- ಉಪಶಮನಾಕಾರಿ ಆರೈಕೆ ಮಾಹಿತಿ ಕಾರ್ಯಕ್ರಮದಲ್ಲಿ ಡಾ. ಎ.ಎಂ. ಶಿಲ್ಪ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ವಿವೇಕ್ ಪೋಷಕರ ಕಾರ್ಯಾಗಾರದ ಅಡಿಯಲ್ಲಿ ಬಾಪೂಜಿ ಸಿಎಚ್ಐ ಕೇಂದ್ರ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಉಪಶಮನಾಕಾರಿ ಆರೈಕೆ ಕುರಿತು ಅವರು ಮಾಹಿತಿ ನೀಡಿದರು.
ಉಪಶಮನಕಾರಿ ಆರೈಕೆ ಮಾಹಿತಿ ಕೇವಲ ರೋಗ ನಿರೋಧನೆಯಲ್ಲ. ಆದರೆ ಶಾರೀರಿಕ, ಮಾನಸಿಕ, ಸಾಮಾಜಿಕ, ಮತ್ತು ಆಧ್ಯಾತ್ಮಿಕ ಬೆಂಬಲವನ್ನು ಒದಗಿಸುವುದು. ನೋವು ಮತ್ತು ತೊಂದರೆ ನಿವಾರಿಸುವುದಾಗಿದೆ. ರೋಗಿಯ ತೊಂದರೆಗಳನ್ನು ಕಡಿಮೆಗೊಳಿಸಿ, ಶಾಂತ ಮತ್ತು ಸಮಾಧಾನಕರ ಜೀವನ ನಡೆಸಲು ಸಹಾಯ ಮಾಡುತ್ತದೆ. ದಿನನಿತ್ಯದ ಚಟುವಟಿಕೆಗಳಲ್ಲಿ ಭಾಗವಹಿಸಲು ಶಕ್ತಿಗೊಳಿಸುತ್ತದೆ. ದೀರ್ಘಕಾಲದ ಕಾಯಿಲೆಗಳ ನಿರ್ವಹಣೆ ಈ ಆರೈಕೆ ಸಹಾಯಕಾರಿ ಎಂದರು.ಪಾರ್ಕಿನ್ಸನ್ಸ್, ಡಿಮೆನ್ಷಿಯಾ, ಹೃದಯ ಅಸಮರ್ಥತೆ, ಮತ್ತು ಡಯಾಬಿಟೀಸ್ ಹೀಗೆ ದೀರ್ಘಕಾಲದ ಕಾಯಿಲೆಗಳಲ್ಲಿಯೂ ಈ ಆರೈಕೆಯ ಅಗತ್ಯವಿದೆ. ರೋಗಿಯ ಶಾರೀರಿಕ ಮತ್ತು ಮನೋವೈಜ್ಞಾನಿಕ ತೊಂದರೆಗಳನ್ನು ನಿರ್ವಹಿಸಲು ಇದು ಸಹಾಯಕ. ಈ ಆರೈಕೆ ಆಧ್ಯಾತ್ಮಿಕ ಮತ್ತು ಮಾನಸಿಕ ಬೆಂಬಲ ನೀಡಲಿದೆ. ಮಾತ್ರವಲ್ಲದೇ ರೋಗಿಯು ಬದುಕಿನ ತಿರುವುಗಳನ್ನು ಮತ್ತು ಮರಣದ ಭಯವನ್ನು ಎದುರಿಸಲು ಬೆಂಬಲ ನೀಡುತ್ತದೆ. ಇದಲ್ಲದೇ ಸಮಾಲೋಚನೆ ಮತ್ತು ಧ್ಯಾನದ ಮೂಲಕ ಮನಃಶಾಂತಿ ಒದಗಿಸುವುದು ಇದರ ಮುಖ್ಯ ಉದ್ದೇಶಗಳಲ್ಲಿ ಒಂದು ಎಂದು ಮಾಹಿತಿ ನೀಡಿದರು.
- - -
- ಡಾ. ಎ.ಎಂ. ಶಿಲ್ಪ, ಪ್ಯಾಲಿಯೇಟಿವ್ ಕೇರ್ ತಜ್ಞೆ - - -
ದಾವಣಗೆರೆಯ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ, ಸಂಶೋಧನಾ ಕೇಂದ್ರದ ವಿವೇಕ್ ಪೋಷಕರ ಕಾರ್ಯಾಗಾರದಲ್ಲಿ ನಡೆದ ಉಪಶಮನಾಕಾರಿ ಆರೈಕೆ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಎ.ಎಂ. ಶಿಲ್ಪ ಮಾಹಿತಿ ನೀಡಿದರು.