ಶೀಘ್ರದಲ್ಲಿ ಇಂದಿರಾ ಕ್ಯಾಂಟೀನ್ ಆರಂಭ

KannadaprabhaNewsNetwork |  
Published : Jul 16, 2024, 12:35 AM IST
ಗುರುಮಠಕಲ್ ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಹಳೆ ನಾಡಕಚೇರಿ ಆವರಣದಲ್ಲಿ ಗುರುಮಠಕಲ್ ಶಾಸಕ ಶಾರಣಗೌಡ ಕಂದಕೂರು ಅವರು ಇಂದಿರಾ ಕ್ಯಾಂಟೀನ್ ಸ್ಥಳ ಪರಿಶೀಲನೆ ಮಾಡಿದರು.  | Kannada Prabha

ಸಾರಾಂಶ

ಕೈಗೆಟುಕುವ ದರದಲ್ಲಿ ಹಸಿವು ನೀಗಿಸಿ ಸಂತೈಸುವ ರಾಜ್ಯ ಸರಕಾರದ ಯೋಜನೆಯಾದ ಇಂದಿರಾ ಕ್ಯಾಂಟೀನ್ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದರು. ಪಟ್ಟಣದ ಬಸವೇಶ್ವರ ವೃತ್ತದ ಹಳೆಯ ನಾಡ ಕಚೇರಿ ಆವರಣದಲ್ಲಿ ಇಂದಿರಾ ಕ್ಯಾಂಟಿನ್ ಗೆ ಸ್ಥಳ ಪರಿಶೀಲನೆ ಮಾಡಿ ಒಪ್ಪಿಗೆ ಸೂಚಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುರುಮಠಕಲ್

ಕೈಗೆಟುಕುವ ದರದಲ್ಲಿ ಹಸಿವು ನೀಗಿಸಿ ಸಂತೈಸುವ ರಾಜ್ಯ ಸರಕಾರದ ಯೋಜನೆಯಾದ ಇಂದಿರಾ ಕ್ಯಾಂಟೀನ್ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಶಾಸಕ ಶರಣಗೌಡ ಕಂದಕೂರು ಹೇಳಿದರು. ಪಟ್ಟಣದ ಬಸವೇಶ್ವರ ವೃತ್ತದ ಹಳೆಯ ನಾಡ ಕಚೇರಿ ಆವರಣದಲ್ಲಿ ಇಂದಿರಾ ಕ್ಯಾಂಟಿನ್ ಗೆ ಸ್ಥಳ ಪರಿಶೀಲನೆ ಮಾಡಿ ಒಪ್ಪಿಗೆ ಸೂಚಿಸಿ ಮಾತನಾಡಿದರು.ರಾಜ್ಯ ಹೆದ್ದಾರಿ ಸೇರಿದಂತೆ ಪಟ್ಟಣಕ್ಕೆ ಹಾದುಹೋಗುವ ಬಸವೇಶ್ವರ ವೃತ್ತವು ಇಂದಿರಾ ಕ್ಯಾಂಟಿನ್ ಆರಂಭಕ್ಕೆ ಸೂಕ್ತ ಸ್ಥಳವಾಗಿದೆ. ಅಲ್ಲದೇ ನಾಡ ಕಚೇರಿ ಮತ್ತು ಸರಕಾರಿ ಆಸ್ಪತ್ರೆ ರಸ್ತೆಗೆ ಹೊಂದಿಕೊಂಡಿದೆ. ಸಮೀಪದಲ್ಲಿಯೇ ಕೃಷಿ ಉತ್ಪನ್ನ ಮಾರುಕಟ್ಟೆಯಿದ್ದು, ರೈತರಿಗೆ ಮತ್ತು ಎಲ್ಲಾ ವರ್ಗದ ಜನರಿಗೆ ಕಡಿಮೆ ದರದಲ್ಲಿ ಉತ್ತಮ ಊಟ ಸಿಗಲಿದೆ ಎಂದರು.ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಸ್ಥಳದ ಬಗ್ಗೆ ಮಾಹಿತಿ ನೀಡಿದರು. ಜೆಡಿಎಸ್ ಮುಖಂಡರಾದ ಪ್ರಕಾಶ ನೀರಟ್ಟಿ, ಶರಣು ಅವಂಟಿ, ಮಾಜಿ ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಅನಂತಪ್ಪ ಯದ್ಲಾಪೂರ, ರಘುನಾಥರೆಡ್ಡಿ ಗವಿನೋಳ, ಬಾಲಪ್ಪ ದಾಸರಿ, ನರಸಪ್ಪ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬೇಕಿದ್ರೆ ಎಫ್‌ಐಡಿ ತೋರಿಸೋದು ಕಡ್ಡಾಯ ! ನಿಯಮ
ಇಂದು ಎಸ್‌ಎಸ್‌ಎಲ್ಸಿ ರಿಸಲ್ಟ್‌: 3ನೇ ಭಾಷೆಗೆ ಗ್ರೇಡ್‌ ಬದಲು, ಅಂಕ