ಭಾರತೀಯ ಮಹಿಳೆಯರಿಂದ ದೇಶದ ಆರ್ಥಿಕತೆ ಸುಧಾರಣೆ: ಕೆ.ಉಲ್ಲಾಸ ಕಾಮತ್

KannadaprabhaNewsNetwork |  
Published : Oct 14, 2025, 01:02 AM IST
(ಫೋಟೊ 13ಬಿಕೆಟಿ3, ಪದವಿದರರ ಸಮೂಹ ಚಿತ್ರದಲ್ಲಿ ಸಂಘದ ಕಾರ್ಯಾಧ್ಯಕ್ಷರಾದ ಡಾ, ವೀರಣ್ಣ ಚರಂತಿಮಠ ಮುಖ್ಯ ಅತಿಥಿಗಳು ಭಾಗವಹಸಿರುವುದು.) | Kannada Prabha

ಸಾರಾಂಶ

ಬಾಗಲಕೋಟೆ ನಗರದ ಬಿ.ವಿ.ವಿ.ಸಂಘದ ಬಸವೇಶ್ವರ ಎಂಜಿನಿಯರಿಂಗ್‌ ಕಾಲೇಜು ಸಭಾಭವನದಲ್ಲಿ ಸೋಮವಾರ ಬಿ.ವಿ.ವಿ.ಎಸ್ ಇನ್ಸ್ಟಿಟ್ಯೂಟ್ ಮ್ಯಾನೇಜಮೆಂಟ್ ಸ್ಟಡೀಸ್ ಪದವಿ ಪ್ರದಾನ ಸಮಾರಂಭದಲ್ಲಿ ಜ್ಯೋತಿ ಲ್ಯಾಬ್ಸ್ ಲಿ. ನಿಕಟಪೂರ್ವ ಜಂಟಿ ನಿರ್ವಹಣಾ ನಿರ್ದೇಶಕರು ಹಾಗೂ ಯುಕೆ ಮತ್ತು ಕಂಪನಿ ಸಂಸ್ಥಾಪಕ ಕೆ.ಉಲ್ಲಾಸ ಕಾಮತ್ ಪದವಿ ಪ್ರದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಭಾರತದಲ್ಲಿ ಗೃಹಣಿಯರು ಕುಟುಂಬದ ಆರ್ಥಿಕತೆ ಕಟ್ಟುವಲ್ಲಿ ಯಶಸ್ವಿಯಾಗಿದ್ದು, ಮುಂದಿನ 50ರಿಂದ 100 ವರ್ಷಗಳಲ್ಲಿ ಮಹಿಳೆಯರಿಂದಲೇ ಭಾರತದ ಆರ್ಥಿಕತೆ ಸುಧಾರಿಸಲಿದೆ. ಆ ನಿಟ್ಟಿನಲ್ಲಿ ಜಗತ್ತಿನ ಆರ್ಥಿಕತೆಯ ಶ್ರೇಣಿಯಲ್ಲಿ ಭಾರತ ಹೆಚ್ಚಿನ ಸ್ಥಾನ ಪಡೆಯಬೇಕೆಂದರೆ ಭಾರತೀಯ ಮಹಿಳೆಯರಿಂದಲೇ ಸಾಧ್ಯ ಎಂದು ಜ್ಯೋತಿ ಲ್ಯಾಬ್ಸ್ ಲಿ. ನಿಕಟಪೂರ್ವ ಜಂಟಿ ನಿರ್ವಹಣಾ ನಿರ್ದೇಶಕರು ಹಾಗೂ ಯುಕೆ ಮತ್ತು ಕಂಪನಿ ಸಂಸ್ಥಾಪಕ ಕೆ.ಉಲ್ಲಾಸ ಕಾಮತ್ ಹೇಳಿದರು

ನಗರದ ಬಿ.ವಿ.ವಿ.ಸಂಘದ ಬಸವೇಶ್ವರ ಎಂಜಿನಿಯರಿಂಗ್‌ ಕಾಲೇಜು ಸಭಾಭವನದಲ್ಲಿ ಸೋಮವಾರ ನಡೆದ ಬಿ.ವಿ.ವಿ.ಎಸ್ ಇನ್ಸ್ಟಿಟ್ಯೂಟ್ ಮ್ಯಾನೇಜಮೆಂಟ್ ಸ್ಟಡೀಸ್ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪದವಿ ಪ್ರದಾನ ಮಾಡಿ ಮಾತನಾಡಿದರು .

ಎಂಬಿಎ ಸ್ನಾತಕೋತ್ತರ ಶಿಕ್ಷಣ ಮುಗಿಸಿ ಪದವಿ ಪಡೆಯುವುದು ಒಂದು ಮುಖ್ಯ ಹಂತ. ಮೊಬೈಲ್‌ ವ್ಯಾಮೋಹ ತೊರೆದು ಓದಿನ ಕಡೆಗೆ ಗಮನ ಕೊಡಬೇಕು. ಕರ್ನಾಟಕದಲ್ಲಿ ಪ್ರತಿವರ್ಷ 21ಲಕ್ಷ ಪದವೀದರರು ಔದ್ಯೋಗಿಕ ಕ್ಷೇತ್ರಕ್ಕೆ ಬರುತ್ತಾರೆ. ಸುಮಾರು 20 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತಲೇ ಇವೆ, ಈ ಉದ್ಯೋಗಳು ಕೌಶಲ್ಯ ಬೇಕಾಗುತ್ತದೆ. ತಂದೆ ತಾಯಿಗಳು ನಿಮ್ಮ ಮೇಲೆ ಬಂಡವಾಳ ಹಾಕಿ ಪದವಿಧರರನ್ನಾಗಿ ಮಾಡುತ್ತಾರೆ. ಕಂಪನಿಗಳು ನಿಮ್ಮ ಮೇಲೆ ಬಂಡವಾಳ ಹಾಕಿ ಕಂಪನಿಯ ರಾಯಭಾರಿಯನ್ನಾಗಿ ಮಾಡುತ್ತವೆ ಎಂಬ ಅರಿವು ನಮಗಿರಬೇಕು ಎಂದರು.

ಬಾಗಲಕೋಟೆ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ, ಆನಂದ ದೇಶಪಾಂಡೆ ಮಾತನಾಡಿ ಬಿ.ವಿ.ವಿ.ಸಂಘದ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ನೋಡಿದರೆ ಅದ್ಭುತ ಎನಿಸುತ್ತದೆ, ಇಲ್ಲಿ ಉತ್ತಮ ಶಿಕ್ಷಕರ ತಂಡ ಇದೆ, ಒಳ್ಳೆಯ ಮೂಲಭೂತ ಸೌಕರ್ಯವಿದೆ, ಒಳ್ಳೆಯ ವಿದ್ಯಾರ್ಥಿಗಳಿದ್ದಾರೆ. ರಾಜ್ಯಕ್ಕೆ ಇದೊಂದು ಮಾದರಿ ಸಂಸ್ಥೆಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಅವರು ಮಾತನಾಡಿದರು. ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಬಾವಿ, ನಿರ್ದೇಶಕರಾದ ಡಾ.ಪ್ರಕಾಶ ವಡವಡಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಪದವಿ ಪ್ರದಾನ: ಇನ್ಸ್ಟಿಟ್ಯೂಟ್ ಮ್ಯಾನೇಜಮೇಂಟ್ ಸ್ಟಡೀಸ್‌ನ ಸುಮಾರು 60 ಜನ ಪದವಿಧರರಿಗೆ ಪದವಿ ಪ್ರದಾನ ಮಾಡಲಾಯಿತು.

ಶ್ರೀನಿಧಿ ಸಂಗಡಿಗರಿಂದ ಪ್ರಾರ್ಥನೆ ಸಲ್ಲಿಸಲಾಯಿತು, ನಿರ್ದೇಶಕ ಡಾ.ಪ್ರಕಾಶ ವಡವಡಗಿ ಸ್ವಾಗತಿಸಿದರು, ಡಾ.ಪವನ ಬೇನಕಟ್ಟಿ ಕಾಲೇಜು ನಡೆದ ಬಂದ ದಾರಿಯ ಬಗ್ಗೆ ವಿವರಣೆ ನೀಡಿದರು, ಡಾ.ಅಮರೇಶ ಚರಂತಿಮಠ ಹಾಗೂ ಸಂತೋಷ ಕುಮಾರ ನಿರೂಪಿಸಿದರು.

PREV

Recommended Stories

ದೀಪಾವಳಿ ಹಬ್ಬ : ಕೆಎಸ್ಸಾರ್ಟಿಸಿಯಿಂದ 2500 ಹೆಚ್ಚುವರಿ ಬಸ್‌
ಆರೆಸ್ಸೆಸ್‌ ಚಟುವಟಿಕೆ ನಿಷೇಧ ಬಗ್ಗೆ ತಮಿಳುನಾಡು ಮಾದರಿ ಪರಿಶೀಲನೆ : ಸಿದ್ದರಾಮಯ್ಯ