ಹಗರಿಬೊಮ್ಮನಹಳ್ಳಿ: ತುಂಗಭದ್ರಾ ಜಲಾಶಯ ಭರ್ತಿಯಾಗಿರುವ ಹಿನ್ನೆಲೆ ಹಿನ್ನೀರಿನ ಪ್ರದೇಶಗಳಲ್ಲಿ ಕಡಿತಗೊಳಿಸಿರುವ ವಿದ್ಯುತ್ ಸಂಪರ್ಕವನ್ನು ಕೆಲ ರೈತರು ಇಲಾಖೆಯ ಗಮನಕ್ಕೆ ಬಾರದಂತೆ ಪುನಃ ಸಂಪರ್ಕಗೊಳಿಸುವುದು ಅಪಾಯಕಾರಿ. ರೈತರು ಇಂತಹ ಕಾರ್ಯಕ್ಕೆ ಮುಂದಾಗಬಾರದು ಎಂದು ಜೆಸ್ಕಾಂ ತಂಬ್ರಹಳ್ಳಿ ಶಾಖಾಧಿಕಾರಿ ಎಚ್.ಹೊನ್ನೂರಪ್ಪ ಮನವಿ ಮಾಡಿದರು.
ಆದರೆ,ಕೆಲವು ರೈತರು ಇಲಾಖೆಯ ಗಮನಕ್ಕೆ ಬಾರದಂತೆ ವಿದ್ಯುತ್ ಸಂಪರ್ಕ ಸ್ವಯಂ ಆಗಿ ಪಡೆದುಕೊಳ್ಳುತ್ತಿರುವುದು ಕಂಡುಬಂದಿದೆ. ನೀರಿನ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಹೊಂದಿರುವುದರಿಂದ ವಿದ್ಯುತ್ ಸೋರಿಕೆ ಹಾಗೂ ಅಪಘಾತ ಸಂಭವಿಸುವ ಸಾಧ್ಯತೆ ಇದ್ದು, ಇದರಿಂದ ಜೀವಹಾನಿಗೂ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮವನ್ನು ತಾಪಂ ಇಒ ಪಾಲಯ್ಯನಕೋಟೆ ವಿಶ್ವನಾಥ್ ಉದ್ಘಾಟಿಸಿದರು. ಈ ವೇಳೆ ಮುತ್ಕೂರು ಗ್ರಾಮದ ಗ್ರಾಮನತ್ತು ಭೂಮಿ ಹಾಗೂ ನಿವೇಶನ ತಿದ್ದುಪಡಿ, ಕಿತ್ನೂರು ಗ್ರಾಮದ ದಾರಿ ಸಮಸ್ಯೆ ಮತ್ತು ಚರಂಡಿ ದುರಸ್ತಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಗ್ರಾಮಸ್ಥರು ಅರ್ಜಿ ಸಲ್ಲಿಸಿದರು. ತೆಲುಗೋಳಿ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸುವಂತೆ ಕೂಡ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ ೮, ಪಂಚಾಯತ್ ರಾಜ್ ಇಲಾಖೆಗೆ ೧೩, ಜೆಸ್ಕಾಂಗೆ ೬, ಪಿಡಬ್ಲ್ಯೂಡಿಗೆ ೧, ಸಮಾಜ ಕಲ್ಯಾಣ ಇಲಾಖೆಗೆ ೧, ಸಣ್ಣ ನೀರಾವರಿ ಇಲಾಖೆಗೆ ೧, ಪಶುಸಂಗೋಪನೆ ಇಲಾಖೆಗೆ ೧ ಹಾಗೂ ಆರೋಗ್ಯ ಇಲಾಖೆಗೆ ೧ ಸೇರಿದಂತೆ ಒಟ್ಟು ೩೨ ಸಾರ್ವಜನಿಕ ಅರ್ಜಿಗಳು ಸ್ವೀಕೃತವಾದವು. ಕೆಲವು ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲಾಯಿತು.