ರಸ್ತೆ ಮೇಲೆ ನೀರಿದೆಯೋ? ನೀರಲ್ಲಿ ರಸ್ತೆ ಇದೆಯೋ?

KannadaprabhaNewsNetwork |  
Published : Aug 17, 2025, 01:42 AM IST
ಪೋಟೋ 7 : ದಾಬಸ್ ಪೇಟೆ ಪಟ್ಟಣದ  ಶಿವಗಂಗೆ ಸರ್ಕಲ್ ನ ವೀರಸಾಗರ ರಸ್ತೆಯಲ್ಲಿ ಮಳೆ ನೀರು ನಿಂತಿರುವುದು | Kannada Prabha

ಸಾರಾಂಶ

ದಾಬಸ್‍ಪೇಟೆ: ಕಳೆದ 15 ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಪಟ್ಟಣದ ಶಿವಗಂಗೆ ರಸ್ತೆಯ ರಾಜ್ಯ ಹೆದ್ದಾರಿಯ ಶಿವಗಂಗೆ ಸರ್ಕಲ್‌ನ ವೀರಸಾಗರ ರಸ್ತೆಯಲ್ಲಿ ಮಳೆ ನೀರು ನಿಂತು ಜನ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ದಾಬಸ್‍ಪೇಟೆ: ಕಳೆದ 15 ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಪಟ್ಟಣದ ಶಿವಗಂಗೆ ರಸ್ತೆಯ ರಾಜ್ಯ ಹೆದ್ದಾರಿಯ ಶಿವಗಂಗೆ ಸರ್ಕಲ್‌ನ ವೀರಸಾಗರ ರಸ್ತೆಯಲ್ಲಿ ಮಳೆ ನೀರು ನಿಂತು ಜನ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ರಸ್ತೆ ಮೇಲೆ ಒಂದೂವರೆ ಅಡಿ ನೀರು:

ವ್ಯಾಪಕ ಮಳೆ ಬಂದಾಗ ರಸ್ತೆಯ ಮೇಲೆ ಒಂದೂವರೆ ಅಡಿಯಷ್ಟು ನೀರು ನಿಲ್ಲುವುದರಿಂದ ರಸ್ತೆ ಯಾವುದು ಎನ್ನುವುದು ಕೂಡ ತಿಳಿಯುವುದಿಲ್ಲ. ಇಲ್ಲಿ ದೊಡ್ಡಮಳೆ ಬಂದರೆ ರಸ್ತೆಯಲ್ಲಿ ಸಂಚರಿಸಲು ಪರದಾಡಬೇಕಾಗುತ್ತದೆ.

ರಾಜಕಾಲುವೆಗಳು ಅತಿಕ್ರಮಣ:

ಪಟ್ಟಣದಲ್ಲಿ ಮನೆ ಕಟ್ಟಡಗಳ ಸಂಖ್ಯೆ ಹೆಚ್ಚಾಗಿತ್ತಿದ್ದು ಕೆಲವೆಡೆ ರಾಜಕಾಲುವೆಗಳು ಒತ್ತುವಾರಿ ಆಗಿರುವುದರಿಂದ ಅದಿಕವಾಗಿ ನೀರು ಹೋಗಲು ಸಾಧ್ಯವಾಗದೆ ಇರುವುದರಿಂದ ನೀರು ರಸ್ತೆಯಲ್ಲಿ ನಿಂತು ಕೆರೆಯಂತಾಗಿದೆ.

ಚರಂಡಿ ನಿರ್ಮಿಸಲು ಸಮಸ್ಯೆ:

ರಸ್ತೆ ಪಕ್ಕದಲ್ಲೇ ಕೆಇಬಿ ವಿದ್ಯುತ್ ಉಪಕೇಂದ್ರವಿದ್ದು, ರಸ್ತೆ ಪಕ್ಕಕ್ಕೆ ಚರಂಡಿ ನಿರ್ಮಾಣ ಮಾಡಲು ಹೋದರೆ ಭೂಮಿ ಕೆಳಗಡೆ ವಿದ್ಯುತ್ ತಂತಿಗಳಿದ್ದು ಕೆಇಬಿ ಇಲಾಖೆಯೂ ಅನುಮತಿ ನೀಡುತ್ತಿಲ್ಲವೆನ್ನಲಾಗಿದೆ.

ಎಂಜಿನಿಯರ್, ಗುತ್ತಿಗೆದಾರನ ಎಡವಟ್ಟು:

ಕಳೆದ ಒಂದೂವರೆ ವರ್ಷದ ಹಿಂದೆಯಷ್ಟೇ ಈ ರಸ್ತೆಯನ್ನು ನಿರ್ಮಿಸಿದ್ದು ಅಗಲೀಕರಣ ಮಾಡಲಾಗಿದೆ. ಕಾಮಗಾರಿ ಸಂದರ್ಭದಲ್ಲಿ ಎಂಜಿನಿಯರ್ ಹಾಗೂ ಗುತ್ತಿಗೆದಾರರು ರಸ್ತೆಯ ಒಂದು ಭಾಗಕ್ಕೆ ಚರಂಡಿ ಮಾಡಿದ್ದು ಆ ಚರಂಡಿಗೆ ಮಳೆ ನೀರು ಹೋಗುವಂತೆ ರಸ್ತೆ ನಿರ್ಮಿಸಿದ್ದರೆ ಮಳೆ ನೀರು ಚರಂಡಿ ಮುಖಾಂತರ ಹೊರ ಹೋಗುತ್ತಿತ್ತು. ಆ ಸಂದರ್ಭದಲ್ಲಿ ಸ್ಥಳೀಯರು ತಿಳಿಸಿದರೂ ಗಮನ ಕೊಡದೆ ರಸ್ತೆ ನಿರ್ಮಿಸಿದ್ದು ಮಳೆ ನೀರು ನಿಲ್ಲುವುದಕ್ಕೆ ಪ್ರಮುಖ ಕಾರಣವಾಗಿದೆ.

ಈಗಲಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಈ ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕೆಂಬುದು ಸ್ಥಳೀಯರು ಆಗ್ರಹಿಸಿದ್ದಾರೆ.

ಪೋಟೋ 7 :

ದಾಬಸ್‌ಪೇಟೆ ಪಟ್ಟಣದ ಶಿವಗಂಗೆ ಸರ್ಕಲ್ ವೀರಸಾಗರ ರಸ್ತೆಯಲ್ಲಿ ಮಳೆ ನೀರು ನಿಂತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಿಸರ ಪ್ರಜ್ಞೆ ಮೂಡಿಸುತ್ತಿರುವ ಕನ್ನಡಪ್ರಭ
ಆಸ್ಪತ್ರೆ ನಿರ್ಮಾಣಕ್ಕೆ ಜಾಗ ನೀಡಲು ಸಿದ್ಧ: ಶಾಸಕ ರವಿಕುಮಾರ್‌