ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಇಂದಿರಾಗಾಂಧಿ ಯವರ 107ನೇ ಜನ್ಮ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇಂದಿರಾಗಾಂಧಿ ಈ ದೇಶದ ಹೆಮ್ಮೆಯ ಉಕ್ಕಿನ ಮಹಿಳೆ ಎಂದರು.
ತಮ್ಮ 13ನೇ ವಯಸ್ಸಿನಲ್ಲಿಯೇ ಮಹಾತ್ಮ ಗಾಂಧಿಜಿಯವರ ಜೊತೆ ಸೇರಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು. ನೆಹರೂ ಕುಟುಂಬ ಈ ದೇಶದ ಸಂಪತ್ತಾಗಿತ್ತು. ಎಲ್ಲರೂ ಕೂಡ ದೇಶದ ಅಭಿವೃದ್ಧಿಗಾಗಿಯೇ ಶ್ರಮಿಸಿ ದೇಶದಕ್ಕಾಗಿ ಪ್ರಾಣಕೊಟ್ಟರು ಎಂದು ಹೇಳಿದರು.ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಅವರು ತಮ್ಮ ಜೀವನ ಮುಡಿಪಾಗಿಟ್ಟಿದ್ದರು. ಇಂದಿರಾಗಾಂಧಿಯವರು ಸೋತಾಗ ಅವರಿಗೆ ಮರು ಜೀವ ಕೊಟ್ಟಿದ್ದು ಕರ್ನಾಟಕ. ಚಿಕ್ಕಮಗಳೂರಿನಿಂದ ಸ್ಪರ್ಧೆ ಮಾಡಿದಾಗ ಶಿವಮೊಗ್ಗದ ಅಂದಿನ ಎಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರಚಾರ ಮಾಡಲು ಹೋಗಿದ್ದು ನಮಗೆ ನೆನಪಿದೆ. ಇವತ್ತು ಕಾಂಗ್ರೆಸ್ ಕರ್ನಾಟಕದಲ್ಲಿ ಜೀವಂತವಾಗಿದೆ ಎಂದರೆ ಅದಕ್ಕೆ ಇಂದಿರಾಗಾಂಧಿಯವರು ಬಹುಮುಖ್ಯ ಕಾರಣ ಎಂದು ಹೇಳಿದರು.
ವಿರೋಧ ಪಕ್ಷದ ನಾಯಕರನ್ನು ಅತ್ಯಂತ ಪ್ರೀತಿಯಿಂದ ನೋಡುತ್ತಿದ್ದವರು ಇಂದಿರಾಗಾಂಧಿಯವರು. ಇದನ್ನೇ ರಾಜೀವ್ ಗಾಂಧಿಯವರು ಕೂಡ ಮುಂದುವರೆಸಿದರು. ಬಿಜೆಪಿ ನಾಯಕ ವಾಜಪೇಯಿಯವರ ಆರೋಗ್ಯದ ವಿಚಾರಕ್ಕೆ ಬಂದಾಗ ಹೊರದೇಶದಲ್ಲಿ ಚಿಕಿತ್ಸೆ ಕೊಡಿಸಿದರು. ಹಾಗಾಗಿ ನೆಹರೂ ಕುಟುಂಬ ಈ ದೇಶದ ಪ್ರಗತಿಗಾಗಿಯೇ ಶ್ರಮಿಸಿದವರು ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್ ಮಾತನಾಡಿ, ಇಂದಿರಾಗಾಂಧಿಯವರು ತಮ್ಮ 20 ಅಂಶದ ಕಾರ್ಯಕ್ರಮಗಳ ಮೂಲಕ ದೇಶದ ಗಮನ ಸೆಳೆದವರು. ಇಂದು ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದು ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದರೆ ಅವು ಇಂದಿರಾಗಾಂಧಿಯವರು ಕೊಟ್ಟ ಕೊಡುಗೆಗಳೇ ಆಗಿವೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ರವಿಕುಮಾರ್, ಎಸ್.ಟಿ. ಹಾಲಪ್ಪ, ಎಚ್.ಎಂ.ಚಂದ್ರಶೇಖರಪ್ಪ, ಇಸ್ಮಾಯಿಲ್ ಖಾನ್, ವೈ.ಎಚ್.ನಾಗರಾಜ್, ಕಲೀಂ ಪಾಶ, ಚಂದ್ರಭೂಪಾಲ್, ಜಿ.ಡಿ. ಮಂಜುನಾಥ್, ಇಕ್ಕೇರಿ ರಮೇಶ್, ಎಸ್.ಪಿ. ಶೇಷಾದ್ರಿ, ಮಂಜುನಾಥ್ ಬಾಬು, ವಿಜಯಲಕ್ಷ್ಮಿ ಪಾಟೀಲ್, ಭಾರತಿ ರಾಮಕೃಷ್ಣ, ಸ್ಟೆಲಾ ಮಾರ್ಟಿನ್, ನಾಜೀಮಾ, ಕವಿತಾ, ಅರ್ಚನಾ, ಶಿವಣ್ಣ, ಶಿವಾನಂದ್ ಮತ್ತಿತರರು ಇದ್ದರು.