ಶಿಗ್ಗಾಂವಿ: ರಕ್ಷಣಾ ಕ್ಷೇತ್ರದಲ್ಲಿ ಆಮದು ಮಾಡಿಕೊಳ್ಳುವ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಆಮದು ಕಡಿಮೆ ಮಾಡಿ, ದೇಶೀಯ ಉತ್ಪಾದನೆ ಹೆಚ್ಚು ಮಾಡುವುದರಿಂದ ದೇಶದ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚುಚ್ಚದೆ. ವ್ಯಾಪಾರವನ್ನೇ ನಂಬಿ ಜೀವನ ಮಾಡುತ್ತಿರುವ ಸಮುದಾಯದವರಿಗೆ ವಿಸ್ತಾರವಾದ ಮಾರುಕಟ್ಟೆ ದೊರಕಿಸಿಕೊಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಹಂತ ಹಂತವಾಗಿ ಸ್ವದೇಶಿ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಇದರಿಂದ ದೇಶದ ಆರ್ಥಿಕ ಸ್ಥಿತಿ ಸದೃಢವಾಗುತ್ತದೆ. ತೆಲೆಮಾರುಗಳಿಂದ ನ್ಯಾಯಯುತವಾಗಿ ವ್ಯಾಪಾರ ಮಾಡಿಕೊಂಡು ಬಂದಿರುವ ಸಮುದಾಯಗಳು ದೇಶದ ಆರ್ಥಿಕತೆಯ ಸರಪಳಿಯಲ್ಲಿ ಬಲಿಷ್ಠವಾದ ಕೊಂಡಿ ಎಂದರು.
ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಸಮಾಜದ ದುರ್ಬಲ ವರ್ಗದವರನ್ನು ಎತ್ತಿಹಿಡಿಯುವ ಕೆಲಸವನ್ನು ಬಣಿಜಿಗ ಸಮಾಜ ಮಾಡುತ್ತಾ ಬಂದಿದೆ ಎಂದರು.ಸಿದ್ದಾರ್ಥ ಪಾಟೀಲ, ಭರತ ಬೊಮ್ಮಾಯಿ, ಶ್ರೀಕಾಂತ ದುಂಡಿಗೌಡ್ರ, ಶಿವಾನಂದ ಮ್ಯಾಗೇರಿ, ಬಸಣ್ಣ ಹೆಸರೂರ, ಶಶಿಧರ ಯಲಿಗಾರ, ಲಿಂಗರಾಜ ಆಂಗಡಿ, ಚನ್ನವೀರ ಅಕ್ಕಿ, ಐ.ಪಿ.ಕೆ. ಶೆಟ್ಟರ, ಪೂಜಾ ಹೆಸರೂರ, ಶಿವಪುತ್ರಪ್ಪ ಜವಳಿ, ಶಂಭಣ್ಣ ಜಿಗಳಿಶೆಟ್ಟರ, ಚನ್ನಬಸಪ್ಪ ಅಂಗಡಿ, ಬಸವರಾಜ ನೇರಲಗಿ, ಚನ್ನಪ್ಪ ಗುದ್ಲಿಶೆಟ್ಟರ, ವೀರೇಶ ಸೊಬರದ ಇತರರಿದ್ದರು.