ಆಲಮಟ್ಟಿ ಡ್ಯಾಂನಿಂದ ಹೆಚ್ಚಿದ ಹೊರಹರಿವು

KannadaprabhaNewsNetwork |  
Published : Jun 14, 2025, 12:57 AM ISTUpdated : Jun 14, 2025, 12:58 AM IST
ಆಲಮಟ್ಟಿ | Kannada Prabha

ಸಾರಾಂಶ

ಆಲಮಟ್ಟಿ: ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಳವಾಗುತ್ತಿದ್ದು, ಮುಂಜಾಗ್ರತೆಯ ಕ್ರಮವಾಗಿ ಶುಕ್ರವಾರ ಸಂಜೆಯಿಂದ ಹೊರಹರಿವನ್ನು 6000 ಕ್ಯುಸೆಕ್ ಗೆ ಹೆಚ್ಚಿಸಲಾಗಿದೆ. ಜೂನ್ ಎರಡನೇಯ ವಾರದಲ್ಲಿಯೇ ಆಲಮಟ್ಟಿ ಜಲಾಶಯದಲ್ಲಿ 62.3 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 12,134 ಕ್ಯುಸೆಕ್ ಒಳಹರಿವಿದ್ದು, ಜಲಾಶಯದ ಮಟ್ಟ 514.91 ಮೀ ಇದೆ.

ಆಲಮಟ್ಟಿ: ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಳವಾಗುತ್ತಿದ್ದು, ಮುಂಜಾಗ್ರತೆಯ ಕ್ರಮವಾಗಿ ಶುಕ್ರವಾರ ಸಂಜೆಯಿಂದ ಹೊರಹರಿವನ್ನು 6000 ಕ್ಯುಸೆಕ್ ಗೆ ಹೆಚ್ಚಿಸಲಾಗಿದೆ. ಜೂನ್ ಎರಡನೇಯ ವಾರದಲ್ಲಿಯೇ ಆಲಮಟ್ಟಿ ಜಲಾಶಯದಲ್ಲಿ 62.3 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 12,134 ಕ್ಯುಸೆಕ್ ಒಳಹರಿವಿದ್ದು, ಜಲಾಶಯದ ಮಟ್ಟ 514.91 ಮೀ ಇದೆ.

ಕಳೆದ ಎರಡು ದಿನಗಳ ಹಿಂದೆ 2000 ಕ್ಯುಸೆಕ್ ಇದ್ದ ಹೊರ ಹರಿವನ್ನು ಶುಕ್ರವಾರ 6000 ಕ್ಯುಸೆಕ್ ಗೆ ಹೆಚ್ಚಿಸಲಾಗಿದೆ. 6000 ಕ್ಯುಸೆಕ್ ನೀರು ಆಲಮಟ್ಟಿ ವಿದ್ಯುತ್ ಉತ್ಪಾದನೆ ಘಟಕದ ಮೂಲಕ ನೀರು ಬಿಡುತ್ತಿರುವುದರಿಂದ ಸುಮಾರು 40 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಜಲಾಶಯದ ಹಿನ್ನೀರಿನ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದು, ಮುಂದಿನ ಕೆಲ ದಿನಗಳವರೆಗೆ ಒಳಹರಿವು ಹೆಚ್ಚಾಗಲಿದೆ. ಹೀಗಾಗಿ ಮುಂಜಾಗ್ರತೆ ಕ್ರಮವಾಗಿ ಹಂತ ಹಂತವಾಗಿ ಹೊರಹರಿವು ಹೆಚ್ಚಿಸಲಾಗುತ್ತಿದೆ ಎಂದು ಕೆಬಿಜೆಎನ್‌ಎಲ್‌ ಅಧಿಕಾರಿಗಳು ತಿಳಿಸಿದರು.

ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಹೆಚ್ಚಿಲ್ಲ. ಕರ್ನಾಟಕಕ್ಕೆ ಬಂದು ಸೇರುವ ಮಹಾರಾಷ್ಟ್ರ ರಾಜಾಪುರ ಬಳಿ ಕೃಷ್ಣೆಯ ಹರಿವು 9000 ಕ್ಯುಸೆಕ್ ಇದ್ದು, ದೂಧಗಂಗಾ ನದಿ ಬಂದು ಸೇರುವ ಕಲ್ಲೋಳ ಬ್ಯಾರೇಜ್ ಬಳಿ 16,000 ಕ್ಯುಸೆಕ್ ನದಿಯ ಹರಿವಿದೆ.

ಶುಕ್ರವಾರ ಕೊಯ್ನಾದಲ್ಲಿ 15 ಮಿ.ಮೀ, ನವಜಾದಲ್ಲಿ 10 ಮಿ.ಮೀ, ಮಹಾಬಳೇಶ್ವರದಲ್ಲಿ 12 ಮಿ.ಮೀ.ಮಳೆಯಾಗಿದೆ. ಇನ್ನೂ ಪೂರ್ಣ ಪ್ರಮಾಣದಲ್ಲಿ ಮುಂಗಾರು ಮಳೆ ಆರಂಭಗೊಂಡಿಲ್ಲ. ಹೀಗಾಗಿ ಸದ್ಯ ಯಾವುದೇ ನೆರೆಯ ಆತಂಕವಿಲ್ಲ.

ಕಾಲುವೆಗಳ ದುರಸ್ತಿಗೆ ಆಗ್ರಹ: ಇನ್ನೂ ಕೆಲ ದಿನಗಳಲ್ಲಿ ಕಾಲುವೆಗೂ ನೀರು ಹರಿವು ಆರಂಭಗೊಳ್ಳುತ್ತದೆ. ಹೀಗಾಗಿ ಕೆಬಿಜೆಎನ್‌ಎಲ್‌ ಅಧಿಕಾರಿಗಳು ತ್ವರಿತವಾಗಿ ಕಾಲುವೆಗಳನ್ನು ದುರಸ್ತಿಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಸ್ವಚ್ಛಗೊಳಿಸಬೇಕಯ ಎಂದು ಕೃಷ್ಣಾ ಕಾಡಾದ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''