)
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೂಲ ಆಶಯಕ್ಕೆ ಧಕ್ಕೆ ತರುವುದು ಒಪ್ಪಲ್ಲ:
ಕವಿಗಳ ಮೂಲ ಆಶಯಕ್ಕೆ ಧಕ್ಕೆ ತರುವುದನ್ನು ನಾವು ಒಪ್ಪುವುದಿಲ್ಲ. ಈ ಗೊಂದಲಗಳಿಗೆ ಸರ್ಕಾರ ಇತಿಶ್ರೀ ಹಾಡಬೇಕು. ಒಂದು ವೇಳೆ ಸರ್ಕಾರ ಹೊಸ ತಿದ್ದುಪಡಿ ಒಪ್ಪಿ ಆದೇಶ ಹೊರಡಿಸಿದಲ್ಲಿ, ಅಧಿಕೃತವಲ್ಲದ ಈ ತಿದ್ದುಪಡಿ ಕ್ರಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ತೀರ್ಮಾನಿಸಲಾಗಿದೆ ಸಂಘಟನೆಗಳು ಎಚ್ಚರಿಕೆ ನೀಡಿವೆ.ಕುವೆಂಪು ವಿರಚಿತ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ ಪದ್ಯದಲ್ಲಿ ‘ಕಪಿಲ, ಪತಂಜಲ, ಗೌತಮ ಜಿನನುತ’ ಅಂದರೆ, ಗೌತಮ ಮತ್ತು ಜಿನ ಮುನಿಗಳಿಂದ ಕೊಂಡಾಡಲ್ಪಟ್ಟ ಕರ್ನಾಟಕದ ಹಿರಿಮೆ ಬಣ್ಣಿಸಲಾಗಿದೆ. ಈ ಗೀತೆಯನ್ನು ಕರ್ನಾಟಕದ ಅಧಿಕೃತ ರಾಜ್ಯಗೀತೆಯಾಗಿ 2004ರಲ್ಲಿ ಘೋಷಿಸಲಾಗಿದೆ. ಗೌತಮ ಎಂಬ ಪದ ಬಳಕೆ ಬೌದ್ಧ ಧರ್ಮ ಸಂಸ್ಥಾಪಕ ಗೌತಮ ಬುದ್ಧ ಅವರದ್ದೇ ಆಗಿರುವಾಗ ಬೌದ್ಧರುದ್ಯಾನ ಎಂಬ ಪದವನ್ನು ಮತ್ತೇಕೆ ಬಳಸುವ ಅಗತ್ಯ ಇದೆ ಎಂದು ಕರ್ನಾಟಕ ವಿಕಾಸ ರಂಗ ಪ್ರಶ್ನಿಸಿದೆ.ಈ ನಾಡಿನ ಕನ್ನಡ ವಿದ್ವಾಂಸರೇ ಅಧಿಕ ಮಂದಿ ಇದ್ದ ಸಮಿತಿಯು ಪ್ರಸ್ತುತ ನಾಡಗೀತೆಯ ಸಾಲುಗಳಲ್ಲಿರುವ ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ ಎಂಬ ಭಾಗದಲ್ಲಿ ಬೌದ್ಧರುದ್ಯಾನ ಎಂಬ ಶಬ್ದ ಸೇರಿಸಲು ಶಿಫಾರಸು ಮಾಡಿರುವುದು ದುರದೃಷ್ಟಕರ. ಸರ್ಕಾರದ ಈ ನಿರ್ಧಾರದ ಹಿಂದೆ ಡಾ.ಅಂಬೇಡ್ಕರ್ ಪ್ರಭಾವದಿಂದ ಬೌದ್ಧ ಧರ್ಮಕ್ಕೆ ಒಲಿದಿರುವ ದಲಿತರ ಮನವೊಲಿಸುವ ಹಾಗೂ ಮತಗಿಟ್ಟಿಸುವ ರಾಜಕೀಯ ಹುನ್ನಾರ ಇದರಲ್ಲಿ ಅಡಗಿದೆ ಎಂದು ಕನ್ನಡ ಜನಶಕ್ತಿ ಕೇಂದ್ರ ಸಂಶಯ ವ್ಯಕ್ತಪಡಿಸಿದೆ.