ಶಿಕ್ಷಕರ ತರಬೇತಿ ಸಂಸ್ಥೆ ಹಾಗೂ ವಿವಿಧ ಕಚೇರಿ ಇ-ತ್ಯಾಜ್ಯ ವಸ್ತುಗಳ ವಿಲೇವಾರಿಟೆಂಡರ್‌ನಲ್ಲಿ ಅಕ್ರಮ: ಸಸ್ಪೆಂಡ್‌

KannadaprabhaNewsNetwork |  
Published : Jul 26, 2024, 01:36 AM ISTUpdated : Jul 26, 2024, 08:48 AM IST
ಡಿಎಸ್‌ಇಆರ್ಟಿ | Kannada Prabha

ಸಾರಾಂಶ

 ಕರ್ನಾಟಕ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್‌ಇಆರ್‌ಟಿ) ನಿರ್ದೇಶಕಿ ವಿ.ಸುಮಂಗಲ ಅವರನ್ನು ಸರ್ಕಾರ ಸೇವೆಯಿಂದ ಅಮಾನತುಗೊಳಿಸಿದೆ.

 ಬೆಂಗಳೂರು : ಶಿಕ್ಷಕರ ತರಬೇತಿ ಸಂಸ್ಥೆಗಳು ಹಾಗೂ ವಿವಿಧ ಕಚೇರಿಗಳಲ್ಲಿನ ಅನುಪಯುಕ್ತ ಇ-ತ್ಯಾಜ್ಯ ವಸ್ತುಗಳ ಸಂಗ್ರಹ ಮತ್ತು ವಿಲೇಯಲ್ಲಿ ಟೆಂಟರ್‌ ನಿಯಮ ಉಲ್ಲಂಘಿಸಿ ಅರ್ಹವಲ್ಲದ ಸಂಸ್ಥೆಯೊಂದಕ್ಕೆ ಕಾರ್ಯಾದೇಶ ನೀಡಿರುವುದು ಸಾಬೀತಾಗಿರುವುದರಿಂದ ಕರ್ನಾಟಕ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್‌ಇಆರ್‌ಟಿ) ನಿರ್ದೇಶಕಿ ವಿ.ಸುಮಂಗಲ ಅವರನ್ನು ಸರ್ಕಾರ ಸೇವೆಯಿಂದ ಅಮಾನತುಗೊಳಿಸಿದೆ.

ಡಿಎಸ್‌ಇಆರ್‌ಟಿಯಿಂದ ಇ-ತ್ಯಾಜ್ಯ ವಸ್ತುಗಳ ಸಂಗ್ರಹಣೆ ಮತ್ತು ವಿಲೇ ಮಾಡುವ ಟೆಂಡರ್‌ನ ಕಾರ್ಯಾದೇಶ ನೀಡಿರುವ ಎಂ/ಎಸ್‌ ಇ-ಪ್ರಗತಿ ರೀಸೈಕಲ್‌ ಪ್ರೈ.ಲಿ. ಸಂಸ್ಥೆಗೆ ತಾಂತ್ರಿಕ ಬಿಡ್‌ನಲ್ಲಿ ಅರ್ಹತೆ ಇಲ್ಲದಿದ್ದರೂ ಎಲ್‌1 ಎಂದು ಪರಿಗಣಿಸಿ ಕಾರ್ಯಾದೇಶ ನೀಡಿರುವುದು. ಸಂಸ್ಥೆಯು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅಗತ್ಯ ಪ್ರಮಾಣ ಪತ್ರಗಳನ್ನು ಹೊಂದಿಲ್ಲದಿರುವುದು ತನಿಖೆಯಲ್ಲಿ ಕಂಡುಬಂದಿದೆ. 

ಜೊತೆತೆ ಆ ಸಂಸ್ಥೆಗೆ ಅನುಕೂಲ ಮಾಡಿಕೊಡಲು ಟೆಂಡರ್‌ನಲ್ಲಿ ರೀಸೈಕ್ಲಿಂಗ್‌ ಸಾಮರ್ಥ್ಯವನ್ನು 1400 ಎಂಟಿಎಸ್‌ನಿಂದ 1206 ಎಂಟಿಎಸ್‌ಗೆ ತಿದ್ದುಪಡಿ ಮಾಡಿರುವುದು. ಇದರಿಂದ ಕಳೆದ ಬಾರಿಗಿಂತ ಸರ್ಕಾರದ ಬೊಕ್ಕಸಕ್ಕೆ ಈ ಬಾರಿ 1.62 ಕೋಟಿ ರು. ನಷ್ಟವುಂಟು ಮಾಡಿರುವುದು ಮೇಲ್ನೋಟಕ್ಕೆ ಸಾಭೀತಾಗಿತ್ತು. ಇದರಿಂದ ಇಲಾಖಾ ಆಯುಕ್ತರು ಪ್ರಕರಣದ ಸಮಗ್ರ ತನಿಖೆಯನ್ನು ಮುಖ್ಯಲೆಕ್ಕಾಧಿಕಾರಿಗೆ ವಹಿಸಿದ್ದರು.

ಈ ತನಿಖೆಯಲ್ಲೂ ಟೆಂಟರ್‌ ನಿಯಮ ಉಲ್ಲಂಘನೆ, ಅರ್ಹವಲ್ಲದ ಸಂಸ್ಥೆಗೆ ಅನುಕೂಲ ಮಾಡಿಕೊಡಲು ನಿಯಮಗಳನ್ನು ತಿದ್ದುಪಡಿ ಮಾಡಿರುವುದು, ಬೊಕ್ಕಸಕ್ಕೆ ಕೋಟ್ಯಂತರ ರು. ನಷ್ಟವುಂಟು ಮಾಡಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಡಿಎಸ್‌ಇಆರ್‌ಟಿ ನಿರ್ದೇಶಕರಾದ ವಿ.ಸುಮಂಗಲ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಮಾಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ