ಭಾರತ ಹಿಂದೂ ರಾಷ್ಟ್ರ ಎಂದು ಘೋಷಿಸಬೇಕಾಗಿದೆ: ವಿಜಯ ರೇವಣಕರ್‌

KannadaprabhaNewsNetwork |  
Published : Mar 06, 2026, 02:15 AM IST
ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕ ವಿಜಯ ರೇವಣಕರ್ ಉದ್ಘಾಟಿಸಿದರು | Kannada Prabha

ಸಾರಾಂಶ

ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂವಿಧಾನ ತಿದ್ದುಪಡಿಪಡಿಗೊಳಿಸಿ ಜಾತ್ಯತೀತ ರಾಷ್ಟ್ರ ಎಂದು ಸೇರ್ಪಡೆಗೊಳಿಸಿದ ಪರಿಣಾಮ ಇದೀಗ ಬಹುಸಂಖ್ಯಾತ ಹಿಂದೂ ಸಮುದಾಯ ಹಲವು ಸಂಕಟಗಳನ್ನು ಎದುರಿಸಬೇಕಾಗಿದ್ದು, ಸಮಸ್ಯೆ ಪರಿಹಾರಕ್ಕೆ ಭಾರತ ಹಿಂದೂ ರಾಷ್ಟ್ರ ಎಂದು ಘೋಷಿಸಬೇಕಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾ ಸಮನ್ವಯಕ ವಿಜಯ ರೇವಣಕರ್ ಆಗ್ರಹಿಸಿದರು

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂವಿಧಾನ ತಿದ್ದುಪಡಿಪಡಿಗೊಳಿಸಿ ಜಾತ್ಯತೀತ ರಾಷ್ಟ್ರ ಎಂದು ಸೇರ್ಪಡೆಗೊಳಿಸಿದ ಪರಿಣಾಮ ಇದೀಗ ಬಹುಸಂಖ್ಯಾತ ಹಿಂದೂ ಸಮುದಾಯ ಹಲವು ಸಂಕಟಗಳನ್ನು ಎದುರಿಸಬೇಕಾಗಿದ್ದು, ಸಮಸ್ಯೆ ಪರಿಹಾರಕ್ಕೆ ಭಾರತ ಹಿಂದೂ ರಾಷ್ಟ್ರ ಎಂದು ಘೋಷಿಸಬೇಕಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಜಿಲ್ಲಾ ಸಮನ್ವಯಕ ವಿಜಯ ರೇವಣಕರ್ ಆಗ್ರಹಿಸಿದರು.

ತಾಲೂಕಿನ ಹಿರೇಕಲವತ್ತಿಯ ಶ್ರೀ ಮಣ್ಣು ಬಸವೇಶ್ವರ ಸಮುದಾಯ ಭವನದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ವತಿಯಿಂದ ನಡೆದ ಹಿಂದೂ ರಾಷ್ಟ್ರ ಜಾಗೃತಿ ಸಭೆ ಉದ್ಘಾಟಿಸಿ ಮಾತನಾಡಿದರು.

ಜಗತ್ತಿನಲ್ಲಿ ಕ್ರೈಸ್ತರಿಗೆ 150 ದೇಶಗಳು, ಮುಸಲ್ಮಾನರಿಗೆ 50ಕ್ಕೂ ಹೆಚ್ಚು ದೇಶಗಳಿದ್ದು, 100 ಕೋಟಿ ಅಧಿಕ ಹಿಂದೂಗಳಿಗೆ ಸ್ವತಂತ್ರ ಹಿಂದೂ ರಾಷ್ಟ್ರವಿಲ್ಲ ಎಂಬುದು ಅತ್ಯಂತ ದುರದೃಷ್ಟಕರ ಸಂಗತಿ ಎಂದ ಅವರು, ಪುಣ್ಯ ಭೂಮಿ ಭಾರತದಲ್ಲಿ ರಾಮರಾಜ್ಯ, ಪಾಂಡವರ ಧರ್ಮರಾಜ್ಯ, ಛತ್ರಪತಿ ಶಿವಾಜಿ ಮಹಾರಾಜರ ಹಿಂದವಿ ಸ್ವರಾಜ್ಯ, ವಿಜಯನಗರ ಅರಸರ ಆಡಳಿತ ಇತಿಹಾಸದಲ್ಲಿ ದಾಖಲಾಗಿದ್ದು, ಇಂತಹ ಶ್ರೇಷ್ಟ ಭೂಮಿಯಲ್ಲಿನ ಹಿಂದೂ ದೇವಸ್ಥಾನಗಳನ್ನು ಸರ್ಕಾರೀಕರಣ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ಪಾಕಿಸ್ತಾನ ಜೈ ಘೋಷಣೆ ನಡೆಯುತ್ತದೆ, ಇದಕ್ಕೆ ಇದುವರೆಗೂ ಕಡಿವಾಣ ಇಲ್ಲದಂತಾಗಿದೆ, ಲವ್ ಜಿಹಾದ್‌ಗೆ ಯುವತಿಯರು ಬಲಿಯಾಗುತ್ತಿದ್ದು, ಇದರ ವಿರುದ್ಧ ಹಿಂದುಗಳೆಲ್ಲ ಒಂದಾಗಿ ಹೋರಾಡಬೇಕಾಗಿದೆ. ಕಳೆದ ಮೂರು ವರ್ಷಗಳಿಂದ 10ಲಕ್ಷಕ್ಕೂ ಹೆಚ್ಚು ಯುವತಿಯರು ಮತಾಂತರವಾಗಿದ್ದಾರೆ. ಇದಕ್ಕೆಲ್ಲ ಧರ್ಮ ಶಿಕ್ಷಣ ಪಡೆಯುವುದರ ಜತೆಗೆ ಧರ್ಮಾಚರಣೆಯಿಂದ ಪರಿಹಾರ ದೊರೆಯಲಿದೆ ಎಂದರು.

ಸನಾತನ ಸಂಸ್ಥೆಯ ಸೌ.ಕಾವೇರಿ ರಾಯ್ಕರ್ ಮಾತನಾಡಿ, ಧರ್ಮರಕ್ಷಣೆಗಾಗಿ ಧರ್ಮಾಚರಣೆ ಮಾತ್ರ ಹಿಂದುಗಳ ಎಲ್ಲ ಸಮಸ್ಯೆಗೆ ಏಕೈಕ ಪರಿಹಾರವಾಗಿದೆ. ಇಂದು ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದ ನಾನು ಹಿಂದೂ ಎಂದು ಹೇಳಿಕೊಳ್ಳಲು ಸಂಕೋಚ ಪಡುತ್ತಿದ್ದು, ಸನಾತನ ಧರ್ಮ ನಿತ್ಯ ನೂತನವಾಗಿದೆ, ಈ ಹಿಂದೆ ಪ್ರಪಂಚದ ಮೂಲೆ ಮೂಲೆಯಿಂದ ವಿದ್ಯೆ ಕಲಿಯಲು ಭಾರತದ ಗುರುಕುಲಗಳಿಗೆ ಬರುತ್ತಿದ್ದರು, ಇಂತಹ ಶ್ರೇಷ್ಠ ಪರಂಪರೆಯನ್ನು, ಸನಾತನ ಸಂಸೃತಿಯನ್ನು ಕೆಲವರು ಡೆಂಗ್ಯೂ ಮಲೇರಿಯಾಕ್ಕೆ ಹೋಲಿಸಿ ಅವಮಾನಿಸುವ ಪ್ರಸಂಗಗಳು ನಡೆಯುತ್ತಿವೆ ಎಂದು ವಿಷಾದಿಸಿದರು.

ಎಡಪಂಥೀಯ ವಿಚಾರವಾದಿಗಳು ದೇಶದಲ್ಲಿ ಕೇಸರಿ ಭಯೋತ್ಪಾದನೆ ಎಂಬ ಸುಳ್ಳು ವಿಷಯವನ್ನು ಸೃಷ್ಟಿಸಿ ಮಾಲೆಗಾಂವ್ ಸ್ಪೋಟ, ದಾಬೋಲ್ಕರ್, ಪನ್ಸಾರೆ, ಗೌರಿಲಂಕೇಶ್ ಹತ್ಯೆ ಪ್ರಕರಣಗಳಲ್ಲಿ ಅಮಾಯಕ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಲಾಯಿತು, ಹಳ್ಳಿ ಹಳ್ಳಿಗಳಲ್ಲಿ ಸಹ ಹಿಂದೂ ಯುವತಿಯರು ಲವ್ ಜಿಹಾದ್ ಗೆ ಬಲಿಯಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದೆ, ಹೀಗಾಗಿ ಜಾಗೃತರಾಗಬೇಕಾಗಿದೆ ಎಂದರು.

ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಶಿವಮೊಗ್ಗ ನಗರ ಸಂಯೋಜಕ ನ್ಯಾಯವಾದಿ ರೇಖೇಶ್ ಮಾನೆ ಮಾತನಾಡಿ, ಜೀಜಾಬಾಯಿ ಪುತ್ರ ಶಿವಾಜಿ ಮಹಾರಾಜರಿಗೆ ಧರ್ಮರಕ್ಷಣೆಯ ಬೀಜವನ್ನು ಬಾಲ್ಯದಲ್ಲಿಯೇ ಬಿತ್ತಿದ್ದರು, ಇಂದು ಇಂತಹ ಶಿಕ್ಷಣದ ಅಗತ್ಯತೆ ಹೆಚ್ಚಾಗಿದ್ದು, ಮಕ್ಕಳಿಗೆ ಧರ್ಮರಕ್ಷಣೆಯ ಸಂಸ್ಕಾರದ ಮಾರ್ಗದರ್ಶನ ನೀಡಬೇಕಾಗಿದೆ, ಪಠ್ಯಪುಸ್ತಕಗಳಲ್ಲಿ ಮೆಕಾಲೆ ಶಿಕ್ಷಣ ಪದ್ಧತಿಯಿಂದ ರಾಷ್ಟ್ರ ಪುರುಷರ ಇತಿಹಾಸವನ್ನು ಮರೆಮಾಚುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಮಣ್ಣು ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಸುದರ್ಶನ್ ನಾಯ್ಡು, ನಾಗರಾಜ್, ಉಪಾಧ್ಯಕ್ಷ ಪರಶುರಾಮ್, ಭಾಸ್ಕರ್ ನಾಯ್ಡು, ಕೃಷ್ಣಮೂರ್ತಿ, ಕಪ್ಪನಹಳ್ಳಿ ಗ್ರಾ.ಪಂ ಮಾಜಿ ಅಧ್ಯಕ್ಷ ಪ್ರಕಾಶ್ ನಾಯ್ಡು ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಗೀತ ಜೀವನದ ಅವಿಭಾಜ್ಯ ಅಂಗ : ರಂಭಾಪುರಿ ಶ್ರೀ
ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಿ: ಡಾ.ನಾಗಲಕ್ಷ್ಮಿ ಚೌಧರಿ