ಅನಾಥರ ಸೇವೆ ಮೂಲಕ ಮಾನವೀಯ ಮೌಲ್ಯ ರೂಡಿಸಿಕೊಳ್ಳಿ: ಕುಸುಮ

KannadaprabhaNewsNetwork |  
Published : Dec 18, 2024, 01:46 AM IST
DK | Kannada Prabha

ಸಾರಾಂಶ

ಅಶಕ್ತರು, ಅನಾಥರ ಸೇವೆ ಮಾಡುವ ಮೂಲಕ ಮಾನವೀಯ ಮೌಲ್ಯಗಳನ್ನು ರೂಡಿಸಿಕೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರೆ ಕುಸುಮ ಹನುಮಂತ ರಾಯಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಶಕ್ತರು, ಅನಾಥರ ಸೇವೆ ಮಾಡುವ ಮೂಲಕ ಮಾನವೀಯ ಮೌಲ್ಯಗಳನ್ನು ರೂಡಿಸಿಕೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರೆ ಕುಸುಮ ಹನುಮಂತ ರಾಯಪ್ಪ ಹೇಳಿದರು.

ನಗರದ ಮಾಗಡಿ ಮುಖ್ಯ ರಸ್ತೆಯ ನಿರಾಶ್ರಿತರ ಪುನರ್ವಸತಿ ಕೇಂದ್ರದ ನಿರಾಶ್ರಿತರಿಗೆ ಲೋಕಸಭಾ ಮಾಜಿ ಸದಸ್ಯ ಡಿ.ಕೆ.ಸುರೇಶ್ ಅವರ ಹುಟ್ಟು ಹಬ್ಬದ ಅಂಗವಾಗಿ ಹಣ್ಣು-ಹಂಪಲು, ಕಂಬಳಿ ಹೊದಿಕೆ ವಿತರಿಸಿದ ಬಳಿಕ ಮಾತನಾಡಿದ ಅವರು, ಅಧಿಕಾರ, ಅಂತಸ್ತು ಯಾವುದು ಶಾಶ್ವತವಲ್ಲ. ಬಡವರು, ಅನಾಥರ, ಅಶಕ್ತರ ಸಂಕಷ್ಟಗಳಿಗೆ ಮಿಡಿಯುವ ಮೂಲಕ ಮಾನವ ಧರ್ಮ ಪಾಲಿಸಬೇಕು ಎಂದು ಹೇಳಿದರು.

ಕೊಟ್ಟಿಗೆಪಾಳ್ಯ ಬಿಬಿಎಂಪಿ ಮಾಜಿ ಸದಸ್ಯ ಮೋಹನ್ ಕುಮಾರ್ ಮಾತನಾಡಿ, ನಿರಾಶ್ರಿತರ ಸೇವೆಯೇ ದೇವರ ಸೇವೆ. ಸಂದರ್ಭದ ಕಾಲ ಸುಳಿಗೆ ಸಿಲುಕಿ ಬಂಧು-ಬಾಂಧವರ ಒಡನಾಟವಿಲ್ಲದೆ ಜೀವನ ಸಾಗಿಸುತ್ತಿರುವರ ನೆರವಿಗೆ ಧಾವಿಸ ಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗ ಬೇಕಾಗಿದೆ ಎಂದರು.

ಕಾಂಗ್ರೆಸ್ ಮುಖಂಡರಾದ ರಾಂಪುರ ನಾಗೇಶ್, ಅಮರ್, ರಮೇಶ್ ಗೌಡ, ಜ್ಯೋತಿ, ರಾಜೇಶ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!