ಕನ್ನಡಪ್ರಭ ವಾರ್ತೆ ಆಳಂದ:
ಈ ಪ್ರಕರಣದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ (ಪ್ರಭಾರಿ) ರಾಚಣ್ಣಗೌಡ ಅವರನ್ನು ಜಿಪಂ ಸಿಇಒ ಭಂವರಸಿಂಗ್ ಮೀನಾ ಅಮಾನತುಗೊಳಿಸಿದ್ದಾರೆ. ಅಲ್ಲದೆ, ಅಕ್ರಮದಿಂದ ಸರ್ಕಾರಕ್ಕೆ ಉಂಟಾದ 1,01,757 ರು. ನಷ್ಟ ಭರಿಸುವಂತೆ ಸೂಚಿಸಿದ್ದಾರೆ.
*ಅಕ್ರಮದ ಹಿನ್ನೆಲೆ: ಮಾಜಿ ಶಾಸಕ ಸುಭಾಷ ಗುತ್ತೇದಾರ ಮತ್ತು ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾಂನಂದ ಗುತ್ತೇದಾರ, ಆಳಂದ ತಾಲೂಕಿನ 467 ತೆರೆದ ಬಾವಿಗಳ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದರು. ಈ ದೂರಿನ ಆಧಾರದ ಮೇಲೆ ಜಿಪಂ ಸಿಇಒ ಚಿತ್ತಾಪೂರ ಮತ್ತು ಅಫಜಲಪೂರ ತಾಲೂಕಿನ ಅಧಿಕಾರಿಗಳ ತಂಡವನ್ನು ಪರಿಶೀಲನೆಗೆ ನೇಮಿಸಿತ್ತು. ತಂಡದ ವರದಿಯಲ್ಲಿ ಮನರೇಗಾ ಮಾರ್ಗಸೂಚಿಗಳ ಉಲ್ಲಂಘನೆ, ಸರ್ಕಾರಿ ಖಜಾನೆಗೆ ಹಾನಿ, ಮತ್ತು ಸುಳ್ಳು ದಾಖಲೆಗಳ ಸೃಷ್ಟಿಯ ವಿವರಗಳು ಬಯಲಾಗಿವೆ.*ಬೆಳಕಿಗೆ ಬಂದ ಅವ್ಯವಹಾರಗಳು: ಸರ್ವೇ ಸಂಖ್ಯೆ ದೋಷ ಹಾಳತಡಕಲ್ ಗ್ರಾಮದ ಸರ್ವೇ ನಂ.122ರಲ್ಲಿ ಕಾಮಗಾರಿ ನಡೆಸಬೇಕಿದ್ದರೂ, ಸರ್ವೇ ನಂ. 123ರಲ್ಲಿ ಕಾಮಗಾರಿ ನಡೆಸಲಾಗಿದೆ. ಇದರಿಂದ 79,911 ರು. ಹೆಚ್ಚುವರಿ ಕೂಲಿ ಮೊತ್ತ ಪಾವತಿಯಾಗಿದೆ.
*ಕೈಗೊಂಡ ಕ್ರಮಗಳು: ಪಿಡಿಒ ರಾಚಣ್ಣಗೌಡ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಅವರಿಂದ ಒಟ್ಟು 1,01,757 ರು. ವಸೂಲಿಗೆ ಆದೇಶಿಸಲಾಗಿದೆ.
*ಕಾಮಗಾರಿ ತಡೆಗೆ ಒತ್ತಾಯ: ಮಾಜಿ ಶಾಶಕ ಸುಭಾಷ ಗುತ್ತೇದಾರ ಅವರು ತಾಲೂಕಿನ ಎಲ್ಲಾ ಗ್ರಾಪಂಗಳಲ್ಲಿ ನಡೆಯುತ್ತಿರುವ ತೆರೆದ ಬಾವಿ ಕಾಮಗಾರಿಗಳನ್ನು ತಡೆಯಬೇಕು ಮತ್ತು ಹಣ ಪಾವತಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಒಪ್ಪದಿದ್ದರೆ ಸಾವಿರಾರು ಕೂಲಿಕಾರರೊಂದಿಗೆ ಜಿಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ನೀಡಿದ್ದಾರೆ. ಅಲ್ಲದೆ, ಸುಭಾಷ ಗುತ್ತೇದಾರರು, ಈ ರೀತಿಯ ಲೂಟಿಯನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಕ್ರಮದಲ್ಲಿ ಭಾಗಿಯಾದ ಎಲ್ಲಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಮತ್ತು ಕಾಮಗಾರಿಗಳ ಸಂಪೂರ್ಣ ತನಿಖೆಗೆ ಒತ್ತಾಯಿಸಿದ್ದಾರೆ. ನಕಲಿ ಜಾಬ್ ಕಾರ್ಡ್ಗಳ ಸೃಷ್ಟಿ