ಹುಬ್ಬಳ್ಳಿ:
ಅವರು ಇಲ್ಲಿನ ಚಾಲುಕ್ಯ ರೈಲ್ವೆ ಸಭಾಭವನದಲ್ಲಿ ನೈಋತ್ಯ ರೈಲ್ವೆ ಕನ್ನಡ ಸಂಘದಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯೋತ್ಸವ, ಸಂಘದ 20ನೇ ವಾರ್ಷಿಕೋತ್ಸವ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಉಳಿಸುವ ಪ್ರಕ್ರಿಯೆ ಪರಿವಾರದಿಂದ ಆರಂಭವಾಗಬೇಕು. ಇಂದು ರಾಜ್ಯದಲ್ಲಿ ಕನ್ನಡಕ್ಕೆ ನೆಲೆ ಇಲ್ಲದಂತಾಗುತ್ತಿದೆ. ಮನೆ-ಮನೆಗಳಲ್ಲಿ ಕನ್ನಡ ಮಾತಾಡಬೇಕು. ಯಾವ ಭಾಷೆ ಕಲಿತರೂ ಕನ್ನಡದಲ್ಲೇ ವ್ಯವಹರಿಸಬೇಕು. ಮಕ್ಕಳಿಗಾಗಿ ಮನೆಯಲ್ಲಿ ಗ್ರಂಥಾಲಯ ಸ್ಥಾಪಿಸಬೇಕು. ನಿಯತಕಾಲಿಕೆ ತರಿಸಿ ಓದುವ ಹವ್ಯಾಸ ಬೆಳೆಸಿಕೊಳ್ಳಬೇತು ಎಂದು ಕರೆ ನೀಡಿದರು.ಹುಬ್ಬಳ್ಳಿಯಲ್ಲೇ ರೈಲ್ವೆ ಇಲಾಖೆಯ ಕಚೇರಿ ಇರುವುದರಿಂದ ಈ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ. ರೈಲಿನ ಪ್ರಯಾಣ ಪ್ರೀತಿಯುತವಾದುದು. ರೈಲ್ವೆ ಬಡವರ ಇಲಾಖೆ. ಕೋಟ್ಯಂತರ ಜನರಿಗೆ ಉತ್ಕೃಷ್ಟವಾದ ಸೇವೆ ಸಲ್ಲಿಸುವ ಕಾರ್ಯ ಶ್ಲಾಘನೀಯ. ಇಲ್ಲಿನ ರೈಲ್ವೆ ವ್ಯವಸ್ಥೆ ಬೇರೆ ಯಾವ ದೇಶದಲ್ಲಿಯೂ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿ.ಎಂ. ಮುನಿಸ್ವಾಮಿ ಮಾತನಾಡಿದರು. ಇದೇ ವೇಳೆ "ನಾಡಹಬ್ಬ ನುಡಿತೋರಣ " ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಅನೂಪ್ ದಯಾನಂದ ಸಾಧು, ಅನಿತಾ ಶಾಸ್ತ್ರಿ, ಕನ್ನಡ ಸಂಘದ ಅಧ್ಯಕ್ಷ ಮಹಾಂತಪ್ಪ ನಂದೂರ, ಪ್ರಧಾನ ಕಾರ್ಯದರ್ಶಿ ಮಹೇಶ ಎ.ಎಸ್, ಪ್ರಮುಖರಾದ ಅರವಿಂದ ಹೆಗಡೆ, ಸಂತೋಷ ಹೆಗಡೆ, ಡಾ. ರಾಮು ಮೂಲಗಿ, ವೆಂಕಟೇಶ ಮರೆಗುದ್ದಿ, ರವಿಶಂಕರ ಗದಿಗೆಪ್ಪ ಸೇರಿದಂತೆ ಹಲವರಿದ್ದರು.