ಹುಬ್ಬಳ್ಳಿ: ನಗರದಲ್ಲಿ ಧಾರವಾಡ ಸಂಸದ ಸಾಂಸ್ಕೃತಿಕ ಮತ್ತು ಕ್ರೀಡಾ ಮಹೋತ್ಸವ ಅಂಗವಾಗಿ ಎರಡು ದಿನಗಳ ಕಾಲ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹುಬ್ಬಳ್ಳಿಗರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಯಿತು. ಶುಕ್ರವಾರ ರಾತ್ರಿ ಸಂಪನ್ನಗೊಂಡಿತು.
ಅದರಲ್ಲೂ ಶುಕ್ರವಾರ ಬೆಳಗ್ಗೆ ನಡೆದ ದೇಸಿ ಕ್ರೀಡೆ ಮಲ್ಲಗಂಬದಲ್ಲಿ ಮಕ್ಕಳು ಅದ್ಭುತ ಪ್ರದರ್ಶನ ನೀಡಿದರು. ಕುಸ್ತಿಯಲ್ಲಿ ಚಿಕ್ಕಮಕ್ಕಳಿಂದ ಹಿಡಿದು ವಿಶ್ವ ವಿದ್ಯಾಲಯದ ಹಂತದ ಪ್ರಶಸ್ತಿ ಪುರಸ್ಕೃತ ಕುಸ್ತಿಪಟುಗಳು ಮತ್ತು ರಾಜ್ಯ, ಅಂತಾರಾಜ್ಯ ಮಟ್ಟದ ಪ್ರಸಿದ್ಧ ಕುಸ್ತಿಪಟುಗಳ ಕಾದಾಟ ಕ್ರೀಡಾ ಪ್ರೇಕ್ಷಕರ ಮೈನವಿರೇಳಿಸುವಂತಿತ್ತು.
ರಂಜಿಸಿದ ಸಂಗೀತಧಾರವಾಡ ಸಂಸದ ಸಾಂಸ್ಕೃತಿಕ ಮತ್ತು ಕ್ರೀಡಾ ಮಹೋತ್ಸವದಲ್ಲಿ ಶುಕ್ರವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ರಘು ದೀಕ್ಷಿತ್, ಬಿಗ್ಬಾಸ್ 11ರ ವಿನ್ನರ್ ಹನುಮಂತ ಲಮಾಣಿ ಆಕರ್ಷಣಿಯ ಕೇಂದ್ರಬಿಂದು ಆಗಿದ್ದರು. ಹನುಮಂತ ಲಮಾಣಿ ಜಾನಪದ ಸೊಡಗಿನ ಹಾಡು, ಹಾಸ್ಯಭರಿತ ಮಾತುಗಳಿಗೆ ಜನರು ಕೇಕೆ, ಶಿಳ್ಳೆ, ಚಪ್ಪಾಳೆ ತಟ್ಟಿ ಸಂಭ್ರಮಿಸಿದರೆ, ರಘು ದೀಕ್ಷಿತ್ ಅವರ ಹಾಡಿಗೆ ಜನರು ಕುಣಿದು ಕುಪ್ಪಳಿಸಿದರು. ನಂತರ ನಡೆದ ಸಮಾರೋಪ ಸಮಾರಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.