ಭಕ್ತರ ಇಷ್ಟಾರ್ಥಗಳ ಪೂರೈಸುವುದೇ ಇಷ್ಟಲಿಂಗ ಪೂಜೆ
Ishtalinga Puja is the fulfillment of the wishes of the devoteesshirahatti, gadag, istalinga pooja, basavajaya mrutyunjaya swamiji, bellatti, ಶಿರಹಟ್ಟಿ, ಬೆಳ್ಳಟ್ಟಿ, ಇಷ್ಟಲಿಂಗ ಪೂಜೆ, ಬಸವಜಯ ಮೃತ್ಯುಂಜಯ ಸ್ವಾಮೀಜಿ
ಶಿರಹಟ್ಟಿ ತಾಲೂಕು ಬೆಳ್ಳಟ್ಟಿ ಗ್ರಾಮದಲ್ಲಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಶ್ರಾವಣ ಮಾಸ ಪ್ರಯುಕ್ತ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಿತು.ಶಿರಹಟ್ಟಿ: ಭಕ್ತರ ಇಷ್ಟಾರ್ಥಗಳನ್ನು ಪೂರೈಸುವುದೇ ಇಷ್ಟಲಿಂಗ ಪೂಜೆಯ ಮಹತ್ವವಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.ಅವರು ಬುಧವಾರ ಶಿರಹಟ್ಟಿ ತಾಲೂಕು ಬೆಳ್ಳಟ್ಟಿ ಗ್ರಾಮದಲ್ಲಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರಾವಣ ಮಾಸ ಪ್ರಯುಕ್ತ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಲಿಂಗಾಯತ ಸಮುದಾಯಕ್ಕೆ ಶ್ರಾವಣ ಮಾಸ ಅತ್ಯಂತ ಪವಿತ್ರವಾಗಿದ್ದು, ಮನುಷ್ಯನ ಮನಸ್ಸನ್ನು ಶುದ್ಧೀಕರಣಗೊಳಿಸುವುದಕ್ಕಾಗಿ ಈ ಮಾಸದಲ್ಲಿ ಪ್ರವಚನ ಆಲಿಸಬೇಕು, ದಾಸೋಹ ಮಾಡಬೇಕು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥ ಸೇವೆ ಮಾಡಬೇಕು. ಬಹುತೇಕ ವೀರಶೈವರು ಹೆಸರಿಗೆ ಮಾತ್ರ ವೀರಶೈವರಾಗಿ ಉಳಿದಿದ್ದು, ಅನೇಕರು ಇಷ್ಟಲಿಂಗ ಪೂಜೆ ಮಾಡುತ್ತಿಲ್ಲ. ಶಿವತತ್ವ, ಶಿವಚಿಂತನೆ ಮಾಡುವ ಮೂಲಕ ಶ್ರಾವಣ ಮಾಸ ಆಚರಣೆ ಮಾಡಿದಾಗ ಬದುಕು ಸುಧಾರಣೆಯಾಗಲಿದೆ ಎಂದರು.
ಲಿಂಗ ಜಾತಿ ಅಲ್ಲ, ಜ್ಯೋತಿ, ಗಂಡು-ಹೆಣ್ಣು ಭೇದವಿಲ್ಲ. ಹುಟ್ಟಿನಿಂದ ಸಾವಿನವರೆಗೂ ನಮ್ಮ ಜತೆ ಬರುವುದು ಲಿಂಗ ಮಾತ್ರ, ಇದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. ವಿದ್ಯಾರ್ಥಿಗಳು ಪ್ರತಿನಿತ್ಯ ಇಷ್ಟಲಿಂಗ ಪೂಜೆ ಮಾಡುವುದರಿಂದ ಅವರ ಸ್ಮರಣಶಕ್ತಿ, ಏಕಾಗ್ರತೆ ಹೆಚ್ಚುತ್ತದೆ. ೨೪೬ ವರ್ಷಗಳ ಹಿಂದೆ ಬ್ರಿಟಿಷರೊಡನೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಚೆನ್ನಮ್ಮಾಜಿ ನಮ್ಮ ಸಮಾಜದ ಅಭಿಮಾನ, ಚೆನ್ನಮ್ಮಾಜಿ ತ್ರಿಕಾಲ ಲಿಂಗಪೂಜೆಯನ್ನು ಮಾಡುತ್ತಿದ್ದರು. ಅವರ ಜತೆಗೆ ಅಕ್ಕಮಹಾದೇವಿ, ಬೆಳವಡಿ ಮಲ್ಲಮ್ಮ ನಮ್ಮ ಸಮಾಜದ ಹೆಮ್ಮೆ ಎಂದರು.ಹೋರಾಟ ಕೈಬಿಡಲ್ಲ: ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿಗೆ ಕೂಡಲಸಂಗಮದಿಂದ ಬೃಹತ್ ಪಾದಯಾತ್ರೆ ಮಾಡಿದ್ದು, ಇಡೀ ಜಗತ್ತಿಗೆ ಸಮಾಜದ ಸಂಘಟನೆಯನ್ನು ತೋರಿಸಿದಂತಾಗಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿಯೇ ಮೀಸಲಾತಿ ನೀಡಬೇಕಿತ್ತು, ಕೋವಿಡ್ನಿಂದ ಅದು ಸಾಧ್ಯವಾಗಲಿಲ್ಲ. ತದನಂತರ ಬಂದಂತಹ ಸರ್ಕಾರಕ್ಕೆ ಸಮಾಜದ ಮಕ್ಕಳ ಶಿಕ್ಷಣಕ್ಕಾಗಿ ೨ಎ ಪಡೆಯಲು ಅನೇಕ ಹೋರಾಟ ಮಾಡಲಾಗುತ್ತಿದೆ. ಸಮಾಜಕ್ಕೆ ಮೀಸಲಾತಿ ದೊರಕುವ ವರೆಗೂ ಹೋರಾಟ ಕೈಬಿಡಲ್ಲ ಎಂದು ಹೇಳಿದರು.
ಶಿರಹಟ್ಟಿ-ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಸಂಘಟನೆ: ಮುಂಬರುವ ದಿನಗಳಲ್ಲಿ ಶಿರಹಟ್ಟಿ-ಲಕ್ಷ್ಮೇಶ್ವರ ತಾಲೂಕುಗಳಲ್ಲಿ ವಾಸ್ತವ್ಯ ಮಾಡಿ ಸಮಾಜದ ಸಂಘಟನೆ ಮಾಡಲಾಗುವುದು. ಜತೆಗೆ ಬೃಹತ್ ಸಮಾವೇಶಗಳನ್ನು ಆಯೋಜಿಸಿ ರಾಜ್ಯಮಟ್ಟದ ನಾಯಕರನ್ನು ಕರೆಸಿ ಮೀಸಲಾತಿ ಹೋರಾಟಕ್ಕೆ ನಮ್ಮ ಶಕ್ತಿ ಪ್ರದರ್ಶನ ಏರ್ಪಡಿಸಲಾಗುವುದು ಎಂದರು.ಇದಕ್ಕೂ ಮೊದಲು ಕೊಟ್ರೇಶ ಅಕ್ಕೂರ ಅವರ ಮಹಾಮನೆಯಲ್ಲಿ ಶ್ರೀಗಳಿಂದ ವಿಶೇಷ ಪೂಜೆ ನೆರವೇರಿತು. ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಕಾರ್ಯಕ್ರಮ ಉದ್ಘಾಟಿಸಿದರು. ಪಂಚಮಸಾಲಿ ಸಂಘದ ತಾಲೂಕಾಧ್ಯಕ್ಷ ಬಿ.ಡಿ. ಪಲ್ಲೇದ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಿಜೆಪಿ ಮಂಡಲದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಸಿ.ಆರ್. ಪಾಟೀಲ, ಎಸ್.ಎಸ್. ಪಾಟೀಲ, ಚನ್ನವೀರಗೌಡ ತೆಗ್ಗಿನಮನಿ, ಅಶೋಕ ಬಳ್ಳಾರಿ, ದೇವರಾಜ ಮೇಟಿ, ಫಕ್ಕೀರೇಶ ಎಮ್ಮಿಯವರ, ಶೇಖರ ಹೈದರಿ, ಬಸವರಾಜ ಸಾಲಿ, ವಸಂತಗೌಡ ಪಾಟೀಲ, ಚನ್ನಬಸವನಗೌಡ ಪಾಟೀಲ, ಶಿವಪುತ್ರಪ್ಪ ನೆಲಗುಡ್ಡದ, ವಿಶ್ವನಾಥ ದಲಾಲಿ, ನಾಗರಾಜ ಗಡ್ಡಿ, ಬಸನಗೌಡ ಪಾಟೀಲ, ನಂದಾ ಪಲ್ಲೇದ, ಮುತ್ತಣ್ಣ ತೋಟದ, ಅಶೋಕ ವರವಿ, ಮಂಜು ಉಳ್ಳಾಗಡ್ಡಿ, ಸುರೇಶ ವರವಿ, ಮಹೇಶ ವರವಿ, ಮಹಾದೇವಪ್ಪ ಅಣ್ಣಿಗೇರಿ, ಗಂಗಾಧರ ಮೆಣಸಿನಕಾಯಿ, ಕಾಶಣ್ಣ ಗಿಡ್ಡವೀರಪ್ಪನವರ ಉಪಸ್ಥಿತರಿದ್ದರು.