ಸಂಗ್ರಹಿಸಿಟ್ಟಿದ್ದ ಅಕ್ರಮ ಪಡಿತರ ಅಕ್ಕಿ ವಶಕ್ಕೆ

KannadaprabhaNewsNetwork |  
Published : Aug 03, 2026, 03:00 AM IST
2ಜಹಲಕಲ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸಾವಳಗಿಜಮಖಂಡಿ ತಾಲೂಕಿನ ಕವಟಗಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಮುಂದೆ ಆರೋಪಿಗಳಿಬ್ಬರು ಗೋಣಿ ಚೀಲ ಹಾಗೂ ಪ್ಲಾಸ್ಟಿಕ್‌ ಗೊಬ್ಬರ ಚೀಲಗಳಲ್ಲಿ ಅಕ್ರಮ ಪಡಿತರ ಸಂಗ್ರಹಿಸಿದ್ದ ಅಕ್ಕಿಯನ್ನು ಆಹಾರ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಸಾವಳಗಿ

ಜಮಖಂಡಿ ತಾಲೂಕಿನ ಕವಟಗಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಮುಂದೆ ಆರೋಪಿಗಳಿಬ್ಬರು ಗೋಣಿ ಚೀಲ ಹಾಗೂ ಪ್ಲಾಸ್ಟಿಕ್‌ ಗೊಬ್ಬರ ಚೀಲಗಳಲ್ಲಿ ಅಕ್ರಮ ಪಡಿತರ ಸಂಗ್ರಹಿಸಿದ್ದ ಅಕ್ಕಿಯನ್ನು ಆಹಾರ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.

ಗೋಣಿ ಹಾಗೂ ಪ್ಲಾಸ್ಟಿಕ್‌ ಗೊಬ್ಬರ ಚೀಲಗಳಗಳಲ್ಲಿ ಬಾಯಿ ಕಟ್ಟಿಟ್ಟ ಸರ್ಕಾರದ ವಿವಿಧ ಯೋಜನೆಯಡಿ ಸಾರ್ವಜನಿಕರಿಗೆ ಹಂಚಿಕೆ ಮಾಡಿದ ಪೌಷ್ಟಿಕ ಸಾರ ವರ್ಧಕ ಅಕ್ಕಿಯನ್ನು ಯಾವುದೇ ದಾಖಲಾತಿ ಇಲ್ಲದೆ ಅನಧಿಕೃತವಾಗಿ ಅಕ್ಕಿ ಕಡಿಮೆ ಬೆಲೆಗೆ ಸಂಗ್ರಹಿಸಿ, ಹೆಚ್ಚಿನ ಲಾಭಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಅಕ್ಕಿ ಸಂಗ್ರಹಿಸುತ್ತಿದ್ದರು.

4 ಗೋಣಿ ಚೀಲಗಳು ಹಾಗೂ 21 ಪ್ಲಾಸ್ಟಿಕ್‌ (ಗೋಬ್ಬರ) ಚೀಲ ಸೇರಿ ಒಟ್ಟು 25 ಚೀಲಗಳು ಇದ್ದವು. ಒಟ್ಟು 1,200 ಕೆ.ಜಿ ಯ ಅಕ್ಕಿ ಸರ್ಕಾರ ನಿಗದಿಪಡಿಸಿದಂತೆ ಪ್ರತಿ ಕೆ.ಜಿ ಗೆ ₹34. 60 ಪೈಸೆ ಇದ್ದು. ಈ ಪ್ರಕಾರ ಅಕ್ಕಿ ಕಿಮ್ಮತ್ತ 1,200 ಕೆ.ಜಿ ತೂಕದ ₹ 41,520 ಮೌಲ್ಯ ಆಗುತ್ತದೆ. ಅನಧಿಕೃತವಾಗಿ ಸಂಗ್ರಹಿಸಿಟ್ಟ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ಆಹಾರ ಇಲಾಖೆ ಶಿರಸ್ತೇದಾರ ಬಸವರಾಜ ತಾಳಿಕೋಟಿ ನೇತೃತ್ವದ ತಂಡ ಹಾಗೂ ಸಾವಳಗಿ ಪೊಲೀಸರ ಕಾರ್ಯಾಚರಣೆಯಲ್ಲಿ ಇದ್ದರು. ಈ ಕುರಿತು ಸಾವಳಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವ ಕಳ್ಳಸಾಗಾಣಿಕೆಯ ಜಾಗೃತಿ ಮೂಡಿಸುವುದು ಮುಖ್ಯ: ಅರವಿಂದ ಹಾಗರಗಿ
ಕೃಷ್ಣೆಗೆ ಹೆಚ್ಚಿದ ಒಳಹರಿವು: ಆತಂಕದಲ್ಲಿ ತೀರದ ಜನತೆ