ಮಕ್ಕಳೆಂಬ ಸಸಿಗೆ ಮಾನವೀಯ ಮೌಲ್ಯಗಳ ನೀರೆರೆಯಿರಿ: ಗೌರವ್

KannadaprabhaNewsNetwork |  
Published : Jun 07, 2026, 01:30 AM IST
೬ಕೆಎಂಎನ್‌ಡಿ-೧ಗುರುಕುಲದ ಶಿಕ್ಷಕ ವೃಂದದವರೊಂದಿಗೆ ಗಿಡ ನೆಡುತ್ತಿರುವ ಹೊಸ ವಿದ್ಯಾರ್ಥಿಗಳು. | Kannada Prabha

ಸಾರಾಂಶ

ಮಕ್ಕಳು ಸಸಿಯಂತೆ. ಅವರಿಗೆ ಸುರಕ್ಷಿತವಾಗಿ ಶಿಸ್ತು ಎಂಬ ಕಟ್ಟೆ ಕಟ್ಟಿ, ಮಾನವೀಯ ಮೌಲ್ಯಗಳು ಎಂಬ ನೀರನ್ನು ಎರೆಯುವಾಗ, ಉತ್ತಮ ಚಾರಿತ್ರ್ಯ ಎಂಬ ಹೂವುಗಳು ಅರಳಿ, ಸಮಾಜ ಸೇವೆ ಮತ್ತು ಸಮರ್ಪಿತ ಜೀವನ ಎಂಬ ಹಣ್ಣುಗಳು ದೊರೆಯುತ್ತವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಮಾರದೇವನಹಳ್ಳಿಯಲ್ಲಿ ಸ್ಥಾಪಿತವಾಗಿರುವ ಗುರುಕುಲ ಉಚಿತ ಶಿಕ್ಷಣ ಸಂಸ್ಥೆ ಶ್ರೀಸತ್ಯಸಾಯಿ ಶಾರದಾ ನಿಕೇತನದಲ್ಲಿ ವಿನೂತನವಾಗಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.

‘ವಿದ್ಯಾರ್ಥಿಗೊಂದು ಮರ’ ಪರಿಕಲ್ಪನೆಯಡಿ ಹೊಸದಾಗಿ ಆರನೇ ತರಗತಿಗೆ ದಾಖಲಾತಿ ಪಡೆದ ವಿದ್ಯಾರ್ಥಿಗಳು ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟರು. ತಾವು ನೆಟ್ಟ ಗಿಡವನ್ನು ಪ್ರತಿದಿನ ವಿದ್ಯಾರ್ಥಿಗಳೇ ನೀರೆರೆದು ಪೋಷಿಸುತ್ತಾರೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರೈಸುವ ವೇಳೆ ಈ ಗಿಡ ಮರವಾಗಿ ಬೆಳೆದು ನಿಲ್ಲುತ್ತದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಏಕ್ ಪೇಡ್ ಮಾ ಕೇ ನಾಮ್ ಉಪಕ್ರಮದಿಂದ ಪ್ರೇರಿತರಾಗಿ ಸತ್ಯಸಾಯಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ. ಗೌರವ್ ಈ ಪರಿಕಲ್ಪನೆಗೆ ಚಾಲನೆ ನೀಡಿದರು.

ಹೊಂಗೆ, ಮಾವು, ಹಲಸು, ತೇಗ ಸೇರಿದಂತೆ ಹತ್ತಾರು ವಿವಿಧ ಜಾತಿಯ ಸಸಿಗಳನ್ನು ನೆಟ್ಟು ನೀರನ್ನು ಎರೆಯಲಾಯಿತು. ಈ ಗಿಡಗಳು ಮಕ್ಕಳ ಜತೆ ಬೆಳೆದು ನೆರಳು, ಹಣ್ಣುಗಳನ್ನು ನೀಡುತ್ತಾ ಜನೋಪಯೋಗಿಯಾಗುತ್ತವೆ. ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಗುರುಕುಲ ಲೋಕಸೇವಾ ಸಂಸ್ಥೆಯ ಅಧೀನದ ಈ ಶಾಲೆಯಲ್ಲಿ ವಸತಿ ಸಹಿತ ಉಚಿತ ಶಿಕ್ಷಣ ನೀಡಲಾಗುತ್ತಿದ್ದು, ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಗೌರವ್, ಮಕ್ಕಳು ಸಸಿಯಂತೆ. ಅವರಿಗೆ ಸುರಕ್ಷಿತವಾಗಿ ಶಿಸ್ತು ಎಂಬ ಕಟ್ಟೆ ಕಟ್ಟಿ, ಮಾನವೀಯ ಮೌಲ್ಯಗಳು ಎಂಬ ನೀರನ್ನು ಎರೆಯುವಾಗ, ಉತ್ತಮ ಚಾರಿತ್ರ್ಯ ಎಂಬ ಹೂವುಗಳು ಅರಳಿ, ಸಮಾಜ ಸೇವೆ ಮತ್ತು ಸಮರ್ಪಿತ ಜೀವನ ಎಂಬ ಹಣ್ಣುಗಳು ದೊರೆಯುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಸತ್ಯಸಾಯಿ ಶಾರದಾ ನಿಕೇತನ ಗುರುಕುಲದ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ರಾಜು, ಚೇತನ್, ಹರ್ಷವರ್ಧನ್, ಶಿಕ್ಷಕ ಸಿಬ್ಬಂದಿ ಎಂ.ಕಾರ್ತಿಕ್‌ಗೌಡ, ಎಂ.ಸಿ.ಮನು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಆರೋಗ್ಯಕ್ಕಾಗಿ ಗಿಡಗಳನ್ನು ಬೆಳೆಸಿ: ಮಹೇಶ್ ಕುಮಾರ್
ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಉಂಟಾಗಬೇಕು