
ವೈʼ ಜಂಕ್ಷನ್ನಲ್ಲಿ ಗೇಟ್ ವಾಲ್ವ್ ತೆರೆಯುವ ಮೂಲಕ ತಾಲೂಕಿನ ಕುಕ್ಕಸಮುದ್ರ ಕೆರೆಗೆ ನೀರು ಬಿಡುಗಡೆ
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಭದ್ರಾ ಮೇಲ್ದಂಡೆ ಯೋಜನೆ ಮತ್ತು ಕೆರೆ ತುಂಬುವ ಯೋಜನೆಗಳ ಮುಖಾಂತರ ಕಡೂರು ತಾಲೂಕಿನಾದ್ಯಂತ ನೀರಾವರಿ ಕಾಮಗಾರಿ ಅತ್ಯಂತ ಯಶಸ್ವಿ ಹಾಗೂ ಚುರುಕಾಗಿ ನಡೆಯುತ್ತಿವೆ ಎಂದು ಶಾಸಕ ಕೆ.ಎಸ್. ಆನಂದ್ ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆ ಮುಖಾಂತರ ಚಿತ್ರದುರ್ಗಕ್ಕೆ ನೀರು ಕೊಂಡೊಯ್ಯುವ ಹೆಬ್ಬೂರು ಸಮೀಪದ ʼವೈʼ ಜಂಕ್ಷನ್ನಲ್ಲಿ ಗುರುವಾರ ಗೇಟ್ ನಲ್ಲೆ ಪೂಜೆ ಸಲ್ಲಿಸಿ ವಾಲ್ವ್ ತೆರೆಯುವ ಮೂಲಕ ತಾಲೂಕಿನ ಕುಕ್ಕಸಮುದ್ರ ಕೆರೆಗೆ ನೀರು ಬಿಡುಗಡೆ ಮಾಡಿ ಮಾತನಾಡಿದರು.ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ಯಶಸ್ವಿಯಾಗಿ ನಡೆದಿದೆ. ಕ್ಯಾಬಿನೆಟ್ಟಲ್ಲಿ ಈ ಕಾಲುವೆಗೆ ಪ್ರಾಯೋಗಿಕವಾಗಿ 3 ಟಿಎಂಸಿ ನೀರು ಹರಿಸಲು ತೀರ್ಮಾನವಾದ ಹಿನ್ನೆಲೆಯಲ್ಲಿ ಕಳೆದ 11 ದಿನಗಳ ಹಿಂದೆ ಚಿತ್ರದುರ್ಗ ಕಾಲುವೆಗೆ ನೀರು ಹರಿಸಿದೆ. ನೀರು ಈಗಾಗಲೇ ದುರ್ಗಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ಕಡೂರು ತಾಲೂಕಿನ ನಾಲ್ಕು ಕೆರೆಗಳಿಗೆ ನೀರು ಹರಿಯುವ ʼವೈʼ ಜಂಕ್ಷನ್ ಮೂಲಕ ಕುಕ್ಕಸಮುದ್ರಕೆರೆ, ಚೌಳಹಿರಿಯೂರಿನ,ಅಂತರಗಟ್ಟೆ ಮತ್ತು ಹುಲಿಹಳ್ಳಿಕೆರೆಗಳಿಗೆ ನೀರು ಅಡೆತಡೆಗಳಿಲ್ಲದೆ ಹರಿಯುತ್ತಿದೆ.
ಸಣ್ಣಪುಟ್ಟ ಮಷಿನರಿ ವ್ಯತ್ಯಾಸಗಳು ಅಥವಾ ನೀರು ಶೇರಿಂಗ್ ಮಾಡುವಾಗ ತಾಂತ್ರಿಕ ಕಾರಣಗಳಿಂದ ಕೆಲವೊಮ್ಮೆ 4-5 ಗಂಟೆಗಳ ಕಾಲ ನೀರು ನಿಲ್ಲುವುದು ಸಹಜ. ಇದನ್ನು ರಾಜಕೀಯವಾಗಿ ಬಳಸಿ "ನೀರೆ ನಿಲ್ಲಿಸಿ ಬಿಟ್ಟಿದ್ದಾರೆ " ಎಂದು ಜನರನ್ನು, ರೈತರನ್ನು ಗೊಂದಲಕ್ಕೀಡು ಮಾಡುವ ಪ್ರಯತ್ನಗಳು ನಡೆಯುತ್ತಿವೆ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಬೇಕು ಎಂದರು.
ಸಿಬಿಸಿ ಮುಗಿದು ಈಗ ಮುಂದಿನ ಹೋರಾಟ ಟಿಬಿಸಿ (TBC) ಬಗ್ಗೆ ಯಾಗಿದೆ. ಲ್ಯಾಂಡ್ ಅಕ್ವಿಸಿಷನ್ ಸಮಸ್ಯೆ ಬಗೆಹರಿಸಿ, ಕುರುಬರಹಳ್ಳಿ, ವೈಮಲ್ಲಾಪುರ, ಅಣ್ಣಿಗೆರೆ ಸೇರಿದಂತೆ ಮೂರೂ ಗ್ರಾಮಗಳ ಭೂಸ್ವಾಧೀನ ಪ್ರಕ್ರಿಯೆಯನ್ನು ಕ್ಯಾಬಿನೆಟ್ಟಲ್ಲಿ ಬಗೆಹರಿಸಲಾಗಿದೆ. ಮುಂದಿನ ವರ್ಷದ ಜೂನ್ ವೇಳೆಗೆ ಒಟ್ಟು 72 ಕೆರೆಗಳಿಗೆ ನೀರು ತುಂಬಿಸುವ ಪೂರ್ವಸಿದ್ಧತೆ ಈಗಲೇ ಮಾಡಲಾಗುತ್ತಿದೆ.
ರಾಜಕೀಯ ಟೀಕೆಗಳಿಗೆ ತಿರುಗೇಟು
ಕಡೂರು ಕ್ಷೇತ್ರದ 80 ವರ್ಷಗಳ ಇತಿಹಾಸದಲ್ಲಿ ಬೇರೆ ಯಾವ ಹಂತದ ನೀರಾವರಿ ಯೋಜನೆಗಳೂ ತರ ದಷ್ಟು ಹಣ ಮತ್ತು ಕಾಮಗಾರಿಗಳನ್ನು ನಮ್ಮ ಅವಧಿಯಲ್ಲಿ ತರಲಾಗಿದೆ. ಕ್ಷೇತ್ರದ ರೈತರು ಆತಂಕ ಪಡಬೇಕಾಗಿಲ್ಲ, ಎಲ್ಲ ಕೆರೆಗಳಿಗೂ ನೀರು ತಲುಪಿಸುವ ನಮ್ಮ ಪ್ರಯತ್ನ ಮುಂದುವರಿಯುತ್ತದೆ ಎಂದು ಶಾಸಕರು ಅಭಯ ನೀಡಿದರು. ನೀರಾವರಿ ವಿಷಯದ ಬಗ್ಗೆ ವಿರೋಧಿಗಳು ಚರ್ಚೆಗೆ ಬಂದರೆ ತಾವು ಸಿದ್ಧ ಎಂದು ಸವಾಲು ಹಾಕಿದರು.
17ಕೆಡಿಆರ್1
17ಕೆಡಿಆರ್2
ಕಡೂರು ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ಮತ್ತು ಚೌಳಹಿರಿಯೂರು ಭಾಗದ ರೈತರೊಂದಿಗೆ ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆಗೆ ನೀರು ಹಿರಿದು ತಾಲೂಕಿನ ಕುಕ್ಕಸಮುದ್ರ ಕರೆಯತ್ತ ಕಾಲುವೆಯಲ್ಲಿ ನೀರು ಹರಿಯುವುದನ್ನು ನೋಡುತ್ತಿರುವ ಶಾಸಕರು ಮತ್ತು ರೈತರು.