ರಾಮನಗರ: 12ನೇ ಶತಮಾನದಲ್ಲಿ ಶರಣರು ಪ್ರತಿಪಾದಿಸಿದ ತತ್ವಗಳನ್ನು ಸಂವಿಧಾನದಲ್ಲಿಯೂ ಕಾಣುತ್ತಿದ್ದೇವೆ. ವಚನಗಳು ಬದುಕಿಗೆ ನೈತಿಕ ಚೌಕಟ್ಟು ಮತ್ತು ಸಂವಿಧಾನ ಕಾನೂನಿನ ಚೌಕಟ್ಟು ಕಲ್ಪಿಸುತ್ತದೆ. ಇವರೆಡು ಒಟ್ಟಿಗೆ ಹೋದಾಗ ಮಾತ್ರ ಕಲ್ಯಾಣ ರಾಜ್ಯ ಸ್ಥಾಪನೆ ಸಾಧ್ಯವಾಗಲಿದೆ ಎಂದು ನಿವೃತ್ತ ನ್ಯಾಯಾಧೀಶ ನಾಗಮೋಹನ್ ದಾಸ್ ಪ್ರತಿಪಾದಿಸಿದರು.
ವಚನಕಾರರು ಪ್ರಜಾಪ್ರಭುತ್ವ, ಜಾತ್ಯತೀತ ಹಾಗೂ ಸಾಮಾಜಿಕ ನ್ಯಾಯ ಎಂಬ ತತ್ವಗಳನ್ನು ಪ್ರತಿಪಾದಿಸಿ, ಅನುಷ್ಠಾನಗೊಳಿಸಿದರು. ಅಂತಹದೇ ಕೆಲಸವನ್ನು 20 ನೇ ಶತಮಾನದಲ್ಲಿ ಭಾರತದ ಸಂವಿಧಾನದಲ್ಲಿ ಕಾಣುತ್ತಿದ್ದೇವೆ. ಸಂವಿಧಾನ ಜಾರಿ ಬಂದ ಮೇಲೆ ರಾಜತ್ವ, ಪಾಳೇಗಾರಿಕೆ ಸಂಸ್ಕೃತಿ ರದ್ದುಗೊಂಡಿತು. ವಚನಕಾರರು ಪ್ರತಿಪಾದಿಸಿದ ಪ್ರಜಾಪ್ರಭುತ್ವ , ಜಾತ್ಯತೀತ, ಸಾಮಾಜಿಕ ನ್ಯಾಯ,ಕಲ್ಯಾಣ ರಾಜ್ಯ , ಬಹುತ್ವ ಸಂವಿಧಾನದ ಮೂಲ ತತ್ವಗಳಾಗಿವೆ ಎಂದು ಹೇಳಿದರು.
ಸಾರಂಶ ಅರಿಯಬೇಕು:ದೇಶದಲ್ಲಿ ಹುಟ್ಟುತ್ತಾ ಜಾತಿ, ಜಾತಿಗೊಂದು ಕಸುಬು ಇತ್ತು. ಬದಲಾಯಿಸಲು ಅವಕಾಶವೇ ಇರಲಿಲ್ಲ. ಜಾತಿ ಮತ್ತು ಕಸುಬನ್ನು ವಂಶಪಾರಂಪರ್ಯ ಮಾಡಲಾಗಿತ್ತು. ಈ ಜಾತಿ ಅಸಮಾನತೆ, ಅಸ್ಪೃಶ್ಯತೆ ವಿರುದ್ಧ 12ನೇ ಶತಮಾನದ ವಚನಕಾರರು ಧ್ವನಿ ಎತ್ತಿದರು. ಆ ಸಿದ್ಧಾಂತವನ್ನು ಸಂವಿಧಾನದಲ್ಲಿಯೂ ಕಾಣಬಹುದಾಗಿದೆ. ವಚನ ಮತ್ತು ಸಂವಿಧಾನದ ಸಾರಾಂಶ ಅರಿಯುವ ಕಾರ್ಯ ನಿರಂತರವಾಗಬೇಕು.ನಮ್ಮಲ್ಲಿನ ಅನೇಕ ಜನರು ವಚನ - ಸಂವಿಧಾನವನ್ನು ಓದಲಿಲ್ಲ. ಓದಿದ ಕೆಲವರು ಅರ್ಥ ಮಾಡಿಕೊಳ್ಳಲಿಲ್ಲ. ಅರ್ಥ ಮಾಡಿಕೊಂಡ ಬಹುತೇಕು ಬದುಕಿನಲ್ಲಿ ಅದನ್ನು ಅನುಷ್ಠಾನ ಮಾಡಿಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಆವರಣದಲ್ಲಿ ಪ್ರತಿಷ್ಠಾಪಿಸಲಾದ ಶ್ರೀ ಬಸವೇಶ್ವರರ ಪುತ್ಥಳಿಯನ್ನು ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅನಾವರಣಗೊಳಿಸಿದರು. ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿ, ಮರಳೇಗವಿ ಮಠದ ಶಿವರುದ್ರಸ್ವಾಮಿಗಳು, ಮಾಜಿ ಶಾಸಕರಾದ ಸಿ.ಎಂ.ಲಿಂಗಪ್ಪ, ಎಚ್.ಎಂ.ರೇವಣ್ಣ, ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು, ಜಿಲ್ಲಾಧಿಕಾರಿ ಯಶ್ವಂತ್ ವಿ ಗುರುಕರ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು, ಗ್ಯಾರಂಟಿ ಯೋಜನೆ ತಾಲ್ಲೂಕು ಅಧ್ಯಕ್ಷ ವಿ.ಎಚ್.ರಾಜು, ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಆರೀಪ್, ಪೌರಾಯುಕ್ತ ಡಾ.ಜಯಣ್ಣ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ಎಸ್.ಯೋಗಾನಂದ, ತಾಲೂಕು ಅಧ್ಯಕ್ಷ ಶಂಕರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಬಸವಣ್ಣರ ಕ್ರಾಂತಿಯಿಂದ ವಿಕಸಿತ ಸಮಾಜ ಸುಧಾರಣೆ
ನಗರಸಭೆ ಆವರಣದಲ್ಲಿ ಶ್ರೀ ಬಸವೇಶ್ವರರ ಪುತ್ಥಳಿ ಅನಾವರಣಗೊಳಿಸಿದ ಶ್ರೀಗಳು, ಬಸವಣ್ಣರವರ ಸಾಮಾಜಿಕ ಸುಧಾರಣೆಗಳು ಕೇವಲ ಲೌಕಿಕ, ಸಾಮಾಜಿಕ ಹಾಗೂ ಮೇಲುಸ್ತರದಲ್ಲಿ ನಡೆದಿದ್ದು ಅಲ್ಲ. ಮನುಷ್ಯನ ಶ್ರೇಯಸ್ಸಿಗೆ ಮೋಕ್ಷ ಸಾಧನೆ, ಧಾರ್ಮಿಕ ಪ್ರಜ್ಞೆ, ಆಧ್ಯಾತ್ಮಿಕ ನಡವಳಿಕೆ ಎಲ್ಲವನ್ನು ಒಟ್ಟುಗೂಡಿಸಿ ಸಮಗ್ರ ಬದಲಾವಣೆ ಆಗಬೇಕೆಂದು ಧಾರ್ಮಿಕ ತಳಹಾದಿಯ ಮೇಲೆ ಸಾಮಾಜಿಕ ಸುಧಾರಣೆ ತರಲು ಬಯಸಿದವರು ಎಂದರು.
ವಚನಗಳಲ್ಲಿರುವ ಅಂಶಗಳು ಸಂವಿಧಾನದಲ್ಲಿಯೂ ಬಂದಿದೆ. ಬಸವಣ್ಣರವರು ಮಾಡಿದ ಸಾಮಾಜಿಕ ಸುಧಾರಣೆ ಇಂದಿಗೂ ಮಾದರಿಯಾಗಿದೆ. ಆ ವಚನಗಳು ಮೊದಲೇ ಸಿಕ್ಕಿದ್ದರೆ ಸಮಾಜದಲ್ಲಿ ಸಮಾತನೆ ಇರುತ್ತಿತ್ತು. ಈಗ ಅದನ್ನು ಅಂಬೇಡ್ಕರ್ ರವರು ಸಂವಿಧಾನದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಜಾರಿಗೆ ತಂದಿದ್ದಾರೆ ಎಂದು ಶ್ರೀಗಳು ಹೇಳಿದರು.
ಕೋಟ್ .............
- ಎಚ್.ಎಂ.ರೇವಣ್ಣ, ರಾಜ್ಯಾಧ್ಯಕ್ಷರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ
8ಕೆಆರ್ ಎಂಎನ್ 6.ಜೆಪಿಜಿರಾಮನಗರ ನಗರಸಭೆ ಆವರಣದಲ್ಲಿ ಶ್ರೀ ಬಸವೇಶ್ವರರ ಪುತ್ಥಳಿಯನ್ನು ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅನಾವರಣಗೊಳಿಸಿದರು.