ರಾಯ ಪಡೆದು ಉತ್ಸವದ ದಿನಾಂಕ ಘೋಷಿಸಲಾಗುತ್ತಿತ್ತು. ಆದರೆ, ಜಾತ್ರೆಯ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಉತ್ಸವದ ವಿಷಯ ಪ್ರಸ್ತಾಪಿಸಿ ಗೊಂದಲ ಸೃಷ್ಟಿಸಿದ್ದಾರೆ. ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಮೂಲಭೂತ ಸೌಕರ್ಯ ಒದಗಿಸುವುದು ಕಷ್ಟಸಾಧ್ಯ ಎಂಬುದು ಸಚಿವರಿಗೆ ಗೊತ್ತಿದ್ದರು ಅದೇ ದಿನ ಉತ್ಸವ ಆಚರಿಸಲು ಆಸಕ್ತಿ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದರು.
ಭಕ್ತರಿಗೆ ಉಳಿದುಕೊಳ್ಳಲು, ವಾಹನ ನಿಲುಗಡೆ ಸ್ಥಳ, ಅನ್ನ ದಾಸೋಹ ಸೇರಿದಂತೆ ವಿವಿಧ ಸೌಲಭ್ಯಕ್ಕೆ ಜಾಗದ ಕೊರತೆ ಇದೆ. ರಥಬೀದಿ 50 ಅಡಿ ಅಗಲ, 640 ಮೀಟರ್ ಉದ್ದದ ವಿಸ್ತೀರ್ಣ ಹೊಂದಿದ್ದು ತೀರಾ ಇಕ್ಕಟ್ಟಿನಲ್ಲಿ ರಥೋತ್ಸವ ಸೇರಿದಂತೆ ಜಾತ್ರಾ ಕಾರ್ಯಕ್ರಮ ನಡೆಯುತ್ತಿವೆ. ಗರುಡೋತ್ಸವ ಮತ್ತು ರಥೋತ್ಸವ ಎರಡೂ ದಿನವೂ ಭಕ್ತರಿಗೆ ಕುಡಿಯುವ ನೀರು ಕಲ್ಪಿಸಲು ಆಗುವುದಿಲ್ಲ. ಇನ್ನೂ ಸ್ನಾನ, ತಲೆಮಂಡಿ ಕೊಡುವ ಸ್ಥಳವಂತೂ ಜನಜಂಗುಳಿಯಿಂದ ಕೂಡಿರುತ್ತದೆ. ಜಾಗೆಯ ಕೊರತೆಯಿಂದ ಉತ್ಸವ, ರಥೋತ್ಸವವನ್ನು ರಾಜಬೀದಿಯ ಅಕ್ಕಪಕ್ಕದ ಮನೆಗಳ ಮೇಲ್ಚಾವಣಿಗಳ ಮೇಲೆ ನಿಂತು ವೀಕ್ಷಿಸುತ್ತಾರೆ. ಹೀಗಿರುವಾಗ ಕನಕಗಿರಿ ಉತ್ಸವ ಆಚರಿಸಿದರೆ ಬರುವ ಜನರನ್ನು ನಿಯಂತ್ರಿಸುವ ಜತೆಗೆ ಸೌಲಭ್ಯ ಕಲ್ಪಿಸುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.ಕನಕರಾಯನ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಇಲ್ಲಿನ ಸಂಪ್ರದಾಯ, ಧಾರ್ಮಿಕ ನಂಬಿಕೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಸಚಿವರು ತರಾತುರಿಯಲ್ಲಿ ಉತ್ಸವ ಆಚರಿಸಲು ದಿನಾಂಕ ಘೋಷಿಸಿದ್ದಾರೆ. ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಮೂಲ ಸೌಲಭ್ಯ ಮುಖ್ಯವಾಗಿದ್ದು, ಜಿಲ್ಲಾಡಳಿತ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಂಡು, ಉತ್ಸವ ಆಚರಣೆಯ ದಿನ ಬದಲಾಯಿಸಬೇಕು. ಇಲ್ಲವಾದರೆ, ಮಾ. 7ರಂದು ಕನಕಗಿರಿ ಬಂದ್ ಕರೆ ನೀಡಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ. ಕೈ ಮುಖಂಡರು ಗೈರು: ಆಕ್ರೋಶ