ಹುಬ್ಬಳ್ಳಿ:
ಧಾರವಾಡದ ಬೇಲೂರ ಕೈಗಾರಿಕಾ ಪ್ರದೇಶದಲ್ಲಿ ಶುಕ್ರವಾರ ನಿಡೇಕ್ನ ದಿ ಆರ್ಚರ್ಡ್ ಹಬ್ ಉದ್ಘಾಟಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ವಿಶ್ವಪ್ರಸಿದ್ಧ ಉತ್ಪಾದನಾ ಕೇಂದ್ರವಾಗುವತ್ತ ಸಾಗಿದೆ. ಪ್ರಧಾನಿ ಅವರು ಘೋಷಿಸಿದ ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್ ಕೇವಲ ಘೋಷಣೆಯಲ್ಲ ಭಾರತದ ಪ್ರಗತಿಯ ನೋಟಕ್ಕೆ ಪ್ರತೀಕವಾಗಿದೆ ಎಂದರು.
ಮೋದಿ ಸರ್ಕಾರ ಕೈಗೊಂಡ ಸುಧಾರಣೆ, ಜಿಎಸ್ಟಿ ಸರಳೀಕೃತ ವ್ಯವಸ್ಥೆ, ಡಿಜಿಟಲೀಕರಣದ ಪರಿಣಾಮ ಇಂದು ವಿಶ್ವದ ಅತಿದೊಡ್ಡ ಕಂಪನಿಗಳು ತಮ್ಮ ಉತ್ಪಾದನಾ ನೆಲೆಯಾಗಿ ಭಾರತವನ್ನು ಅರಸಿಕೊಂಡು ಬರುತ್ತಿವೆ. ಆ್ಯಪಲ್, ಸ್ಯಾಮ್ಸಂಗ್, ಎಲ್ಜಿ, ಟೊಯೋಟಾ ಹೀಗೆ ಪ್ರಮುಖ ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಉತ್ಪಾದನೆ ಮಾಡುತ್ತಿವೆ. ಪ್ರಸ್ತುತದಲ್ಲಿ ಭಾರತ ಕೇವಲ ಬಳಕೆ ಮಾರುಕಟ್ಟೆ ಮಾತ್ರವಲ್ಲ, ಉತ್ಪಾದನಾ ನೆಲೆ ಮತ್ತು ರಫ್ತು ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಹೇಳಿದರು.ಅವಳಿ ಎಂಜಿನ್:
6 ಕಾರ್ಖಾನೆಗಳು ಮತ್ತು ತರಬೇತಿ ಕೇಂದ್ರದೊಂದಿಗೆ ಈಗಾಗಲೇ 400ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸಿದೆ ಮತ್ತು ಶೀಘ್ರದಲ್ಲೇ 1000ಕ್ಕೂ ಹೆಚ್ಚು ಜನರಿಗೆ ನೇರವಾಗಿ, ಅನೇಕರಿಗೆ ಪರೋಕ್ಷವಾಗಿ ಜೀವನೋಪಾಯ ಕಲ್ಪಿಸಲಿದೆ. ನಿಡೇಕ್ನಂತಹ ಜಾಗತಿಕ ನಾಯಕತ್ವದ ಕಂಪನಿ ಪ್ರಮುಖ ಉತ್ಪಾದನಾ ಕೇಂದ್ರಕ್ಕಾಗಿ ಹುಬ್ಬಳ್ಳಿಯನ್ನು ಆಯ್ಕೆ ಮಾಡಿದ್ದು, ಹುಬ್ಬಳ್ಳಿ, ಧಾರವಾಡ, ಗದಗ ಮತ್ತು ನೆರೆಯ ಜಿಲ್ಲೆಗಳ ಯುವಕರು ಉದ್ಯೋಗಾವಕಾಶಕ್ಕೆ ಬೆಂಗಳೂರು, ಪುಣೆಯನ್ನೇ ಅವಲಂಬಿಸುವುದು ತಪ್ಪುತ್ತಿದೆ ಎಂದು ಹೇಳಿದರು.
ಸೂರ್ಯಘರ್ ಅಳವಡಿಕೆಯಲ್ಲಿ ರಾಜ್ಯ ಹಿಂದೆ:
ಸೂರ್ಯಘರ್ ಯೋಜನೆಯ ಶೇ. 85ರಷ್ಟು ಸ್ಥಾಪನೆಗಳು ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿವೆ. ಆದರೆ, ಇಲ್ಲಿ 21 ಜಿಲ್ಲೆಗಳು ತೀರಾ ಹಿಂದುಳಿದಿವೆ. ರಾಜ್ಯದಲ್ಲಿ ಸೂರ್ಯಘರ್ ಅಳವಡಿಕೆ ಮತ್ತು ಸ್ಥಾಪನಾ ಪರಿವರ್ತನೆ ಅನುಪಾತ ಕಡಿಮೆಯಿದೆ. ರಾಷ್ಟ್ರೀಯ ಸರಾಸರಿ ಶೇ. 20ಕ್ಕೆ ಹೋಲಿಸಿದರೆ ಸರಿಸುಮಾರು ಶೇ. 4ರಷ್ಟಿದೆ. ಚೆಸ್ಕಾಂ, ಹೆಸ್ಕಾಂನಂತಹ ಪ್ರಮುಖ ಏಸ್ಕಾಂಗಳು ಶೇ. 3ಕ್ಕಿಂತ ಕಡಿಮೆ ದಕ್ಷತೆ ಹೊಂದಿವೆ. ರಾಜ್ಯ ಮತ್ತು ರಾಷ್ಟ್ರೀಯ ಸರಾಸರಿಗಳಿಗಿಂತ ಬಹಳ ಕಡಿಮೆ ಅನುಪಾತದಲ್ಲಿದೆ. ಇನ್ನು ಸರ್ಕಾರಿ ಕಟ್ಟಡಗಳ ಮೇಲಿನ ಸೌರಶಕ್ತಿಯಲ್ಲಿ 435 MWನಲ್ಲಿ ಕೇವಲ 15 MW ಮಾತ್ರ ಸಾಧಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.