ಕನ್ನಡಪ್ರಭ ವಾರ್ತೆ ಕೊರಟಗೆರೆ
ಕೊರಟಗೆರೆ ಪಟ್ಟಣದ ಶ್ರೀರಾಘವೇಂದ್ರ ಇಂಟರ್ ನ್ಯಾಷನಲ್ ಶಾಲೆಯ ಆವರಣದಲ್ಲಿ ಕೆಎಸ್ಆರ್ಪಿ ಘಟಕ, ಸಾರಂಗ ಅಕಾಡೆಮಿ, ಪ್ರಿಯದರ್ಶಿನಿ ಕಾಲೇಜು ಮತ್ತು ರಾಘವೇಂದ್ರ ಶಾಲೆಯ ಸಹಯೋಗದೊಂದಿಗೆ ಶುಕ್ರವಾರ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆರ್ಯುವೇದ ಮತ್ತು ಯೋಗದಲ್ಲಿ ೩ ಡಾಕ್ಟರೇಟ್ ಪದವಿ ಪಡೆದಿದ್ದೇನೆ. ೪ ಅಂತಾರಾಷ್ಟ್ರೀಯ ಡಾಕ್ಟರೇಟ್ ಪದವಿ ಬಂದಿವೆ. ಜಮ್ಮು ಕಾಶ್ಮೀರದಲ್ಲಿ ಸೈನಿಕರು ಮತ್ತು ಉನ್ನಟಮಟ್ಟದ ಪೊಲೀಸ್ ಅಧಿಕಾರಿಗಳಿಗೆ ಯೋಗದ ತರಬೇತಿ ನೀಡಿದ್ದೇನೆ. ಯೋಗವು ಮನುಷ್ಯನ ದೈಹಿಕ ಮತ್ತು ಮಾನಸಿಕ ಶಕ್ತಿ ವೃದ್ಧಿಸಲಿದೆ ಎಂದು ತಿಳಿಸಿದರು.ಸಾರಂಗ ಅಕಾಡೆಮಿಯ ಕಾರ್ಯದರ್ಶಿ ಅಜಯ್ಕುಮಾರ್ ಮಾತನಾಡಿ, ಯೋಗವು ಮನಸ್ಸು ಮತ್ತು ದೇಹವನ್ನು ಮಾತ್ರವಲ್ಲದೇ ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸಲಿದೆ. ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಸಹಕಾರಿ ಆಗಲಿದೆ. ನಮ್ಮ ಶಾಲೆಗೆ ಅಂತಾರಾಷ್ಟ್ರೀಯ ಯೋಗಪಟು ಬಾಗೀರಥಿ ಕನ್ನಡತಿ ಬಂದಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯೋಗ ಉಪನ್ಯಾಸಕಿ ಜಮೀಲಾ ಬೇಗಂ, ರಾಘವೇಂದ್ರ, ಪ್ರಾಂಶುಪಾಲರಾದ ಬೆನ್ನಿ, ಉಪನ್ಯಾಸಕರಾದ ಅಂಜುವನ, ಸಿಂಧುಶ್ರೀ, ನೂರ್ ಆಸಿಯಾ, ಮೇಘಶ್ರೀ, ನೂರ್ ಸಾಧೀಯಾ, ವೆಂಕಟೇಶ್, ಜಯಂತ್, ರೇಣುಕೇಶ್, ಮಲ್ಲಿ, ಕಾಂತರಾಜು ಸೇರಿ ಇತರರು ಇದ್ದರು.
ಪ್ರಿಯದರ್ಶಿನಿ ಕಾಲೇಜು ಮತ್ತು ರಾಘವೇಂದ್ರ ಶಾಲೆಯ ೨೦೦ಕ್ಕೂ ಅಧಿಕ ಮಕ್ಕಳಿಗೆ ಅಂತಾರಾಷ್ಟ್ರೀಯ ಯೋಗಪಟು ಭಾಗೀರಥಿ ಕನ್ನಡತಿ ೧೫ಕ್ಕೂ ಅಧಿಕ ಯೋಗಾಸನಗಳನ್ನು ತರಬೇತಿಯ ಮೂಲಕ ತಿಳಿಸಿಕೊಟ್ಟರು. ಪ್ರತಿನಿತ್ಯದ ಯೋಗ ಆರೋಗ್ಯದ ಜೊತೆ ಶೈಕ್ಷಣಿಕ ಶಕ್ತಿಯನ್ನು ನೀಡಲಿದೆ ಎಂದು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಹಮ್ಜಾ ಹುಸೇನ್, ೧೨ನೇ ಕೆಎಸ್ಆರ್ಪಿ ಕಮಾಡೆಂಟ್ ಎಸ್ಪಿ. ತುಂಬುಗಾನಹಳ್ಳಿ